ಬೆರಳೆಣಿಕೆಯಷ್ಟು ಕ್ರಿಪ್ಟೋ ಕರೆನ್ಸಿಗಳಿಗಷ್ಟೇ ಉಳಿಗಾಲ: ರಘುರಾಮ್ ರಾಜನ್

ಪ್ರಸ್ತುತ ಅಸ್ತಿತ್ವದಲ್ಲಿರುವ ಸಾವಿರಾರು ಕ್ರಿಪ್ಟೋಕರೆನ್ಸಿಗಳ ಪೈಕಿ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಳ್ಳಲಿವೆ. ಉಳಿದವು ಕಣ್ಮರೆಯಾಗಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಬೆರಳೆಣಿಕೆಯಷ್ಟು ಕ್ರಿಪ್ಟೋ ಕರೆನ್ಸಿಗಳಿಗಷ್ಟೇ ಉಳಿಗಾಲ: ರಘುರಾಮ್ ರಾಜನ್
Linkup
ಹೊಸದಿಲ್ಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ ಸಾವಿರಾರು ಕ್ರಿಪ್ಟೋಕರೆನ್ಸಿಗಳ ಪೈಕಿ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಳ್ಳಲಿವೆ. ಉಳಿದವು ಕಣ್ಮರೆಯಾಗಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಸಿಎನ್‌ಬಿಸಿ ಸುದ್ದಿವಾಹಿನಿ ಜತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡರು. ಬಹುತೇಕ ಕ್ರಪ್ಟೋಕರೆನ್ಸಿಗಳಿಗೆ ಅವುಗಳದೇ ಆದ ಮೌಲ್ಯವಿಲ್ಲ. ಅಂತಾರಾಷ್ಟ್ರೀಯ ಹಣ ವರ್ಗಾವಣೆಗೆ ಬಳಕೆಯಾಗುವುದರಿಂದ ಕೆಲವು ಕ್ರಿಪ್ಟೋಕರೆನ್ಸಿಗಳು ಮೌಲ್ಯ ಹೊಂದಿವೆ ಎಂದು ಹೇಳಿದ್ದಾರೆ. ಸದ್ಯದ ಬಗೆಗಿನ ಉನ್ಮಾದವನ್ನು 17ನೇ ಶತಮಾನದಲ್ಲಿ ನೆದ‌ರ್ಲೆಂಡ್‌ನಲ್ಲಿ ಉಂಟಾಗಿದ್ದ ತುಲಿಪ್ ಬಲ್ಬ್ (ಫ್ಯಾಶನ್ ಹೂವಿನ ಗಿಡದ ಕಾಯಿ) ಉನ್ಮಾದಕ್ಕೆ ಹೋಲಿಕೆ ಮಾಡಿದ್ದಾರೆ. 'ಯಾವುದೇ ವಸ್ತುಗಳು ಮೌಲ್ಯವನ್ನು ಹೊಂದಿದ್ದರೆ ಮಾತ್ರ ಅವುಗಳಿಗೆ ಬೆಲೆ ಇರುತ್ತದೆ. ಹೆಚ್ಚಿನ ಸಂಖ್ಯೆಯ ಮೂರ್ಖರು ಖರೀದಿಸಲು ಸಿದ್ಧರಿರುವುದರಿಂದ ಬಹಳಷ್ಟು ಕ್ರಿಪ್ಟೋಕರೆನ್ಸಿಗಳು ಮೌಲ್ಯ ಹೊಂದಿವೆ'ಎಂದು ಅವರು ಹೇಳಿದ್ಧಾರೆ. 17ನೇ ಶತಮಾನದಲ್ಲಿ 1634ರ ಹೊತ್ತಿಗೆ ನೆದರ್ಲೆಂಡ್‌ನಲ್ಲಿ ತುಲಿಪ್ ಬಲ್ಬ್(ಫ್ಯಾಶನ್ ಹೂವಿನ ಗಿಡದ ಕಾಯಿ)ಗಳ ಬೆಲೆಗಳು ಅಸಾಧಾರಣವಾದ ಮಟ್ಟಕ್ಕೆ ತಲುಪಿದ್ದವು. ಬಳಿಕ 1637ರಲ್ಲಿ ಅವುಗಳ ಬೆಲೆ ನಾಟಕೀಯವಾಗಿ ಕುಸಿಯಿತು ಎಂದು ಅವರು ಹೇಳಿದ್ದಾರೆ. 'ಕ್ರಿಪ್ಟೋಕರೆನ್ಸಿಯೂ ಸಹ ಅದೇ ರೀತಿಯ ಸಮಸ್ಯೆ ಎದುರಿಸಲಿದೆ. ಅನಿಯಂತ್ರಿತವಾಗಿ ನಡೆಯುತ್ತಿರುವ ಈ ಹಣಕಾಸು ವ್ಯವಹಾರಕ್ಕೆ ತಡೆ ಬೀಳಲಿದೆ. ಕ್ರಿಪ್ಟೋ ಸಂಪತ್ತು ಹೊಂದಿರುವ ಬಹಳಷ್ಟು ಜನರು ಸಂಕಟಕ್ಕೀಡಾಗಲಿದ್ದಾರೆ'ಎಂದು ಅವರು ಹೇಳಿದ್ದಾರೆ. ಇದರರ್ಥ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ ಎಂಬುದಲ್ಲ, ಅವುಗಳಲ್ಲಿ ಕೆಲವು ಪಾವತಿಗಳನ್ನು ಮಾಡಲು ಬಳಕೆಯಾಗುವ ಮೂಲಕ ಉಳಿದುಕೊಳ್ಳಬಹುದು. ವಿಶೇಷವಾಗಿ ಗಡಿಯಾಚೆಗಿನ ಪಾವತಿಗೆ ಬಳಕೆಯಾಗಲಿವೆ. ಆದರೆ, ಈ ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸಬೇಕೆಂಬುದರ ಬಗ್ಗೆ ನಿಯಂತ್ರಕರರಿಗೆ ಪೂರ್ಣವಾಗಿ ಅರ್ಥವಾಗದ ಕಾರಣ ಸಮಸ್ಯೆ ತಲೆದೋರುತ್ತಿದೆ ಎಂದು ರಾಜನ್ ಹೇಳಿದ್ಧಾರೆ. ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ನಿಷೇಧಿಸುವ ಮಸೂದೆ ಮಂಡನೆ ಮಾಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ರಘುರಾಮ್ ರಾಜನ್ ಈ ಹೇಳಿಕೆ ನೀಡಿದ್ದಾರೆ. 'ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021' ಅನ್ನು ಇದೇ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಜೊತೆಗೆ ಆರ್‌ಬಿಐ ಮೂಲಕ ಅಧಿಕೃತ ಡಿಜಿಟಲ್ ಕರೆನ್ಸಿ ಸೃಷ್ಟಿಗೆ ಬೇಕಾದ ಕಾನೂನು ಚೌಕಟ್ಟು ಸಿದ್ಧತೆಗೂ ಈ ಕಾಯ್ದೆ ಅನುವುಮಾಡಿಕೊಡಲಿದೆ. 'ಮಸೂದೆಯು ಭಾರತದಲ್ಲಿ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುತ್ತದೆ. ಆದರೆ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸಲಿದೆ' ಎಂದು ಹೇಳಲಾಗಿದೆ.