ಮೈ ತಾಕಿದರಷ್ಟೇ ಲೈಂಗಿಕ ದೌರ್ಜನ್ಯವಲ್ಲ, 'ಉದ್ದೇಶವಷ್ಟೇ ಮುಖ್ಯ' ಎಂದ ಸುಪ್ರೀಂ ಕೋರ್ಟ್

'ಬಾಲಕಿಯ ಚರ್ಮಕ್ಕೆ ಆರೋಪಿಯ ಚರ್ಮ ಸ್ಪರ್ಶಿಸದೇ ಇರುವುದರಿಂದ ಆತನನ್ನು ಪೋಕ್ಸೋ ಕಾಯಿದೆಯಡಿ ಅಪರಾಧಿ ಎಂದು ಪರಿಗಣಿಸಲಾಗದು' - ತೀರ್ಪಿನಲ್ಲಿ ವಿವರಿಸಿ ಆರೋಪಿಯನ್ನು ಬಿಡುಗಡೆ ಮಾಡಿದ್ದ ಮುಂಬೈ ಹೈಕೋರ್ಟ್

ಮೈ ತಾಕಿದರಷ್ಟೇ ಲೈಂಗಿಕ ದೌರ್ಜನ್ಯವಲ್ಲ, 'ಉದ್ದೇಶವಷ್ಟೇ ಮುಖ್ಯ' ಎಂದ ಸುಪ್ರೀಂ ಕೋರ್ಟ್
Linkup
: ಪ್ರಕರಣದಲ್ಲಿ ವ್ಯಕ್ತಿಯನ್ನು ದಂಡಿಸಲು 'ಚರ್ಮಕ್ಕೆ ಸ್ಪರ್ಶಿಸುವುದು ಅಗತ್ಯ' ಎಂದು ಪರಿಗಣಿಸಿ ಮುಂಬಯಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಗೊಳಿಸಿದೆ. 'ಅತ್ಯಾಚಾರ ಅತಿ ಗಂಭೀರವಾದ ಅಪರಾಧ. ಈ ವಿಷಯದಲ್ಲಿ ಲಘುವಾಗಿ ಯೋಚಿಸಿ ತೀರ್ಪು ನೀಡಬಾರದು. ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಸ್ಪರ್ಶದ ಕಾರಣ ಹೇಳಿ ಹೈಕೋರ್ಟ್‌ ಕೈ ಬಿಟ್ಟಿರುವುದು ಸರಿಯಲ್ಲ. ಇಂತಹ ಪ್ರಕರಣದಲ್ಲಿ ಅಪರಾಧಿಯ ಉದ್ದೇಶ ಮುಖ್ಯವೇ ವಿನಾ ಚರ್ಮಕ್ಕೆ ಚರ್ಮ ತಾಕಿಸುವುದು ಅಲ್ಲ' ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. 12 ವರ್ಷದ ಬಾಲಕಿ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯನ್ನು ಕಳೆದ ಜನವರಿಯಲ್ಲಿ ಮುಂಬಯಿ ಹೈಕೋರ್ಟ್‌ ಬಿಡುಗಡೆಗೊಳಿಸಿತ್ತು. 'ಬಾಲಕಿಯ ಚರ್ಮಕ್ಕೆ ಆರೋಪಿಯ ಚರ್ಮ ಸ್ಪರ್ಶಿಸದೇ ಇರುವುದರಿಂದ ಆತನನ್ನು ಪೋಕ್ಸೋ ಕಾಯಿದೆಯಡಿ ಅಪರಾಧಿ ಎಂದು ಪರಿಗಣಿಸಲಾಗದು' ಎಂದು ಹೇಳಿ ಬಿಡುಗಡೆಗೊಳಿಸಿತ್ತು. ನಾಲ್ಕು ವರ್ಷಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಪೋಕ್ಸೋ ವಿಶೇಷ ನ್ಯಾಯಾಲಯವು ಬಾಲಕಿಗೆ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಈಗ ಸ್ವಲ್ಪ ಮಟ್ಟಿಗೆ ಮಾರ್ಪಡಿಸಿದ ಸುಪ್ರೀಂ ಕೋರ್ಟ್‌, ಅಪರಾಧಿಗೆ ಐದರ ಬದಲಿಗೆ ಮೂರು ವರ್ಷಗಳ ಸೆರೆವಾಸ ವಿಧಿಸಿ ನಾಲ್ಕು ವಾರದೊಳಗೆ ಶರಣಾಗುವಂತೆ ಆದೇಶ ನೀಡಿದೆ. ಮುಂಬಯಿ ಹೈಕೋರ್ಟ್‌ ನಾಗಪುರ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಖುದ್ದು ಅಟಾರ್ನಿ ಜನರಲ್‌ ಕೆ. ಕೆ. ವೇಣು ಗೋಪಾಲ್‌ ಮೇಲ್ಮನವಿ ಸಲ್ಲಿಸಿದ್ದರು. 'ಹೈಕೋರ್ಟ್‌ ತೀರ್ಪು ತುಂಬ ಅಪಾಯಕಾರಿಯಾಗಿದೆ. ಅದು ಕೆಟ್ಟ ರೂಢಿಗೆ ದಾರಿ ತೋರುತ್ತದೆ. ತಕ್ಷಣವೇ ರದ್ದುಗೊಳಿಸಿ' ಎಂದು ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಹೈಕೋರ್ಟ್‌ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ ತೀರ್ಪಿನ ವಿರುದ್ಧ ಖುದ್ದು ಅಟಾರ್ನಿ ಜನರಲ್‌ ಮೇಲ್ಮನವಿ ಸಲ್ಲಿಸಿದ್ದು ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿ ಇದು ಎರಡನೇ ಪ್ರಕರಣವಾಗಿತ್ತು. 1985ರಲ್ಲಿ ಅಪರಾಧಿಗೆ ಬಹಿರಂಗ ಗಲ್ಲು ಶಿಕ್ಷೆ ವಿಧಿಸುವಂತೆ ಸೂಚಿಸಿ ರಾಜಸ್ಥಾನ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಅಂದಿನ ಅಟಾರ್ನಿ ಜನರಲ್‌ ಕೆ. ಪರಾಶರನ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.