ಬೆಂಗಳೂರು ದಸರಾ ಈ ಬಾರಿಯೂ ಸರಳ; ಸಾಂಕೇತಿಕ ಮೆರವಣಿಗೆ ಆಯಾ ಬಡಾವಣೆಗಷ್ಟೇ ಸೀಮಿತ!

ಬೆಂಗಳೂರು ದಸರಾ ಈ ಬಾರಿಯೂ ಸಂಪ್ರದಾಯಬದ್ಧವಾಗಿ ಎಲ್ಲಾ ಧಾರ್ಮಿಕ ಕಾರ್ಯಗಳೂ ನಡೆಯುತ್ತವೆ. ಆದರೆ, ನೂರಾರು ಪಲ್ಲಕ್ಕಿಗಳ ಅದ್ಧೂರಿ ಮೆರವಣಿಗೆ ಇರುವುದಿಲ್ಲ. ಬದಲಿಗೆ ಆಯಾ ಬಡಾವಣೆಯಲ್ಲಿರುವ ದೇವಸ್ಥಾನಗಳಲ್ಲಿಯೇ ದೇವರನ್ನು ಪಟ್ಟಕ್ಕೆ ಕೂರಿಸಿ, ಆಯಾ ಬಡಾವಣೆಯಲ್ಲಿಯೇ ದೇವರನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು ದಸರಾ ಈ ಬಾರಿಯೂ ಸರಳ; ಸಾಂಕೇತಿಕ ಮೆರವಣಿಗೆ ಆಯಾ ಬಡಾವಣೆಗಷ್ಟೇ ಸೀಮಿತ!
Linkup
ಬೆಂಗಳೂರು: ಮೈಸೂರಿನಂತೆಯೇ ನಗರದ ಜೆ.ಸಿ.ನಗರದಲ್ಲಿ ಹಲವು ವರ್ಷಗಳಿಂದಲೂ ಅದ್ಧೂರಿಯಾಗಿ ನಡೆಯುತ್ತಿದ್ದ ಐತಿಹಾಸಿಕ ಉತ್ಸವವನ್ನು ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ವರ್ಷವೂ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಶಾಸಕ ಬೈರತಿ ಸುರೇಶ್‌, ಪೊಲೀಸ್‌ ಅಧಿಕಾರಿಗಳು ಹಾಗೂ ಜೆ.ಸಿ.ನಗರ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪ್ರದಾಯಬದ್ಧವಾಗಿ ಎಲ್ಲಾ ಧಾರ್ಮಿಕ ಕಾರ್ಯಗಳೂ ನಡೆಯುತ್ತವೆ. ಆದರೆ, ನೂರಾರು ಪಲ್ಲಕ್ಕಿಗಳ ಅದ್ಧೂರಿ ಮೆರವಣಿಗೆ ಇರುವುದಿಲ್ಲ. ಬದಲಿಗೆ ಆಯಾ ಬಡಾವಣೆಯಲ್ಲಿರುವ ದೇವಸ್ಥಾನಗಳಲ್ಲಿಯೇ ದೇವರನ್ನು ಪಟ್ಟಕ್ಕೆ ಕೂರಿಸಿ, ಆಯಾ ಬಡಾವಣೆಯಲ್ಲಿಯೇ ದೇವರನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಈ ಬಾರಿ ಸರಳ ಮೆರವಣಿಗೆಯನ್ನು ನಾದಸ್ವರದೊಂದಿಗೆ ನಡೆಸಲು ಆವಕಾಶ ನೀಡಲಾಗಿದೆ. ಸಣ್ಣ ಪ್ರಮಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂಗಡಿ, ಮುಂಗಟ್ಟುಗಳು ಇರುತ್ತವೆ. ಅ.7ರಿಂದ 15ರವರೆಗೆ ಉತ್ಸವ ಮೈಸೂರು ಅರಸರ ಕಾಲದಲ್ಲಿ ಪ್ರತಿಷ್ಠಾಪನೆಯಾಗಿರುವ ಮಹೇಶ್ವರಮ್ಮ ಜೆ.ಸಿ.ನಗರದ ಆದಿ ದೇವತೆ. ಹೀಗಾಗಿ, ಈಕೆಗೆ ಮೊದಲ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವ ಆರಂಭವಾಗುತ್ತದೆ. ನಂತರ ಇಲ್ಲಿ ನೆಲೆಸಿರುವ ಇತರ ದೇವರಾದ ಗುಂಡುಮುನೇಶ್ವರ ಹಾಗೂ ಆಂಜನೇಯ ಸ್ವಾಮಿಗಳಿಗೆ ವಿಶೇಷ ಪೂಜೆ ನೆರವೇರುತ್ತದೆ. ಅ.7ರಂದು ಉತ್ಸವ ಆರಂಭವಾದರೆ, ಅ.15ರವರೆಗೆ ನಡೆಯುತ್ತದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಆರ್‌.ಪ್ರಕಾಶ್‌ ರಾವ್‌ ತಿಳಿಸಿದರು. ನಡೆದು ಬಂದ ಹಾದಿ ಮೊದಲನೇ ವಿಶ್ವ ಮಹಾಯುದ್ಧ(1914)ದ ಸಂದರ್ಭದಲ್ಲಿ ಕೃಷ್ಣರಾಜ ಒಡೆಯರ್‌ ಅವರು ಬ್ರಿಟಿಷರೊಂದಿಗೆ ಜರ್ಮನಿ ವಿರುದ್ಧ ಹೋರಾಡಲು ಮೈಸೂರಿನಿಂದ ಒಂದು ಸೈನಿಕ ಪಡೆಯನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆಗ ಈ ಬಡಾವಣೆಯಲ್ಲಿ ಗುಂಡುಮುನೇಶ್ವರನ ದೇವಾಲಯವಿತ್ತು. ಇಲ್ಲಿಗೆ ಆಗಮಿಸಿದ್ದ ಕೆಲ ಸೈನಿಕರು ಈ ಗುಂಡುಮುನೇಶ್ವರನ ಬಳಿ ಬಂದು 'ನಮ್ಮವರು ಯುದ್ಧದಲ್ಲಿ ಗೆದ್ದು ಬಂದರೆ ಪ್ರತಿ ವರ್ಷ ದಸರಾ ಉತ್ಸವ ಆಚರಿಸುತ್ತೇವೆ' ಎಂದು ಹರಕೆ ಹೊತ್ತುಕೊಂಡರು. ಕೊನೆಗೆ ಯುದ್ಧದಲ್ಲಿ ಜಯಗಳಿಸಿದರು. ಅಂದಿನಿಂದ ದಸರಾ ಆಚರಣೆ ನಡೆದುಕೊಂಡು ಬಂದಿತು. ಆರಂಭದಲ್ಲಿ ಮುನಿರೆಡ್ಡಿಪಾಳ್ಯ(ಈಗಿನ ಜೆ.ಸಿ.ನಗರ), ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ದಿಣ್ಣೂಧಿರು ಗ್ರಾಮಗಳು ಈ ದಸರಾ ಉತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮತ್ತಷ್ಟು ಗ್ರಾಮಗಳು ಸೇರಿದವು. ಇದರ ಫಲವಾಗಿ ನಾನಾ ಬಡಾವಣೆಗಳಿಂದ 72 ದೇವರುಗಳ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಇದೆಲ್ಲಕ್ಕೂ ಕೇಂದ್ರ ಸ್ಥಳ ಜೆ.ಸಿ.ನಗರ.