ದೀಪಾವಳಿ ಹಬ್ಬದಂದು ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ 'ಮೆಗಾ' ಫ್ಯಾಮಿಲಿ; ಸಾಯಿ ಧರಮ್‌ ತೇಜ್ ಸಂಪೂರ್ಣ ಗುಣಮುಖ

ಟಾಲಿವುಡ್‌ ನಟ ಸಾಯಿ ಧರಮ್‌ ತೇಜ್‌ ಅವರಿಗೆ ಸೆ.10ರಂದು ಅಪಘಾತವಾಗಿತ್ತು. ಆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

ದೀಪಾವಳಿ ಹಬ್ಬದಂದು ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ 'ಮೆಗಾ' ಫ್ಯಾಮಿಲಿ; ಸಾಯಿ ಧರಮ್‌ ತೇಜ್ ಸಂಪೂರ್ಣ ಗುಣಮುಖ
Linkup
ಸೆ.10- ಇದು ಮೆಗಾ ಫ್ಯಾಮಿಲಿಗೆ ಕರಾಳ ದಿನವಾಗಿತ್ತು. 'ಮೆಗಾ ಸ್ಟಾರ್' ಚಿರಂಜೀವಿ ಸಹೋದರಿಯ ಪುತ್ರ, ನಟ ಸಾಯಿ ಧರಮ್‌ ತೇಜ್‌ ಅಂದು ಬೈಕ್‌ ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೆ, ಅವರು ಕೋಮಾಗೂ ಹೋಗಿದ್ದರು. ತಕ್ಷಣವೇ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಮೇಲೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಸಾರ್ವಜನಿಕವಾಗಿ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ದೀಪಾವಳಿ ಹಬ್ಬದ ದಿನ ಮೆಗಾ ಫ್ಯಾಮಿಲಿ ಜೊತೆಗೆ ಗ್ರೂಪ್ ಫೋಟೋದಲ್ಲಿ ಸಾಯಿ ಧರಮ್‌ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ನಟ ಸಂಪೂರ್ಣ ಗುಣಮುಖರಾಗಿರುವುದನ್ನು ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ. ಬರೀ ಸಾಯಿ ಧರಮ್‌ ತೇಜ್ ಫ್ಯಾನ್ಸ್ ಮಾತ್ರವಲ್ಲ, ಆ ಫೋಟೋದಿಂದ ಅನೇಕರು ಖುಷಿಯಾಗಿದ್ದಾರೆ. ಹಾಗಾದರೆ, ಈ ಫೋಟೋದ ವಿಶೇಷತೆ ಏನು? ಮುಂದೆ ಓದಿ. ಒಟ್ಟಿಗೆ ಕಾಣಿಸಿಕೊಂಡ ಮೆಗಾ ಫ್ಯಾಮಿಲಿಫೋಟೋದಲ್ಲಿ ಸಂಪೂರ್ಣವಾಗಿ ಗುಣಮುಖರಾದ ಸಾಯಿ ಧರಮ್‌ ತೇಜ್ ಒಂದು ಕಡೆಯಾದರೆ, ಆ ಫೋಟೋದಲ್ಲಿನ ಮತ್ತೊಂದು ಆಕರ್ಷಣೆ ಎಂದರೆ, ಅಕಿರಾ ನಂದನ್‌ ಕೊನಿಡೆಲಾ! ಹೌದು, ಪವನ್ ಕಲ್ಯಾಣ್‌ರ ಪುತ್ರ ಅಕಿರಾ ಸಾಮಾನ್ಯವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ, ಈ ಬಾರಿ ದೀಪಾವಳಿಯನ್ನು ಮೆಗಾ ಫ್ಯಾಮಿಲಿ ಜೊತೆಗೆ ಆಚರಿಸಿದ್ದಾರೆ. ಈ ಫೋಟೋದಲ್ಲಿ ಚಿರಂಜೀವಿ, ಪವನ್‌ ಕಲ್ಯಾಣ್, ನಾಗ ಬಾಬು, ವರುಣ್ ತೇಜ್‌, , ಅಲ್ಲು ಅರ್ಜುನ್, ವೈಷ್ಣವ್ ತೇಜ್ ಕೂಡ ಇದ್ದಾರೆ. ಸಾಯಿ ಧರಮ್‌ಗೆ ಅಪಘಾತವಾಗಿದ್ದು ಎಲ್ಲಿ? ಅವರು ತಮ್ಮ ಸ್ಪೋರ್ಟ್ಸ್‌ ಬೈಕ್‌ನಲ್ಲಿ ಸೆ.10ರ ಶುಕ್ರವಾರ ರಾತ್ರಿ ಹೈದರಾಬಾದ್‌ನ ಮಾಧಾಪುರ್‌ ಬಳಿ ಹೋಗುವಾಗ ರಸ್ತೆ ಅಪಘಾತ ಸಂಭವಿಸಿತ್ತು. ಜ್ಯೂಬ್ಲಿ ಹಿಲ್ಸ್‌ನಿಂದ ಗಚಿಬೌಲಿ ಕಡೆಗೆ ಸಾಯಿ ಧರಮ್ ತೇಜ್ ಹೊರಟ್ಟಿದ್ದರು. ಅತಿಯಾದ ವೇಗದಿಂದ ಸ್ಪೋರ್ಟ್ಸ್ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸಾಯಿ ಧರಮ್ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆ ಅಪಘಾತದ ಬಳಿಕ ಸಾಯಿ ಧರಮ್ ತೇಜ್ ಅವರನ್ನು ಜ್ಯೂಬ್ಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆತರಲಾಗಿತ್ತು. ಸಾಯಿ ಧರಮ್ ತೇಜಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು ಮತ್ತು ಮೆದುಳು, ಸ್ಪೈನ್ ಸೇರಿದಂತೆ ಇತರೆ ಅಂಗಾಂಗಗಳಿಗೆ ಗಂಭೀರ ಪಟ್ಟಾಗಿರಲಿಲ್ಲ. ಆದರೆ, ಸಾಫ್ಟ್ ಟಿಶ್ಯೂ ಇಂಜ್ಯುರಿ ಮತ್ತು ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿದ್ದರಿಂದ 35 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿರಬೇಕಾಯಿತು. ಇನ್ನು, ಸಾಯಿ ಧರಮ್ ತೇಜ್ ನಟನೆಯ 'ರಿಪಬ್ಲಿಕ್' ಸಿನಿಮಾವು ಅ.1ರಂದು ರಿಲೀಸ್ ಆಗಿತ್ತು. ಅದರಲ್ಲಿ ಅವರು ಐಎಎಸ್ ಅಧಿಕಾರಿ ಪಂಜಾ ಅಭಿರಾಮ್ ಎಂಬ ಪಾತ್ರ ಮಾಡಿದ್ದರು. ಅವರಿಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್ ನಟಿಸಿದ್ದರು. ದೇವ ಕಟ್ಟ ನಿರ್ದೇಶನದ ಈ ಸಿನಿಮಾದಲ್ಲಿ ಜಗಪತಿ ಬಾಬು, ರಮ್ಯಾ ಕೃಷ್ಣ, ಸುಬ್ಬರಾಜು, ರಾಹುಲ್ ರಾಮಕೃಷ್ಣ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದರು. ಆದರೆ, ಆ ಸಿನಿಮಾ ಅಷ್ಟೇನು ದೊಡ್ಡ ಯಶಸ್ಸನ್ನು ಕಂಡಿರಲಿಲ್ಲ. ಇದೀಗ ಆ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ.