ಸರ್ಕಾರದ ವಿಶೇಷ ಅಧಿಕಾರಿಯೆಂದು ನಂಬಿಸಿ ವಂಚಿಸುತ್ತಿದ್ದ ಬೆಂಗಳೂರು ಬಾಳೆಕಾಯಿ ವ್ಯಾಪಾರಿಯ ಬಂಧನ!

ಐಎಎಸ್‌, ಐಪಿಎಸ್‌, ಕೆಎಎಸ್‌ ಸೇರಿದಂತೆ ನಾನಾ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಡುವುದು ಹಾಗೂ ಸರಕಾರಿ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ವಸೂಲಿ ಮಾಡಿ ವಂಚಿಸಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ರಾಜ್ಯ ಸರಕಾರ ಸಚಿವಾಲಯದ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.

ಸರ್ಕಾರದ ವಿಶೇಷ ಅಧಿಕಾರಿಯೆಂದು ನಂಬಿಸಿ ವಂಚಿಸುತ್ತಿದ್ದ ಬೆಂಗಳೂರು ಬಾಳೆಕಾಯಿ ವ್ಯಾಪಾರಿಯ ಬಂಧನ!
Linkup
: ರಾಜ್ಯ ಸರಕಾರ ಸಚಿವಾಲಯದ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಐಎಎಸ್‌, ಐಪಿಎಸ್‌, ಕೆಎಎಸ್‌ ಸೇರಿದಂತೆ ನಾನಾ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಡುವುದು ಹಾಗೂ ಸರಕಾರಿ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ವಸೂಲಿ ಮಾಡಿ ವಂಚಿಸಿದ್ದವನನ್ನು ಬಂಧಿಸಿದ್ದಾರೆ. ಸಿಸಿಬಿ ವಿಭಾಗದ ಪೊಲೀಸ್‌ ಇನ್ಸ್‌ಪೆಕ್ಟರ್‌ ಭರತ್‌ ನೀಡಿದ ದೂರಿನ ಮೇರೆಗೆ ಸರಕಾರದ ನಕಲಿ ವಿಶೇಷ ಅಧಿಕಾರಿ ಆರ್‌ಆರ್‌ ನಗರದ ಬಿಇಎಂಎಲ್‌ ಲೇಔಟ್‌ನ ಉದಯ ಪ್ರಭು(34) ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯಿಂದ 1.20 ಲಕ್ಷ ರೂ. ನಗದು, 1 ಲ್ಯಾಪ್‌ಟಾಪ್‌, 4 ಐ-ಫೋನ್‌, ನಕಲಿ ಗುರುತಿನ ಚೀಟಿ, 1 ಇನೋವಾ ಕಾರು, 1 ಜಾಗ್ವಾರ್‌ ಕಾರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಯು ಚಿಕ್ಕಬಳ್ಳಾಪುರ ಮೂಲದ ಮೈಲಸಂದ್ರದಿಂದ ಬಂದು ಆರ್‌ಆರ್‌ನಗರದ ಬಿಇಎಂಎಲ್‌ ಲೇಔಟ್‌ನ 7ನೇ ಹಂತದ ವಾಟರ್‌ ಟ್ಯಾಂಕ್‌ ಬಳಿ ವಾಸವಿದ್ದ. ಜೀವನ ನಿರ್ವಹಣೆಗಾಗಿ ಉದಯ್‌ ಪ್ರಭು ಕಾಟನ್‌ಪೇಟೆಯಲ್ಲಿ ಬಾಳೆಕಾಯಿ ಮಂಡಿ ನಡೆಸುತ್ತಿದ್ದ ಎಂದು ಹೇಳಿದರು. ಕರ್ನಾಟಕ ಸರಕಾರದ ಫಲಕವಿರುವ ಕಾರು ಬಳಕೆ! ಜನರನ್ನು ವಂಚಿಸಲೆಂದೇ ಬಿಳಿ ಇನ್ನೋವಾ ಕಾರಿಗೆ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಕರ್ನಾಟಕ ಸರಕಾರ ಎಂದು ಫಲಕ ಹಾಕಿಕೊಂಡಿದ್ದ. ಅಲ್ಲದೇ, ಕರ್ನಾಟಕ ಸರಕಾರದ ಲಾಂಛನ ಕೂಡ ಹಾಕಿಕೊಂಡು ಓಡಾಡುತ್ತಿದ್ದ. ಸರಕಾರ ಅಧಿಕಾರಿಗಳನ್ನು ನಂಬಿಸಲು ಸರಕಾರದ ವಿಶೇಷ ಅಧಿಕಾರಿ ಎಂಬ ನಕಲಿ ಗುರುತಿನ ಚೀಟಿ ತೋರಿಸಿ ವಂಚಿಸುತ್ತಿದ್ದ ಎಂಬುದು ಆರೋಪಿಯ ಬಂಧನದಿಂದ ಪತ್ತೆಯಾಗಿದೆ. ಆರೋಪಿ ಬಂಧನ! ಆರೋಪಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಬಗ್ಗೆ ತಿಳಿದಿದ್ದ ಸಿಸಿಬಿ ಇನ್‌ಸ್ಪೆಕ್ಟರ್‌ ಭರತ್‌, ತನ್ನ ನೇತೃತ್ವದ ತಂಡದೊಂದಿಗೆ ಡಿ.14ರಂದು ಉದಯ್‌ ಪ್ರಭು ಮನೆಗೆ ತೆರಳಿ ಪರಿಶೀಲಿಸಿದ್ದರು. ಆ ವೇಳೆ ತನ್ನ ಇನ್ನೋವಾ ಕಾರಿನಲ್ಲಿಕರ್ನಾಟಕ ಸರಕಾರ ಎಂದು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವುದು ಕಂಡು ಬಂದಿತ್ತು. ಈ ಬಗ್ಗೆ ವಿಚಾರಿಸಿದಾಗ ಇದು ತನ್ನ ಸ್ವಂತ ವಾಹನವಾಗಿದ್ದು, ಪತ್ನಿ ಹೆಸರಿನಲ್ಲಿ ಇರುವುದಾಗಿ ಹೇಳಿದ್ದ. ಆತನ ಬಳಿಯಿದ್ದ ನಕಲಿ ಗುರುತಿನ ಚೀಟಿಯನ್ನು ತೋರಿಸಿ, ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಅಧಿಕಾರಿ ಎಂದು ಹೇಳಿದ್ದ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಕೇಳಿದಾಗ ಸಮರ್ಪಕವಾಗಿ ಉತ್ತರಿಸದೇ ಗೊಂದಲದ ಹೇಳಿಕೆ ಕೊಟ್ಟಿದ್ದ. ಖಾಸಗಿ ವಾಹನದಲ್ಲಿ ಕರ್ನಾಟಕ ಸರಕಾರ ಎಂದು ಬರೆಯಿಸಿ, ಲಾಂಛನ ಹಾಕಿಸಿಕೊಂಡಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಆತನ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಅಲ್ಲದೇ, ಸಿಸಿಬಿ ಪೊಲೀಸರು ಆರೋಪಿಯ ಇನೋವಾ ಕಾರಿನ ಡ್ಯಾಷ್‌ಬೋರ್ಡ್‌ ಪರಿಶೀಲಿಸಿದಾಗ ಅದರಲ್ಲಿಮ1.20 ಲಕ್ಷ ರೂ. ನಗದು, 3 ಆ್ಯಪಲ್‌ ಕಂಪನಿ ಮೊಬೈಲ್‌ಗಳು, 1 ಲ್ಯಾಪ್‌ಟಾಪ್‌ ಪತ್ತೆಯಾಗಿತ್ತು. ಮಾಜಿ ಸಿಎಂವೊಬ್ಬರ ತಂಗಿ ಪುತ್ರನ ಸ್ನೇಹಿತ? ವಿಚಾರಣೆ ವೇಳೆ ಉದಯ್‌ ಪ್ರಭು ಮಾಜಿ ಸಿಎಂ ಒಬ್ಬರ ತಂಗಿಯ ಮಗನ ಸ್ನೇಹಿತ ಎಂದು ಸುಳ್ಳು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಕೆಂಗೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಎಷ್ಟು ಜನರಿಂದ ಹಣ ಪಡೆದು ವಂಚಿಸಿದ್ದಾನೆ ? ಎಷ್ಟು ಜನ ಆರೋಪಿಗೆ ಹಣ ನೀಡಿದ್ದಾರೆ ? ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇನ್ಸ್‌ಪೆಕ್ಟರ್‌ವೊಬ್ಬರಿಗೆ ವಂಚನೆ? ಆರೋಪಿ ಉದಯ್‌ ಪ್ರಭು, ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್‌ವೊಬ್ಬರನ್ನು ವರ್ಗಾವಣೆ ಮಾಡಿಸಿಕೊಡುವುದಾಗಿ ಹಣ ಪಡೆದು ವಂಚಿಸಿರುವುದು ಕೇಳಿಬಂದಿದೆ. ಅಲ್ಲದೇ, ಇದೇ ರೀತಿ 8ರಿಂದ 10 ಮಂದಿಗೆ ವಂಚಿಸಿ ಕೋಟ್ಯಂತರ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಹಲವು ಮೂಲಗಳಿಂದ ತಿಳಿದುಬಂದಿದೆ.