ಮೆಟ್ರೋ ನಿಲ್ದಾಣಕ್ಕಾಗಿ ಮೆಟ್ರೋ ಫ್ಲೈ ಓವರ್‌ ಏರಿ ಜನರ ಪ್ರತಿಭಟನೆ; ನೆಲಮಂಗಲದ ಅಂಚೆಪಾಳ್ಯದಲ್ಲಿ ಧರಣಿ

ಮೆಟ್ರೋ ನಿಲ್ದಾಣಕ್ಕಾಗಿ ನೆಲಮಂಗಲ ಬಳಿಯ ಅಂಚೆಪಾಳ್ಯ ಗ್ರಾಮಸ್ಥರು ಮೆಟ್ರೋ ಪಿಲ್ಲರ್‌ ಏರಿ ಪ್ರತಿಭಟನೆ ನಡೆಸಿದ್ದು, ಬಿಎಂಆರ್‌ಸಿಎಲ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಪಿಲ್ಲರ್‌ ಏರಿದ್ದ ಯುವಕರನ್ನು ಪೊಲೀಸರು ಮನವೊಲಿಸಿ ಕೆಳಗಿಳಿಸಿದ್ದು, ಎನ್‌ಎಚ್‌-48ರ ಸರ್ವೀಸ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮೆಟ್ರೋ ನಿಲ್ದಾಣಕ್ಕಾಗಿ ಮೆಟ್ರೋ ಫ್ಲೈ ಓವರ್‌ ಏರಿ ಜನರ ಪ್ರತಿಭಟನೆ; ನೆಲಮಂಗಲದ ಅಂಚೆಪಾಳ್ಯದಲ್ಲಿ ಧರಣಿ
Linkup
(): ಮೆಟ್ರೋ ನಿಲ್ದಾಣಕ್ಕಾಗಿ ನೆಲಮಂಗಲ ಬಳಿಯ ಗ್ರಾಮಸ್ಥರು ಮೆಟ್ರೋ ಫ್ಲೈ ಓವರ್‌ ಏರಿ ನಡೆಸಿದ್ದಾರೆ. ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ಫ್ಲೈ ಓವರ್‌ಏರಿ ಮೆಟ್ರೋ ರೈಲ್ವೇ ಕಾರ್ಪೊರೇಷನ್‌ ಲಿಮಿಟೆಡ್‌ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮಾಡಿಕೊಡುವ ಭರವಸೆ ನೀಡಿ, ಈಗ ಏಕಾಏಕಿ ರಸ್ತೆ ನಿರ್ಮಾಣ ಮಾಡಲ್ಲ ಎಂದ ಬಿಎಂಆರ್‌ಸಿಎಲ್‌ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಕೇವಲ ಮೆಟ್ರೋ ಫ್ಲೈ ಓವರ್‌ ಏರಿದ್ದು ಮಾತ್ರವಲ್ಲದೇ ಮೆಟ್ರೋ ಹಳಿ ಮೇಲೆ ಯುವಕರು ನಿಂತು ಪ್ರತಿಭಟನೆ ನಡೆಸಿದ್ದಾರೆ. ಬಿಎಂಆರ್‌ಸಿಎಲ್‌ ಎಂಡಿ ಬರುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಮೆಟ್ರೋ ಫ್ಲೈ ಓವರ್‌ ಏರಿದ್ದ ಯುವಕರ ಮನವೊಲಿಸಿದ ಮಾದನಾಯಕನಹಳ್ಳಿ ಪೊಲೀಸರು ಯುವಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಹಣೆಗೆ ಕಪ್ಪು ಬಟ್ಟೆ ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿ 48 ಸರ್ವೀಸ್ ರಸ್ತೆಯಲ್ಲಿ ಕುಳಿತು ಅಂಚೆಪಾಳ್ಯ ಗ್ರಾಮದ ನೂರಾರು ಜನ ಮತ್ತೆ ಧರಣಿ ಕುಳಿತಿದ್ದು, ಸರ್ವೀಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಂ ಉಂಟಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಟ್ರಾಫಿಕ್‌ ನಿಯಂತ್ರಿಸಲು ಹರಸಾಹಸಪಟ್ಟರು. ಸ್ಥಳದಲ್ಲಿ ಮಾದನಾಯಕನಹಳ್ಳಿ ಪೊಲೀಸರು ಮೊಕ್ಕಾಂ ಹೂಡಿದ್ದು, ಪ್ರತಿಭಟನೆಯಲ್ಲಿ ಮಹಿಳೆಯರು ಭಾಗಿಯಾಗಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್‌ಸಿಎಲ್‌ ಮುಖ್ಯ ಇಂಜಿನಿಯರ್‌ ಕಲ್ಲಪ್ಪ ಭೇಟಿ ನೀಡಿ ಪ್ರತಿಭಟನಾನಿರತರ ಜೊತೆ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಡಬಲ್‌ ರೋಡ್‌ ಮುಖ್ಯ ಕಚೇರಿಗೆ ಮುಂದಿನ ಬುಧವಾರ ಸಭೆಗೆ ಬರುವಂತೆ ಗ್ರಾಮಸ್ಥರನ್ನು ಆಹ್ವಾನಿಸಿದ್ದಾರೆ.