ನಟ ಅಜಯ್ ರಾವ್, ರಚಿತಾ ರಾಮ್‌ರನ್ನು ಬಂಧಿಸುವಂತೆ AICC ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ ಗಿರೀಶ್ ಮನವಿ

ನಟ ಅಜಯ್ ರಾವ್, ರಚಿತಾ ರಾಮ್ ಅಭಿನಯದ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿವೇಕ್ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಜಯ್, ರಚಿತಾ ರಾಮ್ ಬಂಧಿಸುವಂತೆ AICC ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ ಗಿರೀಶ್ ಮನವಿ ಮಾಡಿದ್ದಾರೆ.

ನಟ ಅಜಯ್ ರಾವ್, ರಚಿತಾ ರಾಮ್‌ರನ್ನು ಬಂಧಿಸುವಂತೆ AICC ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ ಗಿರೀಶ್ ಮನವಿ
Linkup
ನಟ , ಅಭಿನಯದ 'ಲವ್ ಯೂ ರಚ್ಚು' ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಫೈಟರ್ ವಿವೇಕ್ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ. ಬಿಡದಿಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ, ಫೈಟ್ ಮಾಸ್ಟರ್ ಕ್ರೇನ್ ಆಪರೇಟರ್, 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಸಿಕ್ಕಿದೆ. ನಿರ್ಮಾಪಕ, ಮ್ಯಾನೇಜರ್ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನಿನ್ನೆ (ಆಗಸ್ಟ್ 9) ಬಿಡದಿಯಲ್ಲಿ ಫೈಟರ್ ಸಾವಿನ ಪ್ರಕರಣಕ್ಕೆ ಸಂಬಂದಿಸಿದಂತೆ ರಾಮನಗರ ಎಸ್‌ಪಿ ಗಿರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಘಟನೆ ವೇಳೆ ನಿರ್ಮಾಪಕ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಜಮೀನು ಮಾಲೀಕ ರೈತನಿಗೆ ಏನು ವಿಷಯ ಗೊತ್ತಿರಲ್ಲಿಲ್ಲ. ಆದರೆ ಚಿತ್ರಿಕರಣಕ್ಕೆ ಅನುಮತಿ ಪಡೆಯಬೇಕಿತ್ತು. ನಿರ್ದೇಶಕ ಸಹ ಅನುಮತಿ ಪಡೆಯಬೇಕಿತ್ತು, ಆದರೆ ಪಡೆದುಕೊಂಡಿಲ್ಲ. ಅವರ ವಿರುದ್ಧ ಕೂಡ ಸುಮೊಟೋ ಕೇಸ್ ದಾಖಲಾಗಿದೆ. ನಿನ್ನೆ ತಡರಾತ್ರಿವರೆಗೆ ಮೃತರ ಪೋಷಕರು ಯಾರು ದೂರು ಕೊಡಲು ಮುಂದಾಗಲಿಲ್ಲ. ರಾಜಿ ಮಾಡಿಕೊಳ್ಳುವ ಸೂಚನೆಯಿತ್ತು, ಹಾಗಾಗಿ ಸುಮೊಟೋ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಎಂದು ರಾಮನಗರ ಎಸ್‌ಪಿ ಎಸ್.ಗಿರೀಶ್ ಪ್ರತಿಕ್ರಿಯೆ ನೀಡಿದರು. ಮತ್ತೊಂದೆಡೆ 'ಲವ್ ಯು ರಚ್ಚು' ಸಿನಿಮಾ ದುರಂತ ಪ್ರಕರಣಕ್ಕೆ ಸಂಬಂದಿಸಿದಂತೆ AICC ಹ್ಯೂಮನ್ ರೈಟ್ಸ್‌ನಿಂದ ರಾಮನಗರ ಎಸ್‌ಪಿಗೆ ದೂರು ನೀಡಲಾಗಿದೆ. ಸಾಹಸ ಕಲಾವಿದ ವಿವೇಕ್ ಸಾವು ಹಿನ್ನೆಲೆ ಚಿತ್ರನಟ ಅಜಯ್ ರಾವ್, ರಚಿತಾ ರಾಮ್ ಬಂಧಿಸುವಂತೆ ಆಗ್ರಹಿಸಿ ದೂರು ನೀಡಲಾಗಿದೆ. ಈ ಬಗ್ಗೆ ರಾಮನಗರ ಎಸ್ಪಿ ಎಸ್.ಗಿರೀಶ್ ರವರಿಗೆ ಮನವಿ ಪತ್ರ ನೀಡಲಾಗಿದೆ. AICC ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ ಗಿರೀಶ್‌ರಿಂದ ಮನವಿ ಮಾಡಲಾಗಿದೆ. ಮಾಸ್ತಿಗುಡಿ ಚಿತ್ರದ ದುರಂತ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ಬೇಜವಾಬ್ದಾರಿ ಕಾರಣವಾಗಿದೆ ಎಂದು ಗಿರೀಶ್ ದೂರಿನಲ್ಲಿ ತಿಳಿಸಿದ್ದಾರೆ. ಸಾಹಸ ದೃಶ್ಯದ ಚಿತ್ರಿಕರಣದ ವೇಳೆ ಆಂಬ್ಯೂಲೆನ್ಸ್ ಸೇರಿದಂತೆ ಯಾವುದೇ ರಕ್ಷಣಾತ್ಮಕ ಕ್ರಮ ಕೈಗೊಂಡಿಲ್ಲ. ಅಲ್ಲದೆ ದುರಂತ ಸಂಭವಿಸುತ್ತಿದ್ದಂತೆ ಮಾನವೀಯತೆ ಇಲ್ಲದೆ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದವರು ಪಲಾಯನ ಮಾಡಿದ್ದಾರೆ‌ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.