ಬೆಂಗಳೂರು ಪೊಲೀಸರ ಕಾರ್ಯಾಚರಣೆ: 5 ತಿಂಗಳಲ್ಲೇ 60 ಕೋಟಿ ಮೌಲ್ಯದ ಡ್ರಗ್ಸ್‌ ವಶ, 150 ಮಂದಿ ಬಂಧನ!

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೂರು ಪಟ್ಟು ಅಧಿಕ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಡಾರ್ಕ್ವೆಬ್‌ ಮೂಲಕ ವಿದೇಶಗಳಿಂದ ಆಮದು ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಿದ್ದು, ಅಂತಹವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವಿದೇಶಗಳಿಂದ ಎಲ್‌ಎಸ್‌ಡಿ ಸ್ಟಿಫ್ಸ್‌, ಎಕ್ಸ್‌ಟೆಸ್ಸಿ ಮಾತ್ರೆಗಳು, ಕೊಕೇನ್‌, ಹೆರಾಯಿನ್‌ ತರಿಸಿಕೊಳ್ಳುತ್ತಿದ್ದ 150 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು.

ಬೆಂಗಳೂರು ಪೊಲೀಸರ ಕಾರ್ಯಾಚರಣೆ: 5 ತಿಂಗಳಲ್ಲೇ 60 ಕೋಟಿ ಮೌಲ್ಯದ ಡ್ರಗ್ಸ್‌ ವಶ, 150 ಮಂದಿ ಬಂಧನ!
Linkup
ರವಿಕುಮಾರ ಬೆಟ್ಟದಪುರ ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಬೆಂಗಳೂರು ನಗರ ಕೇವಲ 5 ತಿಂಗಳುಗಳಲ್ಲೇ 60 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಐದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ವಶಪಡಿಸಿಕೊಂಡಿದ್ದ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಕೋರ್ಟ್‌ ಆದೇಶದ ಮೇರೆಗೆ ನಗರ ಪೊಲೀಸರು ಕಳೆದ ಆಗಸ್ಟ್‌ನಲ್ಲಿ ನಾಶಪಡಿಸಿದ್ದರು. ಕಾರ್ಯಚರಣೆ ತೀವ್ರಗೊಳಿಸಿರುವ ನಗರ ಪೊಲೀಸರು, ಮಾದಕ ವಸ್ತು ಸಾಗಾಟ, ಮಾರಾಟದ ವಿರುದ್ಧ 3800 ಪ್ರಕರಣ ದಾಖಲಿಸಿಕೊಂಡು ಸುಮಾರು 60 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೂರು ಪಟ್ಟು ಅಧಿಕ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಡಾರ್ಕ್ವೆಬ್‌ ಮೂಲಕ ವಿದೇಶಗಳಿಂದ ಆಮದು ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಿದ್ದು, ಅಂತಹವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವಿದೇಶಗಳಿಂದ ಎಲ್‌ಎಸ್‌ಡಿ ಸ್ಟಿಫ್ಸ್‌, ಎಕ್ಸ್‌ಟೆಸ್ಸಿ ಮಾತ್ರೆಗಳು, ಕೊಕೇನ್‌, ಹೆರಾಯಿನ್‌ ತರಿಸಿಕೊಳ್ಳುತ್ತಿದ್ದ 150 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು. 2021ರ ನವೆಂಬರ್‌ ಅಂತ್ಯದವರೆಗೆ ಮಾದಕ ವಸ್ತು ಸಾಗಾಟ ಮತ್ತು ಮಾರಾಟ, ಆಮದು ಮಾಡಿಕೊಳ್ಳುವವರ ವಿರುದ್ಧ ನಗರ ಪೊಲೀಸರು 3800 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 12,300 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು, 7,900 ಎಕ್ಸ್‌ಟೆಸಿ ಮಾತ್ರೆಗಳು, 3,400 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಚಾಮರಾಜನಗರ, ಬೆಳಗಾವಿ ಸೇರಿದಂತೆ ರಾಜ್ಯದ ಅರಣ್ಯಪ್ರದೇಶಗಳಿರುವ ಕೆಲವು ಭಾಗಗಳಿಂದ ನಗರಕ್ಕೆ ಗಾಂಜಾ ಸರಬರಾಜಾಗುತ್ತಿದೆ. ಇನ್ನು ಎಲ್‌ಸಿಡಿ ಸ್ಟಿಫ್ಸ್‌ ಮತ್ತು ಎಕ್ಸ್‌ಟೆಸ್ಸಿ, ಬ್ರೌನ್‌ ಶುಗರ್‌, ಚರಸ್‌ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಡಾರ್ಕ್ವೆಬ್‌, ಕೊರಿಯರ್‌ ಹಾಗೂ ಅಂಚೆ ಮೂಲಕ ನಗರಕ್ಕೆ ತರಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು, ಟೆಕ್ಕಿಗಳೇ ಟಾರ್ಗೆಟ್‌ ಆಫ್ರಿಕಾ, ನೈಜೀರಿಯಾ ಸೇರಿದಂತೆ ಬೇರೆ ದೇಶಗಳಿಂದ ಬಂದು ನಗರದಲ್ಲಿ ನೆಲೆಸಿರುವ ಬಹುತೇಕರು ಮಾದಕ ವಸ್ತು ಸಾಗಾಟ ಮಾರಾಟದಲ್ಲೇ ತೊಡಗಿಸಿಕೊಂಡಿದ್ದಾರೆ. ಈ ವಿದೇಶಿ ಪ್ರಜೆಗಳು ನಗರದಲ್ಲಿರುವ ಸ್ಥಳೀಯರನ್ನು ಪರಿಚಯ ಮಾಡಿಕೊಂಡು ಅವರ ಮೂಲಕ ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾರಾಟ ಮಾಡುತ್ತಾರೆ. ವಿದೇಶಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ತರಿಸಿಕೊಳ್ಳುವ ಡ್ರಗ್‌ ಪೆಡ್ಲರ್‌ಗಳು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಆಹಾರ ಸರಬರಾಜುದಾರರ ಸೋಗಿನಲ್ಲಿ ಸಾಗಾಟ ಸ್ವಿಗ್ಗಿ, ಝೊಮ್ಯಾಟೊ ಹಾಗೂ ಕೊರಿಯರ್‌ ತಲುಪಿಸುವವರ ಸೋಗಿನಲ್ಲಿ ಮಾದಕ ವಸ್ತುಗಳನ್ನು ಆರ್ಡರ್‌ ಮಾಡಿದವರ ಮನೆಗೆ ತಲುಪಿಸಲಾಗುತ್ತಿದೆ. ಇಷ್ಟೇ ಅಲ್ಲದೇ ಇನ್ನೂ ಕೆಲವರು ಪುಸ್ತಕಗಳಲ್ಲೂ ಮಾದಕ ವಸ್ತುಗಳನ್ನಿಟ್ಟು ಸರಬರಾಜು ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್‌ರಾಜಕಾರಣಿಗಳ ಮಕ್ಕಳು, ಸೆಲೆಬ್ರಿಟಿಗಳು ಹಾಗೂ ಸಿರಿವಂತರ ಮಕ್ಕಳು ಆಯೋಜಿಸುವ ಬಹುತೇಕ ಪಾರ್ಟಿಗಳಿಗೆ ಮಾದಕ ವಸ್ತು ಸರಬರಾಜಾಗುತ್ತದೆ. ಇನ್ನು ರೇವ್‌ ಪಾರ್ಟಿಗಳು, ನಗರದ ಹೊರ ವಲಯಗಳಲ್ಲಿ ನಡೆಯುವ ಪಾರ್ಟಿಗಳಲ್ಲೂ ಮಾದಕ ವಸ್ತು ಸೇವನೆ ನಡೆಯುತ್ತದೆ. ಇಂತಹ ಪಾರ್ಟಿಗಳಿಗೆ ನೈಜೀರಿಯಾ ಡ್ರಗ್‌ ಪೆಡ್ಲರ್‌ಗಳು ಮಾದಕ ವಸ್ತು ಸರಬರಾಜು ಮಾಡುತ್ತಾರೆ. ಎಲ್ಲಿಂದ ಬರುತ್ತದೆ ಮಾದಕ ವಸ್ತು ಶಿಕ್ಷಣ, ಪ್ರವಾಸದ ನೆಪದಲ್ಲಿ ದೇಶ ಪ್ರವೇಶಿಸುವ ಬಹುತೇಕ ನೈಜೀರಿಯಾ ಪ್ರಜೆಗಳು, ವೀಸಾ ಅವಧಿ ಮುಗಿದರೂ ತಮ್ಮ ದೇಶಗಳಿಗೆ ತೆರಳದೆ ಇಲ್ಲಿಯೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉಳಿದುಕೊಳ್ಳುತ್ತಾರೆ. ಇಂತಹವರನ್ನು ಬಂಧಿಸಿದರೂ ಕಾನೂನಿನ ಲೋಪದೋಷಗಳನ್ನು ಹುಡುಕಿ ಹೊರಬಂದು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ನೈಜೀರಿಯಾ ಪ್ರಜೆಗಳಿಗೆ ಪ್ರಪಂಚದ ನಾನಾ ದೇಶಗಳ ಡ್ರಗ್‌ ಪೆಡ್ಲರ್‌ಗಳ ಸಂಪರ್ಕವಿದೆ. ಇಂತಹ ಪೆಡ್ಲರ್‌ಗಳನ್ನು ಬಂಧಿಸಿದರೂ, ಅವರು ನ್ಯಾಯಲಯದಲ್ಲಿ ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಕೃತ್ಯ ಮುಂದುವರಿಸುತ್ತಾರೆ. ಮಾಹಿತಿದಾರರಿಂದಷ್ಟೇ ಪೊಲೀಸರಿಗೆ ಮಾಹಿತಿ ಇಡೀ ದೇಶದೆಲ್ಲೆಡೆ ಮಾದಕ ಜಾಲ ಹರಡಿದೆ. ವಿದೇಶಗಳಿಂದ ಲೀಲಾಜಾಲವಾಗಿ ಮಾದಕ ವಸ್ತು ಸರಬರಾಜಾಗುತ್ತದೆ. ಇಂತಹ ಡ್ರಗ್‌ ಸರಬರಾಜಿನ ಬಗ್ಗೆ ಪೊಲೀಸರು ನೇಮಿಸಿಕೊಂಡಿರುವ ಮಾಹಿತಿದಾರರಿಂದಷ್ಟೇ ತಿಳಿಯುತ್ತದೆ. ಇನ್ನು ಡ್ರಗ್‌ಪೆಡ್ಲರ್‌ಗಳ ನಡುವಿನ ಜಗಳದಿಂದಷ್ಟೇ ಪೊಲೀಸರಿಗೆ ಮಾದಕ ಜಾಲದ ಮಾಹಿತಿ ಲಭಿಸುತ್ತಿದೆ. ಉಳಿದಂತೆ ಪೊಲೀಸರ ಗಮನಕ್ಕೂ ಬಾರದೆ ಡ್ರಗ್ಸ್‌ ಸರಬರಾಜು ನಡೆಯುತ್ತದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಮಾದಕ ವಸ್ತು ಜಾಲದ ಬಗ್ಗೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿರುವ ಪರಿಣಾಮ ಪ್ರಸಕ್ತ ವರ್ಷ ಹೆಚ್ಚಿನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಮಾದಕ ವಸ್ತು ಮಾರಾಟ, ಸರಬರಾಜು ಮಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೃತ್ಯದಲ್ಲಿ ಯಾರೇ ಭಾಗಿಯಾದರೂ ಜೈಲಿಗಟ್ಟಲಾಗುವುದು. ಸಂದೀಪ್‌ ಪಾಟೀಲ್‌, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಮಾದಕ ಜಾಲ ನಿಯಂತ್ರಿಸಬೇಕಾದರೆ ಮೊದಲು ಪ್ರಕರಣ ಇತ್ಯರ್ಥವಾಗುವವರೆಗೂ ಡ್ರಗ್‌ ಪೆಡ್ಲರ್‌ಗಳಿಗೆ ಜಾಮೀನು ನೀಡಬಾರದು. ವೀಸಾ, ಪಾಸ್‌ಪೋರ್ಟ್‌ ಅವಧಿ ಮುಗಿದಿರುವವರನ್ನು ನಿರ್ದಾಕ್ಷಿಣ್ಯವಾಗಿ ದೇಶದಿಂದ ಹೊರಹಾಕಬೇಕು. ವಿದೇಶದಿಂದ ಬರುವವರಿಗೆ ಕೆಲವು ನಿಯಂತ್ರಣ ಹೇರಬೇಕು. ಟಿ.ವಿ. ಪ್ರಭಾಕರ್‌, ನಿವೃತ್ತ ಪೊಲೀಸ್‌ ಅಧಿಕಾರಿ (ಎಸ್‌ಪಿ)