ತಲೆ ಮರೆಸಿಕೊಂಡ್ರಾ ಅನಿಲ್‌ ದೇಶ್‌ಮುಖ್‌? ಮಾಜಿ ಗೃಹ ಸಚಿವರ ಸುಳಿವಿಲ್ಲ ಎಂದ ಇ.ಡಿ!

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ಅಧಿಕಾರಿಗಳಿಗೂ ಗೊತ್ತಿಲ್ಲ ಎಂಬುದಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ಹೇಳಿದೆ.

ತಲೆ ಮರೆಸಿಕೊಂಡ್ರಾ ಅನಿಲ್‌ ದೇಶ್‌ಮುಖ್‌? ಮಾಜಿ ಗೃಹ ಸಚಿವರ ಸುಳಿವಿಲ್ಲ ಎಂದ ಇ.ಡಿ!
Linkup
ಮುಂಬಯಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸಂಪರ್ಕಕ್ಕೆ ಸಿಗುತ್ತಿಲ್ಲ. ಮತ್ತು ಅಧಿಕಾರಿಗಳಿಗೆ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂಬುದಾಗಿ () ಮಂಗಳವಾರ ಹೇಳಿದೆ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅನಿಲ್‌ ದೇಶ್‌ಮುಖ್‌ ವಿರುದ್ಧ ತನಿಖೆ ನಡೆಸುತ್ತಿದೆ. "ನಮಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ನಮಗೆ ತಿಳಿದಿಲ್ಲ. ಅವರಿರುವ ನಿಖರವಾದ ಸ್ಥಳ ಗೊತ್ತಿಲ್ಲ. ನಾವು ಇಂದಿನ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಇಂದಿನ ಆದೇಶದ ನಂತರ ಅವರು ತನಿಖೆಗೆ ಸಹಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ,” ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅನಿಲ್‌ ದೇಶ್‌ಮುಖ್‌ ಹಾಗೂ ಅವರ ಪುತ್ರ ಹೃಷಿಕೇಶ್‌ಗೆ ಸಮನ್ಸ್‌ ನೀಡಿತ್ತು. ಆದರೆ ವಿಚಾರಣೆಗೆ ಗೈರು ಹಾಜರಾಗಿದ್ದ ದೇಶ್‌ಮುಖ್‌, ಇದು ‘ಅಧಿಕಾರದ ವಿವೇಚನಾರಹಿತ ದುರ್ಬಳಕೆ’ ಎಂದು ಕಿಡಿಕಾರಿದ್ದರು. ಅಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೇ ತಾನು ಇ.ಡಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ದೇಶ್‌ಮುಖ್‌ ಖಂಡಾತುಂಡವಾಗಿ ಹೇಳಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 'ಬಲವಂತದ ಕ್ರಮ'ದಿಂದ ರಕ್ಷಣೆ ನೀಡುವಂತೆ ದೇಶಮುಖ್ ಸಲ್ಲಿಸಿರುವ ಅರ್ಜಿಯನ್ನು ಆಗಸ್ಟ್ 3 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿತ್ತು. ಇದಕ್ಕೂ ಮುನ್ನ ಜೂನ್‌ 25 ರಂದು ಇ.ಡಿ ದೇಶ್‌ಮುಖ್‌ ಅವರ ನಾಗ್ಪುರ ಮತ್ತು ಮುಂಬಯಿ ನಿವಾಸದ ಮೇಲೆ ದಾಳಿ ಮಾಡಿತ್ತು. ಅಷ್ಟೇ ಅಲ್ಲ ಐದು ಸ್ಥಳಗಳಲ್ಲಿಯೂ ಪರಿಶೀಲನೆ ನಡೆಸಿತ್ತು.