'ವಿಜಯಾನಂದ' ಬಯೋಪಿಕ್‌ನಲ್ಲಿ 'ಬ್ರಹ್ಮಗಂಟು' ನಟ ಭರತ್‌ ಬೋಪಣ್ಣ; ಪಾತ್ರದ ಫಸ್ಟ್ ಲುಕ್ ರಿಲೀಸ್!

ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ 'ವಿಜಯಾನಂದ' ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನಡೆದಿತ್ತು. ಇದೀಗ ಆ ಚಿತ್ರದ ಒಂದು ಫಸ್ಟ್ ಲುಕ್ ಲಾಂಚ್ ಆಗಿದೆ. ಚಿತ್ರದಲ್ಲಿ ಭರತ್ ಬೋಪಣ್ಣ ನಟಿಸುತ್ತಿದ್ದು, ಅವರ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

'ವಿಜಯಾನಂದ' ಬಯೋಪಿಕ್‌ನಲ್ಲಿ 'ಬ್ರಹ್ಮಗಂಟು' ನಟ ಭರತ್‌ ಬೋಪಣ್ಣ; ಪಾತ್ರದ ಫಸ್ಟ್ ಲುಕ್ ರಿಲೀಸ್!
Linkup
ಕನ್ನಡ ಕಿರುತೆರೆಯಲ್ಲಿ 'ರಾಧಾ ರಮಣ', 'ಬ್ರಹ್ಮಗಂಟು' ಮುಂತಾದ ಧಾರಾವಾಹಿಗಳಿಂದ ಫೇಮಸ್ ಆದವರು ನಟ ಭರತ್ ಬೋಪಣ್ಣ. ಅದರಲ್ಲೂ 'ಬ್ರಹ್ಮಗಂಟು' ಧಾರಾವಾಹಿಯ ಲಕ್ಕಿ ಪಾತ್ರ ಅವರಿಗೆ ಸಿಕ್ಕಾಪಟ್ಟೆ ಖ್ಯಾತಿ ತಂದುಕೊಟ್ಟಿತ್ತು. ಸದ್ಯ ಕಿರುತೆರೆಯ ಜೊತೆಗೆ ಸಿನಿಮಾರಂಗಕ್ಕೂ ಭರತ್ ಕಾಲಿಟ್ಟಿದ್ದಾರೆ. ಈಚೆಗೆ ಅವರ ನಟನೆಯ '' ಸಿನಿಮಾ ಸೆಟ್ಟೇರಿತ್ತು. ಅದರಲ್ಲಿ ಅವರು ಡಾ. ವಿಜಯ್ ಸಂಕೇಶ್ವರ ಅವರ ಪುತ್ರ, ಉದ್ಯಮಿ ಆನಂದ್ ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್‌ ಆಗಿದೆ. ಆನಂದ್ ಸಂಕೇಶ್ವರ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್‌ಇಂದು (ನ.14) ಆನಂದ್ ಸಂಕೇಶ್ವರ ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಅವರ ಪಾತ್ರದ ಫಸ್ಟ್‌ ಲುಕ್ ರಿಲೀಸ್ ಮಾಡಿದೆ. ಇನ್ನು, ಭರತ್ ಕರಿಯರ್‌ಗೆ 'ವಿಜಯಾನಂದ' ದೊಡ್ಡ ತಿರುವು ಅಂತಲೇ ಹೇಳಬಹುದು. ಆ ಬಗ್ಗೆ ಮಾತನಾಡುವ ಅವರು, 'ಡಾ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಅವರ ಪಾತ್ರ ನಾನಿಲ್ಲಿ ನಿರ್ವಹಿಸುತ್ತಿದ್ದೇನೆ. ಇಲ್ಲಿ ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಸಿನಿಮಾದ ಮುಹೂರ್ತ ಸಮಾರಂಭದ ದಿನ ವಿಜಯ ಸಂಕೇಶ್ವರ ಅವರ ಪತ್ನಿ ಸೇರಿದಂತೆ ಅವರ ಫ್ಯಾಮಿಲಿಯ ಅನೇಕರು, 'ನಿಜವಾಗಿಯೂ ನೀವು ಆನಂದ್ ಸಂಕೇಶ್ವರರಂತೆ ಕಾಣುತ್ತೀರಿ' ಎಂದು ಹೇಳಿದರು, ಅದು ನನಗೆ ದೊಡ್ಡ ಕಾಂಪ್ಲಿಮೆಂಟ್ ಆಗಿದೆ. ಆನಂದ್ ಸಂಕೇಶ್ವರರ ಅವರೇ ಈ ಸಿನಿಮಾದ ನಿರ್ಮಾಪಕರಾಗಿರುವುದರಿಂದ, ಅವರೊಂದಿಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೇನೆ. ಇದರಿಂದ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಹಕಾರಿಯಾಗಿದೆ' ಎಂದಿದ್ದಾರೆ. ಸಾರಿಗೆ, ಪತ್ರಿಕೋದ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿದ ಸಿನಿಮಾ 'ವಿಜಯಾನಂದ' ಚಿತ್ರಕ್ಕೆ ಈಚೆಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಯುವ ಪ್ರತಿಭಾವಂತ ನಟ ನಿಹಾಲ್ ಅಭಿನಯಿಸುತ್ತಿದ್ದಾರೆ. ಅವರ ಪತ್ನಿಯಾಗಿ ಸಿರಿ ಪ್ರಹ್ಲಾದ್ ಕಾಣಿಸಿಕೊಳ್ಳಲಿದ್ದಾರೆ. ಆನಂದ ಸಂಕೇಶ್ವರ ಮತ್ತು ಅವರ ಪತ್ನಿ ವಾಣಿ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸಂಕೇಶ್ವರ ಅವರ ತಂದೆ-ತಾಯಿ ಪಾತ್ರಗಳಲ್ಲಿ ಅನಂತ್ ನಾಗ್ ಮತ್ತು ವಿನಯಾ ಪ್ರಸಾದ್ ನಟಿಸಲಿದ್ದಾರೆ. 'ಕ್ರೇಜಿ ಸ್ಟಾರ್' ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ರವಿಚಂದ್ರನ್, 'ಗೋಲ್ಡನ್ ಸ್ಟಾರ್' ಗಣೇಶ್ ಆಗಮಿಸಿ, ಹಾರೈಸಿದ್ದರು. ಸದ್ಯ ಹುಬ್ಬಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಹಿಂದೆ 'ಟ್ರಂಕ್' ಸಿನಿಮಾ ಮಾಡಿದ್ದ ರಿಷಿಕಾ ಶರ್ಮಾ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಆನಂದ ಸಂಕೇಶ್ವರ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಗೋಪಿ ಸುಂದರ್ ಅವರು 'ವಿಜಯಾನಂದ' ಬಯೋಪಿಕ್‌ಗೆ ಸಂಗೀತ ನೀಡುತ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡುತ್ತಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.