ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಟಾಲಿವುಡ್ ನಟಿ ಅನುರಾಧಾ

ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿದ್ದ ಅನುರಾಧಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಫಿಲ್ಮ್ ನಗರ್‌ನಲ್ಲಿ ಅನುರಾಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಟಾಲಿವುಡ್ ನಟಿ ಅನುರಾಧಾ
Linkup
‘ಚೌಕಟ್ಟು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಸವಿ ಮಾದಪ್ಪ ಮಾಡಿಕೊಂಡ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ನಟಿಯ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿದ್ದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಫಿಲ್ಮ್ ನಗರ್‌ನಲ್ಲಿ ಅನುರಾಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಹೈದರಾಬಾದ್‌ನ ಫಿಲ್ಮ್‌ ನಗರ್‌ನಲ್ಲಿರುವ ಗ್ಯಾನಿ ಜೈಲ್ ಸಿಂಗ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಅನುರಾಧಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕು ದಿನಗಳಿಂದ ಮನೆಯಿಂದ ಹೊರಬರದ ಅನುರಾಧಾ ಅನುರಾಧಾ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ಹೊರಬಂದಿರಲಿಲ್ಲ. ಸಾಲದಕ್ಕೆ, ಅನುರಾಧಾ ನಿವಾಸದಿಂದ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಅಕ್ಕ-ಪಕ್ಕದವರು ಮನೆಯ ಮಾಲೀಕರ ಗಮನಕ್ಕೆ ತಂದರು. ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಪೊಲೀಸರು ಮನೆಗೆ ಭೇಟಿ ಕೊಟ್ಟಾಗ ಕೋಣೆಯಲ್ಲಿ ಅನುರಾಧಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಫ್ಯಾನ್‌ನಲ್ಲಿ ನೇತಾಡುತ್ತಿತ್ತು. ಯಾರೀ ಅನುರಾಧಾ? ಅನುರಾಧಾ ಮೂಲತಃ ಕುತುಬುಲ್ಲಾಪುರ ಜಿಲ್ಲೆಯ ಗಾಜುಲ ರಾಮ ರಾಮ್‌ನವರು. ತೆಲುಗಿನ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್‌ ಆಗಿ ಅನುರಾಧಾ ಕೆಲಸ ಮಾಡುತ್ತಿದ್ದರು. ನಟಿಯಾಗಬೇಕು ಎಂಬ ಆಸೆ ಹೊಂದಿದ್ದ ಅನುರಾಧಾ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಕಿರಣ್ ಜೊತೆಗೇ ಕಳೆದ ಮೂರು ತಿಂಗಳಿನಿಂದ ಗ್ಯಾನಿ ಜೈಲ್ ಸಿಂಗ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಅನುರಾಧಾ ವಾಸಿಸುತ್ತಿದ್ದರು. ಮೋಸ ಮಾಡಿದ ಕಿರಣ್? ‘’ಕಳೆದ ಆರು ವರ್ಷಗಳಿಂದ ಅನುರಾಧಾ ಮತ್ತು ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಅನುರಾಧಾ ಅವರನ್ನು ಮದುವೆಯಾಗುವುದಾಗಿ ಕಿರಣ್ ನಂಬಿಸಿದ್ದ. ಆ ನಂಬಿಕೆ ಮೇಲೆ ಕಿರಣ್ ಜೊತೆಗೆ ಒಂದೇ ಮನೆಯಲ್ಲಿ ವಾಸಿಸಲು ಅನುರಾಧಾ ಒಪ್ಪಿಕೊಂಡಿದ್ದರು. ಆದರೆ, ಅನುರಾಧಾಗೆ ಕೈ ಕೊಟ್ಟು ಬೇರೆ ಯುವತಿಯ ಜೊತೆಗೆ ಕಿರಣ್ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇದರಿಂದ ಮನನೊಂದಿದ್ದ ಅನುರಾಧಾ ಆತ್ಮಹತ್ಯೆ ಮಾಡಿಕೊಂಡಿರಬಹುದು’’ ಎಂದು ಅನುರಾಧಾ ಪೋಷಕರು ಮತ್ತು ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ. ಕಿರಣ್ ವಿರುದ್ಧ ಅನುರಾಧಾ ಪೋಷಕರು ಮತ್ತು ಸಹೋದರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಬಂಜಾರಾ ಹಿಲ್ಸ್ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು, ಕಿರಣ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಕನ್ನಡ ನಟಿ ಸವಿ ಮಾದಪ್ಪ ಆತ್ಮಹತ್ಯೆ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಬೇಕು, ಸಿನಿಮಾಟೋಗ್ರಫರ್ ಆಗಬೇಕು ಎಂಬ ಕನಸು ಹೊಂದಿದ್ದ ಕೊಡಗಿನ ಮೂಲದ ಸವಿ ಮಾದಪ್ಪ ನಿನ್ನೆ (ಸೆಪ್ಟೆಂಬರ್ 30) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕೈದು ಪುಟಗಳ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ನಟಿ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ಬಗ್ಗೆ ತಂದೆ ಪ್ರಭು ಮಾದಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರ ವಿರುದ್ಧ ಕುಂಬಳಗೋಡು ಪೊಲೀಸರಿಗೆ ಪ್ರಭು ಮಾದಪ್ಪ ದೂರು ನೀಡಿದ್ದಾರೆ. ‘’ಮಗಳ ಸಾವಿನ ಬಗ್ಗೆ ಅನುಮಾನ ಇದೆ. ಅಪಾರ್ಟ್‌ಮೆಂಟ್‌ನಲ್ಲಿ ಮಗಳು ಒಬ್ಬಳೇ ಇದ್ದಳು. ಬೆಳಗ್ಗೆ ಕಾಲ್ ಮಾಡಿ, ಕೊಡಗಿಗೆ ಬರೋದಾಗಿ ಹೇಳಿದ್ದಳು. ಮೂರು ದಿನ ಮನೆಯಲ್ಲಿ ಇರ್ತೀನಿ ಅಂತ ಮಗಳು ಹೇಳಿದ್ದಳು. ಯಾರೋ ಟಾರ್ಚರ್ ಕೊಟ್ಟಿರಬೇಕು ಎಂಬ ಅನುಮಾನ ಇದೆ. ಮನೆಯಲ್ಲಿ ಮಗಳ ಪೋನ್ ಇಲ್ಲ ಅನ್ನೋ ಮಾಹಿತಿ ಇದೆ. ಅಪಾರ್ಟ್‌ಮೆಂಟ್‌ನಲ್ಲಿ ದುಡ್ಡು ಇದೆಯೋ ಇಲ್ಲವೋ ನೋಡಬೇಕು’’ ಎಂದು ಪ್ರಭು ಮಾದಪ್ಪ ಹೇಳಿದ್ದಾರೆ.