'ಭಜರಂಗಿ 2' ಸಿನಿಮಾದ ಮಾರ್ನಿಂಗ್ ಶೋ ನೋಡಿದ ಪ್ರೇಕ್ಷಕರು ಏನು ಹೇಳಿದ್ರು?

ಡಾ ಶಿವರಾಜ್‌ಕುಮಾರ್, ಭಾವನಾ ಮೆನನ್ ನಟನೆಯ 'ಭಜರಂಗಿ 2' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿಯೂ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಭಜರಂಗಿ 2' ಸಿನಿಮಾದ ಮಾರ್ನಿಂಗ್ ಶೋ ನೋಡಿದ ಪ್ರೇಕ್ಷಕರು ಏನು ಹೇಳಿದ್ರು?
Linkup
ಡಾ ಶಿವರಾಜ್‌ಕುಮಾರ್, ಭಾವನಾ ಮೆನನ್ ನಟನೆಯ '' ಸಿನಿಮಾ ರಿಲೀಸ್ ಆಗಿದೆ. 'ಭಜರಂಗಿ' ಚಿತ್ರದ ಸಿಕ್ವೇಲ್ ಇದಾಗಿದೆ. ನಟಿ ಶ್ರುತಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್, ಟೀಸರ್, ಟ್ರೇಲರ್, ಹಾಡಿನ ಮೂಲಕ 'ಭಜರಂಗಿ 2' ಸಿನಿಮಾ ಭಾರೀ ಹೈಪ್ ಸೃಷ್ಟಿ ಮಾಡಿದೆ. ಅಭಿಮಾನಿಗಳು ಬೆಳ್ಳಂಬೆಳಗ್ಗೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ಕೊರೊನಾವನ್ನು ಮರೆತು ಪ್ರೇಕ್ಷಕರು ಥಿಯೇಟರ್‌ನಲ್ಲಿ ಸಂಭ್ರಮಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಕಟೌಟ್‌ಗೆ ಹಾಲಿನ ಅಭಿಷೇಕ 1000 ಪರದೆಗಳಲ್ಲಿ 'ಭಜರಂಗಿ 2' ಚಿತ್ರ ರಿಲೀಸ್ ಆಗಿದೆ. ಶಿವರಾಜ್‌ಕುಮಾರ್ ಕುಮಾರ್ ಕೂಡ ಅಭಿಮಾನಿಗಳ ಸಂಭ್ರಮ ನೋಡಲು ಚಿತ್ರಮಂದಿರಕ್ಕೆ ಆಗಮಿಸಿದ್ದು, ಫ್ಯಾನ್ಸ್ ಈ ಮೂಲಕ ಇನ್ನೂ ದುಪ್ಪಟ್ಟಾಗಿದೆ. ಆಗ ಅಭಿಮಾನಿಗಳ ಪ್ರೀತಿ ಕಂಡು ಶಿವಣ್ಣ ಕಣ್ಣಾಲೆ ಒದ್ದೆ ಆಗಿತ್ತು. ಅಲ್ಲು ಅರ್ಜುನ್ ಅವರು ತೆಲುಗು ನಾಡಲ್ಲಿ 'ಭಜರಂಗಿ 2' ಸಿನಿಮಾಕ್ಕೆ ಶುಭಾಶಯ ತಿಳಿಸುವುದರ ಜೊತೆಗೆ ಕರ್ನಾಟಕ, ಕನ್ನಡಿಗರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ಕೆಲ ಥಿಯೇಟರ್‌ಗಳಲ್ಲಿ ಶಿವರಾಜ್‌ಕುಮಾರ್‌ ಅವರ ಭಾರೀ ಕಟೌಟ್ ಹಾಕಲಾಗಿದೆ. ಚಿತ್ರಮಂದಿರದೊಳಗೆ ಅಭಿಮಾನಿಗಳ ಜೈಕಾರ ಮುಗಿಲುಮುಟ್ಟಿದೆ. ಶಿವಣ್ಣನ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಸೆಲೆಬ್ರಿಟಿಗಳ ಶುಭಾಶಯ ಪುನೀತ್ ರಾಜ್‌ಕುಮಾರ್, ಡಾಲಿ ಧನಂಜಯ್ ಕಾರ್ತಿಕ್ ಗೌಡ ಮುಂತಾದವರು ಸೋಶಿಯಲ್ ಮೀಡಿಯಾದಲ್ಲಿ 'ಭಜರಂಗಿ 2' ತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ಟಿಕೆಟ್‌ಗಳು ಕೂಡ 1 ಗಂಟೆಯಲ್ಲಿಯೇ ಖಾಲಿಯಾಗಿವೆ. ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
  • ಸೂಪರ್ ಆಗಿದೆ, ಚೆನ್ನಾಗಿದೆ
  • ಚಿತ್ರಕಥೆ ಸ್ವಲ್ಪ ನಿಧಾನವಾಗಿ ಸಾಗುತ್ತದೆ
  • ಡೈಲಾಗ್ ಅಷ್ಟೊಂದು ಚೆನ್ನಾಗಿಲ್ಲ
  • ಹೊಸ ರೀತಿಯ ಕಥೆ
  • ಒಳ್ಳೆಯ ಸಂದೇಶ ನೀಡುತ್ತದೆ
  • ಶಿವರಾಜ್‌ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ
  • ಲೋಕಿ ಆಕ್ಷನ್ ಚೆನ್ನಾಗಿದೆ
  • ಫೈಟಿಂಗ್ ಡಿಫರೆಂಟ್ ಆಗಿದೆ
  • ಖಳನಾಯಕ ಚೆಲುವರಾಜ ತುಂಬ ಚೆನ್ನಾಗಿ ಮಾಡಿದ್ದಾರೆ
  • ಶ್ರುತಿ ನಟನೆ ಚೆನ್ನಾಗಿದೆ
  • 100 ದಿನ ಸಿನಿಮಾ ಓಡತ್ತೆ
  • ಕನ್ನಡ ಚಿತ್ರರಂಗದಲ್ಲಿ ಈ ರೀತಿ ಸಿನಿಮಾ ಬರತ್ತೆ ಅಂದುಕೊಂಡಿರಲಿಲ್ಲ
  • ಈ ರೀತಿ ಸಿನಿಮಾವನ್ನು ಶಿವರಾಜ್‌ಕುಮಾರ್ ಬಿಟ್ಟರೆ ಬೇರೆ ಯಾರೂ ಮಾಡೋಕೆ ಸಾಧ್ಯವೇ ಇಲ್ಲ
  • 'ಭಜರಂಗಿ 2' ಸಿನಿಮಾಕ್ಕೆ ಅರ್ಜುನ್ ಜನ್ಯಾ ಒಳ್ಳೆಯ ಸಂಗೀತ ನೀಡಿದ್ದಾರೆ.
  • 'ಭಜರಂಗಿ 2' ಚಿತ್ರದ ಎರಡನೇ ಭಾಗದಲ್ಲಿ ಆರಕ್ಕೂ ಅಧಿಕ ಬಾರಿ ಮೈ ರೋಮಾಂಚನ ಆಗುವ ದೃಶ್ಯಗಳಿವೆ
  • ಬಾಲಿವುಡ್‌ಗೂ ಕಮ್ಮಿ ಆಗದಂತೆ ಸಿನಿಮಾ ಮೂಡಿಬಂದಿದೆ
  • ಕೆಲವೊಂದು ದೃಶ್ಯಗಳು ಕಣ್ಣಲ್ಲಿ ನೀರು ತರಿಸುತ್ತವೆಶಿವಣ್ಣನಿಗೆ ವಯಸ್ಸೇ ಆಗಲ್ಲ, ಇನ್ನೂ 35 ಅನ್ನುವಂತೆ ನಟಿಸಿದ್ದಾರೆ
ಈ ಚಿತ್ರಕ್ಕೆ ಎ ಹರ್ಷ ನಿರ್ದೇಶನ ಮಾಡಿದ್ದು, ಜಯಣ್ಣ & ಬೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರದಲ್ಲಿದೆ. ಹಾಡುಗಳ ಬಗ್ಗೆಯೂ ಮೆಚ್ಚುಗೆ ಕೇಳಿ ಬರುತ್ತಿದೆ. ಲೋಕಿ, ಶಿವರಾಜ್‌ ಕೆ ಆರ್ ಪೇಟೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.