ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ: ಬ್ರಿಟಿಷರ ಕಾಲದ ಸುರಂಗ ಮಾರ್ಗ ಪತ್ತೆ

ಸ್ವಾತಂತ್ರ್ಯ ಹೋರಾಟಗಾರರನ್ನು ಕೆಂಪುಕೋಟೆಯಿಂದ ಕರೆತರಲು ಬಳಸುತ್ತಿದ್ದ ಸುರಂಗ ಮಾರ್ಗ ಪತ್ತೆಯಾಗಿದೆ. ಇದು ದಿಲ್ಲಿಯ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುತ್ತಿತ್ತು ಎಂದು ಸ್ಪೀಕರ್ ರಾಮ್ ವಿಕಾಸ್ ಗೋಯಲ್ ತಿಳಿಸಿದ್ದಾರೆ.

ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ: ಬ್ರಿಟಿಷರ ಕಾಲದ ಸುರಂಗ ಮಾರ್ಗ ಪತ್ತೆ
Linkup
ಹೊಸದಿಲ್ಲಿ: ದಿಲ್ಲಿಯ ವಿಧಾನಸಭೆಯಲ್ಲಿ ಸುರಂಗ ಸ್ವರೂಪದ ರಚನೆಯೊಂದು ಗುರುವಾರ ಪತ್ತೆಯಾಗಿದೆ. ವಿಧಾನಸಭೆಯಿಂದ ಸುರಂಗವೊಂದು ಕೆಂಪುಕೋಟೆಗೆ ಸಂಪರ್ಕಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸಾಗಿಸುವಾಗ ಪ್ರತೀಕಾರದ ದಾಳಿಗಳನ್ನು ತಪ್ಪಿಸಲು ಈ ಬಳಸುತ್ತಿದ್ದರು ಎಂದು ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ತಿಳಿಸಿದ್ದಾರೆ. 'ನಾನು 1993ರಲ್ಲಿ ಶಾಸಕನಾಗಿದ್ದಾಗ ಇಲ್ಲಿ ಸುರಂಗವೊಂದಿದ್ದು, ಅದು ಜತೆ ಸಂಪರ್ಕ ಸಾಧಿಸುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಅದರ ಇತಿಹಾಸವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದೆ. ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ' ಎಂದಿದ್ದಾರೆ. 'ನಮಗೆ ಈಗ ಸುರಂಗದ ಪ್ರವೇಶ ದ್ವಾರ ದೊರಕಿದೆ. ಆದರೆ ಅದನ್ನು ಇನ್ನಷ್ಟು ಮುಂದೆ ಅಗೆಯುತ್ತಾ ಹೋಗುವುದಿಲ್ಲ. ಏಕೆಂದರೆ ಸುರಂಗದ ಎಲ್ಲ ಮಾರ್ಗಗಳೂ ಮೆಟ್ರೋ ಯೋಜನೆಗಳು ಹಾಗೂ ಒಳಚರಂಡಿ ಯೋಜನೆಗಳಿಂದಾಗಿ ನಾಶವಾಗಿವೆ' ಎಂದು ತಿಳಿಸಿದ್ದಾರೆ. ಕೇಂದ್ರ ಶಾಸನಸಭೆಯಾಗಿ ಬಳಸುತ್ತಿದ್ದ ಕಟ್ಟಡವನ್ನೇ ಈಗ ದಿಲ್ಲಿ ವಿಧಾನಸಭೆಯನ್ನಾಗಿ ಬಳಸಲಾಗುತ್ತಿದೆ. ಬ್ರಿಟಿಷರು ರಾಜಧಾನಿಯನ್ನು ಕೋಲ್ಕತಾದಿಂದ ದಿಲ್ಲಿಗೆ ವರ್ಗಾಯಿಸಿದ ಬಳಿಕ 1926ರಲ್ಲಿ ಇದನ್ನು ನ್ಯಾಯಾಲಯವನ್ನಾಗಿ ಪರಿವರ್ತಿಸಿತ್ತು. ಆಗ ಸ್ವಾತಂತ್ರ್ಯ ಹೋರಾಟಗಾರರನ್ನು ಕೆಂಪುಕೋಟೆಯಿಂದ ಸುರಂಗ ಮಾರ್ಗದ ಮೂಲಕ ನೇರವಾಗಿ ಕೋರ್ಟ್‌ಗೆ ತರಲಾಗುತ್ತಿತ್ತು ಎಂದು ಹೇಳಿದ್ದಾರೆ. 'ಇಲ್ಲಿ ಮರಣದಂಡನೆ ಕೊಠಡಿ ಇರುವುದರ ಬಗ್ಗೆ ನಮಗೆಲ್ಲ ತಿಳಿದಿದೆ. ಆದರೆ ಎಂದಿಗೂ ಅದನ್ನು ತೆರೆದಿರಲಿಲ್ಲ. ಈಗ ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿದೆ. ಹೀಗಾಗಿ ನಾನು ಆ ಕೊಠಡಿಯನ್ನು ಪರಿಶೀಲಿಸಲು ಬಯಸಿದ್ದೆ. ಆ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಅವರ ಸ್ಮಾರಕವನ್ನಾಗಿ ಬದಲಿಸಲು ಬಯಸಿದ್ದೇನೆ' ಎಂದಿದ್ದಾರೆ. ದಿಲ್ಲಿ ವಿಧಾನಸಭೆಯು ಭಾರತದ ಸ್ವಾತಂತ್ರ್ಯದೊಂದಿಗೆ ಸಂಬಂಧ ಹೊಂದಿರುವ ಕಾರಣ, ಮುಂದಿನ ಸಂದರ್ಭದಿಂದ ಗಲ್ಲು ಕೊಠಡಿಯನ್ನು ಪ್ರವಾಸಿಗರ ವೀಕ್ಷಣೆಗೆ ತೆರೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಈಗಾಗಲೇ ಕೆಲಸಗಳು ಆರಂಭವಾಗಿವೆ ಎಂದು ಮಾಹಿತಿ ನೀಡಿದ್ದಾರೆ. 'ಈ ಪ್ರದೇಶವು ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಶ್ರೀಮಂತ ಇತಿಹಾಸ ಹೊಂದಿದೆ. ನಮ್ಮ ಇತಿಹಾಸದ ಪ್ರತಿಫಲವನ್ನು ಪ್ರವಾಸಿಗರು ಹಾಗೂ ಸಂದರ್ಶಕರು ಪಡೆದುಕೊಳ್ಳುವಂತಹ ಸ್ವರೂಪದಲ್ಲಿ ಅದನ್ನು ನವೀಕರಿಸಲು ಬಯಸಿದ್ದೇವೆ' ಎಂದಿದ್ದಾರೆ.