ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರಿನ ಭಾಗ್ಯ; ಕಾವೇರಿ 5ನೇ ಹಂತದ ಯೋಜನೆಯಲ್ಲಿ ನೀರು ಪೂರೈಕೆ!

2007ರಲ್ಲಿ ಪಾಲಿಕೆಗೆ ಸೇರ್ಪಡೆಗೊಂಡ 225 ಚ.ಕಿ.ಮೀ. ವಿಸ್ತೀರ್ಣದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯು (ಜೈಕಾ) 5,500 ಕೋಟಿ ರೂ. ಸಾಲ ನೀಡಿದೆ. 5ನೇ ಹಂತದ ಯೋಜನೆಯಡಿ ಕಾವೇರಿ ನದಿಯಿಂದ 775 ದಶಲಕ್ಷ ಲೀಟರ್‌ ನೀರು (ಎಂಎಲ್‌ಡಿ) ನೀರು ತರಲು ಹಾಗೂ ಒಳಚರಂಡಿ ಸಂಪರ್ಕ ವ್ಯವಸ್ಥೆಗಾಗಿ 4,940 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರಿನ ಭಾಗ್ಯ; ಕಾವೇರಿ 5ನೇ ಹಂತದ ಯೋಜನೆಯಲ್ಲಿ ನೀರು ಪೂರೈಕೆ!
Linkup
ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು ಬೆಂಗಳೂರು: ದಶಕದ ಹಿಂದೆ ತೆಕ್ಕೆಗೆ ಸೇರಿದ 110 ಹಳ್ಳಿಗಳಿಗೆ ಕುಡಿಯುವ ಪೂರೈಸುವ ಮಹತ್ವಾಕಾಂಕ್ಷಿ ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿಯು ಸಮರೋಪಾದಿಯಲ್ಲಿ ನಡೆಯುತ್ತಿದೆ. ಮುಂದಿನ ಒಂದು ವರ್ಷದಲ್ಲಿ 110 ಹಳ್ಳಿಯ ಜನರಿಗೆ ಕಾವೇರಿ ನೀರು ಕುಡಿಯುವ ಭಾಗ್ಯ ಸಿಗಲಿದೆ. 2007ರಲ್ಲಿ ಪಾಲಿಕೆಗೆ ಸೇರ್ಪಡೆಗೊಂಡ 225 ಚ.ಕಿ.ಮೀ. ವಿಸ್ತೀರ್ಣದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯು (ಜೈಕಾ) 5,500 ಕೋಟಿ ರೂ. ಸಾಲ ನೀಡಿದೆ. 5ನೇ ಹಂತದ ಯೋಜನೆಯಡಿ ಕಾವೇರಿ ನದಿಯಿಂದ 775 ದಶಲಕ್ಷ ಲೀಟರ್‌ ನೀರು (ಎಂಎಲ್‌ಡಿ) ನೀರು ತರಲು ಹಾಗೂ ಒಳಚರಂಡಿ ಸಂಪರ್ಕ ವ್ಯವಸ್ಥೆಗಾಗಿ 4,940 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 2023ರ ಆಗಸ್ಟ್‌ ವೇಳೆಗೆ ಯೋಜನೆ ಪೂರ್ಣಗೊಳಿಸುವಂತೆ 'ಜೈಕಾಧಿ' ಗಡುವು ನೀಡಿದೆ. ಆದರೆ, ಜಲಮಂಡಳಿಯು 2022ರ ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ, ಜನರಿಗೆ ನೀರು ಪೂರೈಸುವ ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಚುರುಕುಗೊಳಿಸಲಾಗಿದೆ. ಶಿವ ಸಮತೋಲನ ಜಲಾಶಯದ ಮೂಲಕ ಪಡೆದ ನೀರಿನ ಸಂಸ್ಕರಣೆಗಾಗಿ ತೊರೆಕಾಡನಹಳ್ಳಿಯಲ್ಲಿ(ಟಿ.ಕೆ.ಹಳ್ಳಿ) ಹೊಸದಾಗಿ ಘಟಕ ಸ್ಥಾಪಿಸಲಾಗುತ್ತಿದೆ. ತೊರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ಪಂಪಿಂಗ್‌ ಸ್ಟೇಷನ್‌ಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಟಿ.ಕೆ.ಹಳ್ಳಿಯಿಂದ 80 ಕಿ.ಮೀ. ದೂರದಲ್ಲಿರುವ ವಾಜರಹಳ್ಳಿವರೆಗೆ 3000 ಎಂಎಂ ವ್ಯಾಸದ ಬೃಹತ್‌ ಕೊಳವೆಯನ್ನು ಅಳವಡಿಸಲಾಗುತ್ತಿದೆ. ಒಟ್ಟು 9 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯ ಕೊಳವೆ ಮಾರ್ಗದಿಂದ ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ 114 ಕಿ.ಮೀ. ಉದ್ದದ ಪೈಪ್‌ಲೈನ್‌ ಅಳವಡಿಸುವ ಕೆಲಸವೂ ನಡೆದಿದೆ. ಈ ಕೊಳವೆ ಜಾಲಗಳು ನೆಲಮಟ್ಟದ ಜಲಸಂಗ್ರಹಾಗಾರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಶೇ 30ರಷ್ಟು ಕಾಮಗಾರಿ ಪೂರ್ಣ ಟಿ.ಕೆ.ಹಳ್ಳಿಯಿಂದ ವಾಜರಹಳ್ಳಿವರೆಗಿನ 80 ಕಿ.ಮೀ. ಮಾರ್ಗದಲ್ಲಿ ಕೊಳವೆ ಅಳವಡಿಸುತ್ತಿದ್ದು, ಇಲ್ಲಿಯವರೆಗೆ 33 ಕಿ.ಮೀ.ನಷ್ಟು ಪೈಪ್‌ಲೈನ್‌ ಹಾಕಲಾಗಿದೆ. ನೀರು ಸಂಸ್ಕರಣಾ ಘಟಕ, ಪಂಪಿಂಗ್‌ ಸ್ಟೇಷನ್‌, ನೆಲಮಟ್ಟದ ಜಲಸಂಗ್ರಹಾಗಾರಗಳ ಕಾಮಗಾರಿಯೂ ಪ್ರಗತಿಯಲ್ಲಿದೆ. ಜಪಾನ್‌, ಸ್ವೀಡನ್‌, ಆಸ್ಟ್ರಿಯಾ, ಅಮೆರಿಕದಿಂದ ಅತ್ಯಾಧುನಿಕ ಪಂಪ್‌, ಮೋಟರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದುವರೆಗೆ ಕಾವೇರಿ 5ನೇ ಹಂತದ ಯೋಜನೆಯ ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 50 ಲಕ್ಷ ಜನರಿಗೆ ಕಾವೇರಿ ನೀರು 110 ಹಳ್ಳಿಗಳಲ್ಲಿ 2049ಕ್ಕೆ ಸುಮಾರು 50 ಲಕ್ಷ ಜನಸಂಖ್ಯೆಯಾಗಲಿದ್ದು, ಇವರಿಗೆ ದಿನಕ್ಕೆ 775 ಎಂಎಲ್‌ಡಿ ಕುಡಿಯುವ ನೀರು ಸರಬರಾಜು ಮಾಡಲು ಸಿದ್ಧಪಡಿಸಲಾಗಿದೆ. ಈ ಯೋಜನೆಯಲ್ಲಿ 7 ನೆಲಮಟ್ಟದ ಜಲಸಂಗ್ರಹಾಗಾರಗಳು ಹಾಗೂ 14 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸುವ ಕೊಳವೆ ಜೋಡಣಾ ಕಾರ್ಯ ಮುಗಿದಿದೆ. 2686 ಕಿ.ಮೀ. ಉದ್ದದ ಕೊಳವೆ ಜಾಲ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾವೇರಿ 1, 2, 3 ಮತ್ತು 4ನೇ ಘಟ್ಟದ 1ನೇ ಹಂತ ಮತ್ತು 2ನೇ ಹಂತದ ಮೂಲಕ ಸದ್ಯ ನಗರಕ್ಕೆ ನಿತ್ಯ 1450 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಹೀಗಿದ್ದೂ, ನಗರವು ನಿತ್ಯ 775 ಎಂಎಲ್‌ಡಿ ನೀರಿನ ಕೊರತೆ ಎದುರಿಸುತ್ತಿದೆ. 5ನೇ ಹಂತದ ಯೋಜನೆ ಪೂರ್ಣಗೊಂಡರೆ, ನೀರಿನ ಕೊರತೆ ನೀಗಲಿದೆ. 2022ರ ನಂತರ ನಗರಕ್ಕೆ ನಿತ್ಯ 2225 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಪಾಲಿಕೆ ತೆಕ್ಕೆ ಸೇರಿದ ಬಹುತೇಕ ಹಳ್ಳಿಗಳ ಜನರು ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಅಂತರ್ಜಲ ಬಳಕೆಯಿಂದ ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಇಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. 260 ಎಂಎಲ್‌ಡಿ ಸಾಮರ್ಥ್ಯದ ಜಿಎಲ್‌ಆರ್‌ ಕಾವೇರಿ 5ನೇ ಹಂತದ ಯೋಜನೆಯಡಿ ಪೂರೈಕೆಯಾಗುವ ನೀರನ್ನು ಸಂಗ್ರಹಿಸಿ, 110 ಹಳ್ಳಿಗಳಿಗೆ ಪೂರೈಸಲು 7 ಕಡೆ 260 ಎಂಎಲ್‌ಡಿ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಾಗಾರಗಳನ್ನು ನಿರ್ಮಿಸಲಾಗುತ್ತಿದೆ. ಕೆಲವೆಡೆ ಕಾಮಗಾರಿ ಶುರುವಾಗಿದೆ. ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ನ 8ನೇ ಬ್ಲಾಕ್‌, ಲಿಂಗಧೀರನಹಳ್ಳಿ, ಸಿಂಗಾಪುರ, ಗೊಟ್ಟಿಗೆರೆ, ದೊಡ್ಡಕನ್ನಹಳ್ಳಿ, ಚೊಕ್ಕನಹಳ್ಳಿ, ಕಾಡುಗೋಡಿಯಲ್ಲಿಜಿಎಲ್‌ಆರ್‌ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಕಾಡುಗೋಡಿ, ಚೊಕ್ಕನಹಳ್ಳಿಯಲ್ಲಿಜಾಗದ ವಿವಾದದಿಂದ ಕೆಲಸ ಆರಂಭಿಸಲಾಗಿಲ್ಲ. ಟಿ.ಜಿ.ಹಳ್ಳಿಯಿಂದ 110 ಎಂಎಲ್‌ಡಿ ನೀರು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನರುಜ್ಜೀವನಗೊಳಿಸಿ, ನಗರದ ಪಶ್ಚಿಮ ಭಾಗಕ್ಕೆ 110 ಎಂಎಲ್‌ಡಿ ನೀರು ಪೂರೈಸುವ ಯೋಜನೆಯನ್ನು 300 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಟಿ.ಜಿ.ಹಳ್ಳಿಯಿಂದ ಸುಮನಹಳ್ಳಿವರೆಗೆ ಪೈಪ್‌ಲೈನ್‌ ಬದಲಿಸುವ ಕಾಮಗಾರಿ ಮುಗಿಸಲಾಗಿದೆ. ಪಂಪಿಂಗ್‌ ಸ್ಟೇಷನ್‌ ಮತ್ತು ನೀರು ಸಂಸ್ಕರಣಾ ಘಟಕದ ನಿರ್ಮಾಣ ಕೆಲಸ ನಡೆಯುತ್ತಿದ್ದು, ಶೇ 65ರಷ್ಟು ಕಾಮಗಾರಿ ಮುಗಿದಿದೆ. ಎತ್ತಿನಹೊಳೆ ಯೋಜನೆಯಡಿ ಸರಕಾರವು 1.7 ಟಿಎಂಸಿಯನ್ನು ಟಿ.ಜಿ.ಹಳ್ಳಿ ಜಲಾಶಯಕ್ಕೆ ಮತ್ತು 0.8 ಟಿಎಂಸಿ ನೀರನ್ನು ಹೆಸರಘಟ್ಟ ಜಲಾಶಯಕ್ಕೆ ಹಂಚಿಕೆ ಮಾಡಿದೆ. ಅರ್ಕಾವತಿಯಿಂದ ಬರುವ ನೀರನ್ನು ಸಂಸ್ಕರಿಸಿ ಟಿ.ಜಿ.ಹಳ್ಳಿ ಜಲಾಶಯಕ್ಕೆ ಬಿಡಲು ಉದ್ದೇಶಿಸಲಾಗಿದೆ. ಎತ್ತಿನಹೊಳೆ ನೀರನ್ನು ಅರ್ಕಾವತಿಯ ಸಂಸ್ಕರಿಸಿದ ನೀರಿನೊಂದಿಗೆ ಮಿಶ್ರಣ ಮಾಡಿ ಜಲಾಶಯಕ್ಕೆ ಹರಿಸಲು ನಿರ್ಧರಿಸಲಾಗಿದೆ. ಒಂದೊಮ್ಮೆ ಎತ್ತಿನಹೊಳೆಯಿಂದ ನೀರು ಬರುವುದು ತಡವಾದರೆ, ಕನಿಷ್ಠ 45-50 ಎಂಎಲ್‌ಡಿ ಸಂಸ್ಕರಿಸಿದ ನೀರನ್ನು ನಗರಕ್ಕೆ ಸರಬರಾಜು ಮಾಡಲು ಜಲಮಂಡಳಿ ಚಿಂತನೆ ನಡೆಸಿದೆ. ''ಕಾವೇರಿ 5ನೇ ಹಂತದ ಯೋಜನೆಯನ್ನು 2023ರ ಆಗಸ್ಟ್‌ ವೇಳೆಗೆ ಪೂರ್ಣಗೊಳಿಸಲು 'ಜೈಕಾ' ಗಡುವು ನೀಡಿದೆ. ಅದಕ್ಕಿಂತ ಮೊದಲೇ ಕಾಮಗಾರಿ ಮುಗಿಸಲಾಗುವುದು. 2022ರ ಡಿಸೆಂಬರ್‌ಗೆ ಕಾಮಗಾರಿ ಪೂರ್ಣಗೊಳಿಸಿ, 110 ಹಳ್ಳಿಗಳಿಗೆ ನೀರು ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೋವಿಡ್‌ ಸಂದರ್ಭದಲ್ಲಿಯೂ ಕಾಮಗಾರಿಯಲ್ಲಿ ನಿಗದಿಗಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ,''. ಎಸ್‌.ವಿ.ರಮೇಶ್‌, ಮುಖ್ಯ ಎಂಜಿನಿಯರ್‌ (ಕಾವೇರಿ), ಜಲಮಂಡಳಿ ಕಾವೇರಿ ನೀರು ಸಂಪರ್ಕಕ್ಕೆ ಅಳವಡಿಸಿರುವ ಪೈಪ್‌ಲೈನ್‌ ಜಾಲ ವಲಯ-ಹಳ್ಳಿಗಳು- ನಿರ್ಮಿಸಿರುವ ಕೊಳವೆ ಜಾಲ (ಕಿ.ಮೀ.ಗಳಲ್ಲಿ) ದಾಸರಹಳ್ಳಿ -11 -430 ಬೊಮ್ಮನಹಳ್ಳಿ-33- 810 ಮಹದೇವಪುರ- 23 -600 ರಾಜರಾಜೇಶ್ವರಿನಗರ- 17 -194 ಬ್ಯಾಟರಾಯನಪುರ- 26 -648 ಒಟ್ಟು- 110- 2682 ಕಾವೇರಿ ನೀರು ಪೂರೈಕೆ ಯೋಜನೆಯ ಹಾದಿ:- ನೀರು ಪೂರೈಕೆ ಹಂತಗಳು-ನೀರು ಪೂರೈಕೆ ಪ್ರಮಾಣ (ಎಂಎಲ್‌ಡಿ)-ನೀರು ಸರಬರಾಜು ಆರಂಭವಾದ ವರ್ಷ 1ನೇ ಹಂತ- 155- 1974 2ನೇ ಹಂತ- 155 -1982 3ನೇ ಹಂತ- 315 -1992 4ನೇ ಘಟ್ಟದ 1ನೇ ಹಂತ -315 -2002 4ನೇ ಘಟ್ಟದ 2ನೇ ಹಂತ -520- 2012 ಒಟ್ಟು -1460 110 ಹಳ್ಳಿಗಳ ಅಂದಾಜು ಜನಸಂಖ್ಯೆ, ನೀರಿನ ಬೇಡಿಕೆ ವಲಯ- ಹಳ್ಳಿಗಳು -2049ಕ್ಕೆ ಜನಸಂಖ್ಯೆ -ನೀರಿನ ಬೇಡಿಕೆ (ಎಂಎಲ್‌ಡಿ) ಬ್ಯಾಟರಾಯನಪುರ- 26 -933240 -167 ಮಹದೇವಪುರ 23- 865154- 154 ಬೊಮ್ಮನಹಳ್ಳಿ- 33- 1094248 -195 ಆರ್‌.ಆರ್‌.ನಗರ 17 -817285- 146 ದಾಸರಹಳ್ಳಿ 11 -743073- 133 ಒಟ್ಟು- 110- 4453000 -795