ಶಾಂತಿಯುತವಾಗಿ ನಡೆದ ಅಪ್ಪು ಅಂತ್ಯಸಂಸ್ಕಾರ; ಅಭಿಮಾನಿಗಳ ಸಂಯಮದ ನಡೆಗೆ ವ್ಯಾಪಕ ಪ್ರಶಂಸೆ

ಅಪ್ಪು ಅಂತ್ಯಸಂಸ್ಕಾರದಲ್ಲಿ ಯಾರೂ ಅತಿರೇಕದಿಂದ ವರ್ತಿಸಲಿಲ್ಲ. ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ನಿಂತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಅಂತ್ಯಸಂಸ್ಕಾರವೂ ಸುಸೂತ್ರವಾಗಿ ನಡೆಯಿತು. ಅಪ್ಪು ಅಭಿಮಾನಿಗಳು ಶಾಂತಿಪ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇದರ ಜತೆಗೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಮೇರು ನಟನ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲ ಅಧಿಕಾರಿಗಳ ಬಗ್ಗೆಯೂ ಸಾರ್ವಜನಿಕರು ಮತ್ತು ಚಲನಚಿತ್ರರಂಗದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಶಾಂತಿಯುತವಾಗಿ ನಡೆದ ಅಪ್ಪು ಅಂತ್ಯಸಂಸ್ಕಾರ; ಅಭಿಮಾನಿಗಳ ಸಂಯಮದ ನಡೆಗೆ ವ್ಯಾಪಕ ಪ್ರಶಂಸೆ
Linkup
ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅಂತಿಮ ನಮನಕ್ಕೆ ಲಕ್ಷೋಪಲಕ್ಷ ಮಂದಿ ಅಭಿಮಾನಿಗಳು ಹರಿದು ಬಂದರೂ ಬಹಳ ಸಂಯಮದಿಂದ ನಡೆದುಕೊಂಡರು. ಯಾರೂ ಅತಿರೇಕದಿಂದ ವರ್ತಿಸಲಿಲ್ಲ. ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ನಿಂತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಅಂತ್ಯಸಂಸ್ಕಾರವೂ ಸುಸೂತ್ರವಾಗಿ ನಡೆಯಿತು. ಅಪ್ಪು ಅಭಿಮಾನಿಗಳು ಶಾಂತಿಪ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇದರ ಜತೆಗೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಮೇರು ನಟನ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರಕಾರ, ಅಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆ ಬಗ್ಗೆಯೂ ಸಾರ್ವಜನಿಕರು ಮತ್ತು ಚಲನಚಿತ್ರರಂಗದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪಾಠ ಕಲಿಸಿದ ಹಿಂದಿನ ಕಹಿ ಘಟನೆಗಳು :ಕಳೆದ 16 ವರ್ಷಗಳಿಂದೀಚೆಗೆ ರಾಜ್ಯ ಮತ್ತು ಚಲನಚಿತ್ರ ರಂಗ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಡಾ.ಅಂಬರೀಶ್‌ ಹಾಗೂ ಅ.29ರಂದು ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ನಾಲ್ಕು ಅಮೂಲ್ಯ ರತ್ನಗಳನ್ನು ಕಳೆದುಕೊಂಡಿದೆ. 2006ರ ಏಪ್ರಿಲ್‌ 12ರಂದು ಡಾ.ರಾಜ್‌ಕುಮಾರ್‌ ಅವರು ಮೃತಪಟ್ಟಾಗ ಬೆಂಗಳೂರು ನಗರದಲ್ಲಿ ಭಾರಿ ಗಲಭೆ ನಡೆದಿತ್ತು. ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡುವುದರಿಂದ ಹಿಡಿದು ಅಂತ್ಯಕ್ರಿಯೆ ಆಗುವವರೆಗೂ ಭಾರಿ ಗಲಭೆ ಸಂಭವಿಸಿತ್ತು. ಅಂತ್ಯಕ್ರಿಯೆಯಲ್ಲಿ ಡಾ.ರಾಜ್‌ಕುಮಾರ್‌ ಅವರ ಕುಟುಂಬಸ್ಥರು ಪಾಲ್ಗೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳು, ಪೆಟ್ರೋಲ್‌ ಬಂಕ್‌ಗಳಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು, ವಾಹನಗಳನ್ನು ಸುಟ್ಟು ಮತ್ತು ಕಟ್ಟಡಗಳ ಗಾಜುಗಳನ್ನು ಒಡೆದು ಹಾಕಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹಲವು ಬಾರಿ ಲಾಠಿ ಚಾರ್ಜ್‌ ಮಾಡಿದ್ದರು ಮತ್ತು ಗೋಲಿಬಾರ್‌ನಲ್ಲಿ ಹಲವು ಮಂದಿ ಜೀವ ಬಿಟ್ಟರು. ಹಲವರು ಗಾಯಗೊಂಡ್ದಿರು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಕೂಡ ಸಾಕಷ್ಟು ನೋವುಂಡರು. ನಂತರ, 2009ರ ಡಿಸೆಂಬರ್‌ 30ರಂದು ನಟ ವಿಷ್ಣುವರ್ಧನ್‌ ಅವರು ಮೃತಪಟ್ಟ ಸಂದರ್ಭದಲ್ಲೂ ಇದೇ ಘಟನೆಗಳು ಮರುಕಳಿಸಿದವು. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ದುಷ್ಕರ್ಮಿಗಳು, ಗಲಭೆ ಸೃಷ್ಟಿಸಿ, ವಾಹನಗಳನ್ನು ಸುಟ್ಟು ಹಾಕಿ, ರೆಸ್ಟೋರೆಂಟ್‌, ಅಂಗಡಿ, ಮಳಿಗೆಗಳ ಗಾಜುಗಳನ್ನು ಪುಡಿಪುಡಿ ಮಾಡಿ ಅವಾಂತರ ಸೃಷ್ಟಿಸಿದ್ದರು. ಈ ಎಲ್ಲಾ ಘಟನೆಗಳಿಂದ ಎಚ್ಚೆತ್ತುಕೊಂಡ ರಾಜ್ಯ ಸರಕಾರ, ಖ್ಯಾತನಾಮರು ಮೃತಪಟ್ಟಾಗ ಪೊಲೀಸ್‌ ಇಲಾಖೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು, ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲು ಒತ್ತು ನೀಡಿತು. ಹಾಗಾಗಿ, 2018ರ ನವೆಂಬರ್‌ 24ರಂದು ನಟ ಅಂಬರೀಶ್‌ ಅವರ ಮೃತಪಟ್ಟ ವೇಳೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಅಂತ್ಯಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಸೂರ್ಯ ಮೂಡುವುದರೊಳಗೆ ಸ್ಥಳಕ್ಕೆ ತಲುಪಿದ ಮೆರವಣಿಗೆನಗರದ ಹೃದಯ ಭಾಗದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ಹಗಲಿರುಳೆನ್ನದೆ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖುದ್ದು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಸ್ಥಿತಿಯನ್ನು ನಿಭಾಯಿಸಿದರು. ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದ್ದ ಕಾರಣ, ಬೆಂಗಳೂರು ನಗರದಾದ್ಯಂತ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಿಡಿಗೇಡಿಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಕಾರಣದಿಂದ ಶನಿವಾರ ಸಂಜೆ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು. ಪಾರ್ಥಿವ ಶರೀರದ ಮೆರವಣಿಗೆ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ದೊಡ್ಡ ಗುಂಪಾಗಿ ಅವಾಂತರ ಸೃಷ್ಟಿಸಬಹುದು ಎಂಬುದನ್ನು ಅರಿತ ಸರಕಾರ, ಭಾನುವಾರ ಮುಂಜಾನೆ 5ಕ್ಕೆ ಮೆರವಣಿಗೆ ಆರಂಭಿಸಿ, ಸೂರ್ಯ ಮೂಡುವುದರ ಒಳಗೆ ಅಂತ್ಯಕ್ರಿಯೆ ನಡೆಯಬೇಕಿದ್ದ ಕಂಠೀರವ ಸ್ಟುಡಿಯೊ ತಲುಪಲಾಯಿತು. ಭದ್ರತೆ ಮತ್ತು ಶಾಂತಿಯು ಅಂತ್ಯಕ್ರಿಯೆ ನಡೆಸುವ ಸಲುವಾಗಿ ಕೇವಲ ಗಣ್ಯರು ಮತ್ತು ಡಾ.ರಾಜ್‌ಕುಮಾರ್‌ ಅವರ ಕುಟುಂಬದವರಿಗೆ ಕಂಠೀರವ ಸ್ಟುಡಿಯೋ ಒಳಗೆ ಅವಕಾಶ ನೀಡಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಕಂಠೀರವ ಸ್ಟುಡಿಯೋ ಹೊರಗೆ ಬೃಹತ್‌ ಎಲ್‌ಇಡಿ ಪರದೆಗಳನ್ನು ನಿರ್ಮಿಸಿ, ನೇರ ಪ್ರಸಾರ ಮಾಡಲಾಯಿತು. ಮಂಗಳವಾರದವರೆಗೆ ನಿಷೇದಾಜ್ಞೆಡಾ.ರಾಜ್‌ಕುಮಾರ್‌ ಅವರ ಮೃತಪಟ್ಟ ವೇಳೆ ಅವರು ಕುಟುಂಬ ಸದಸ್ಯರಿಗೆ ಉತ್ತರ ಕ್ರಿಯೆ ಕಾರ್ಯಗಳನ್ನು ನಡೆಸಲು ಅಭಿಮಾನಿಗಳು ಬಿಟ್ಟಿರಲಿಲ್ಲ. ಕೆಲವರು ಸಮಾಧಿಯನ್ನು ಅಗೆಯಲು ಯತ್ನಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಅಪ್ಪು ಅವರ ಉತ್ತರ ಕ್ರಿಯೆಗಳಿಗೆ ಯಾವುದೇ ತೊಂದರೆಯಾಗದಂತೆ ಕಂಠೀರವ ಸ್ಟುಡಿಯೋ ಸುತ್ತಮತ್ತು ನ.2ರ ಮಂಗಳವಾರದವರೆಗೆ ಸರಕಾರ ನಿಷೇಧಾಜ್ಞೆ ವಿಧಿಸಿದೆ. ನಂತರ, ಸಾರ್ವಜನಿಕರು ಮತ್ತು ಅಭಿಮಾನಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ.