ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಅಧಿಕಾರಿಗಳ ದಕ್ಷತೆಗೆ ಮಾರಕ: ಹೈಕೋರ್ಟ್

ಅಧಿಕಾರಿಗಳನ್ನು ವರ್ಗಾವಣೆ ಮಾಡುವ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಅಧಿಕಾರಿಗಳ ದಕ್ಷತೆ ಹಾಗೂ ಉತ್ತಮ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗೂ ಸಾರ್ವಜನಿಕ ಕಚೇರಿಗಳು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಅಧಿಕಾರಿಗಳ ದಕ್ಷತೆಗೆ ಮಾರಕ: ಹೈಕೋರ್ಟ್
Linkup
ಬೆಂಗಳೂರು: ಅಧಿಕಾರಿಗಳ ಅಥವಾ ನಿಯೋಜನೆಯಲ್ಲಿ ರಾಜಕೀಯ ವ್ಯಕ್ತಿಗಳ ಮೌಖಿಕ ಅಥವಾ ಲಿಖಿತ ಹಸ್ತಕ್ಷೇಪಗಳು ಸಾರ್ವಜನಿಕ ಕಚೇರಿಯನ್ನು ರಾಜಕೀಯಗೊಳಿಸುತ್ತದೆ ಮತ್ತು ದಕ್ಷತೆ ಹಾಗೂ ಉತ್ತಮ ಆಡಳಿತಕ್ಕೆ ಹಿನ್ನಡೆ ಉಂಟುಮಾಡುತ್ತದೆ ಎಂದು ಹೇಳಿದೆ. ವರ್ಗಾವಣೆಗೊಂಡಿದ್ದ () ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) ಡಿ ನವೀನ್ ಅವರ ಪರ ತೀರ್ಪು ನೀಡುವಾಗ ಈ ಹೇಳಿಕೆ ನೀಡಿದೆ. ಡಿ ನವೀನ್ ಅವರನ್ನು 2020ರ ಡಿಸೆಂಬರ್ 9ರಂದು ವರ್ಗಾವಣೆ ಮಾಡಿದ್ದರೂ 2021ರ ಏಪ್ರಿಲ್ 5ರವರೆಗೂ ಯಾವುದೇ ಹುದ್ದೆ ನೀಡಿರಲಿಲ್ಲ. ಅವರು ಬೆಸ್ಕಾಂನ ವರ್ತೂರು (O&M) ವಿಭಾಗದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಹಾಗೂ ಅವರಿಗೆ ಎಲ್ಲ ಸವಲತ್ತುಗಳನ್ನು ಒದಗಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. ನವೀನ್ ಅವರಿಗೆ ಯಾವುದೇ ಕರ್ತವ್ಯ ನಿಯೋಜನೆ ಮಾಡದೆ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡುವ ಡಿಸೆಂಬರ್ 9ರ ಆದೇಶವನ್ನು ಅಧಿಕಾರಿಗಳು ರದ್ದುಗೊಳಿಸಿದ್ದರು. ಸ್ಥಳೀಯ ಶಾಸಕ ಹಾಗೂ ಆಗಿನ ಸಚಿವ ಅವರ ರಾಜಕೀಯ ಪ್ರಭಾವದಿಂದ ಎಸ್ ಮಹಾದೇವ್ ಅವರನ್ನು ವರ್ತೂರು (O&M) ಬೆಸ್ಕಾಂನಲ್ಲಿ ಮುಂದುವರಿಸಲಾಗಿತ್ತು ಎಂದು ನವೀನ್ ಆರೋಪಿಸಿದ್ದರು. 2021ರ ಏಪ್ರಿಲ್ 5ರಂದು ಅವರನ್ನು ಕೊನೆಗೂ ರಾಜಾನುಕುಂಟೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಈ ಎಲ್ಲ ಆದೇಶಗಳನ್ನೂ ನವೀನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ, ವರ್ತೂರು ಬೆಸ್ಕಾಂ ವಿಭಾಗದಲ್ಲಿ ಎಸ್ ಮಹಾದೇವ ಅವರನ್ನು ಮುಂದುವರಿಸುವುದು ಹಾಗೂ ಅರ್ಜಿದಾರರನ್ನು ರಾಜಾನುಕುಂಟೆಗೆ ವರ್ಗಾವಣೆ ಮಾಡುವುದು ಅಕ್ರಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ಹಸ್ತಕ್ಷೇಪದ ಪರಿಣಾಮದಿಂದ ಸಂಪೂರ್ಣ ಪ್ರಕ್ರಿಯೆಯು ಕೆಟ್ಟಿದೆ. 2020ರ ಡಿಸೆಂಬರ್ 9ರಂದು ಅಥವಾ ಬೆಸ್ಕಾಂ ಹೊರಡಿಸಿದ ವರ್ಗಾವಣೆ ಆದೇಶದ ನಂತರದ ಎಲ್ಲ ನಿರ್ಧಾರಗಳೂ ಅಕ್ರಮವಾಗಿವೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಯಾವುದೇ ಸಿಬ್ಬಂದಿಯನ್ನು ಯಾವುದೇ ಎಸ್ಕಾಂಗೆ ವರ್ಗಾವಣೆ ಮಾಡಲು ಅಳವಡಿಸಿಕೊಂಡ ಅಭ್ಯಾಸವು ಬಹಳ ವಿಚಿತ್ರವಾಗಿದೆ ಎಂದು ಕೋರ್ಟ್ ಹೇಳಿದೆ. 'ಎಸ್ಕಾಂಗಳ ನಿಯಂತ್ರಣ ವ್ಯಾಪ್ತಿ ಒಳಗೆ ಬರುವ ಕಚೇರಿಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಆದೇಶವನ್ನು ಕೆಪಿಟಿಸಿಎಲ್ ಹೊರಡಿಸುತ್ತದೆ. ಬಳಿಕ ಎಸ್ಕಾಂಗಳು ಕೆಪಿಟಿಸಿಎಲ್ ವರ್ಗಾವಣೆ ಮಾಡಿದ ಅಧಿಕಾರಿಯನ್ನು ಯಾವ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು ಎಂಬ ಬಗ್ಗೆ ವರ್ಗಾವಣೆಯ ಆದೇಶವನ್ನು ಹೊರಡಿಸುತ್ತವೆ. ಸಂಬಂಧಿತ ಎಸ್ಕಾಂಗಳು ಅಂತಹ ಆದೇಶ ಹೊರಡಿಸುವವರೆಗೂ, ಕೆಪಿಟಿಸಿಎಲ್‌ನಿಂದ ವರ್ಗಾವಣೆಗೆ ಒಳಗಾದ ಅಧಿಕಾರಿಗಳು ಯಾವುದೇ ಕೆಲಸವಿಲ್ಲದೆ ಅತಂತ್ರವಾಗಿ ಇರಬೇಕಾಗುತ್ತದೆ' ಎಂದು ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ವಿದ್ಯುತ್ ಪ್ರಸರಣ ನಿರ್ವಹಣೆ ಕಾರ್ಯವನ್ನು ವಿವಿಧ ಎಸ್ಕಾಂಗಳ ಅಡಿಯಲ್ಲಿ ವಿಭಾಗಿಸಲಾಗಿದೆ. ಈ ಎಲ್ಲ ಎಸ್ಕಾಂಗಳೂ ಮಾತೃ ಸಂಸ್ಥೆ ಕೆಪಿಟಿಸಿಎಲ್ ಅಧೀನದಲ್ಲಿ ಬರುತ್ತವೆ. ಹೀಗಾಗಿ ಇಲ್ಲಿ ವರ್ಗಾವಣೆ ಚಟುವಟಿಕೆಗಳು ಎರಡು ಹಂತಗಳಲ್ಲಿ ನಡೆಯುತ್ತಿದೆ.