ಡಿ 10ರ ಬಳಿಕ ದೊಡ್ಡ ಬದಲಾವಣೆ: ಯತ್ನಾಳ್‌ ಭವಿಷ್ಯ

ಕಾಂಗ್ರೆಸ್‌ ಕಳೆದ 70 ವರ್ಷಗಳಿಂದ ಹಿಂದುಳಿದ ವರ್ಗದವರನ್ನು ಹಾಗೂ ದಲಿತರನ್ನು ವಂಚಿಸುತ್ತಲೇ ಬಂದಿದ್ದಾರೆ. ಇಂತಹ ವಂಚನೆ ಇನ್ನು ಹೆಚ್ಚು ಕಾಲ ನಡೆಯುವುದಿಲ್ಲ ಎನ್ನುವುದನ್ನು ಮತದಾರರು ತೋರಿಸಿದ್ದಾರೆ.

ಡಿ 10ರ ಬಳಿಕ ದೊಡ್ಡ ಬದಲಾವಣೆ: ಯತ್ನಾಳ್‌ ಭವಿಷ್ಯ
Linkup
ಬೆಂಗಳೂರು: ಡಿ. 10ರ ಬಳಿಕ ರಾಜ್ಯದಲ್ಲಿಬಹುಶಃ ಬಹಳ ದೊಡ್ಡ ಬದಲಾವಣೆಯಾಗಲಿದೆ. ಪೂರ್ಣ ಸಚಿವ ಸಂಪುಟವೇ ಪುನಾರಚನೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಭವಿಷ್ಯ ನುಡಿದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ,''ಎಲ್ಲ ಸಚಿವರ ಕಾರ್ಯ ನಿರ್ವಹಣೆ ಬಗ್ಗೆ ವಿವರ ಪಡೆದು ನಿಷ್ಕ್ರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು'' ಎಂದು ಹೇಳಿದರು. ''ಏಳೆಂಟು ಸಚಿವರು ವಿಧಾನಸೌಧಕ್ಕೆ ಬರುವುದಿಲ್ಲ. ಶಾಸಕರ ಭೇಟಿಗೆ ಸಮಯ ನೀಡುವುದಿಲ್ಲ. ಶಾಸಕರ ಮೊಬೈಲ್‌ ಕರೆಯನ್ನೂ ಸ್ವೀಕರಿಸುವುದಿಲ್ಲ. ಅವರು ಶಾಶ್ವತವಾಗಿ ಸಚಿವರಾಗಿರುವುದಾಗಿ ಭಾವಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಎಲ್ಲಶಾಸಕರ ಅಭಿಪ್ರಾಯ ಪಡೆದು ಸಂಪುಟ ಪುನರ್‌ ರಚಿಸಬೇಕು. ಸಂಬಂಧಪಟ್ಟ ಸಚಿವರ ಕಾರ್ಯ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಪ್ರತಿ ವಾರ, 15 ದಿನಕ್ಕೊಮ್ಮೆ ಪರಿಶೀಲಿಸಬೇಕು'' ಎಂದು ಅಭಿಪ್ರಾಯಪಟ್ಟರು. ''ಸಿಎಂ ಬೆನ್ನತ್ತಿ ಓಡಾಡುವ ಕೆಲ ಸಚಿವರಿದ್ದಾರೆ. ದಿನ ಬೆಳಗಾದರೆ ಸಿಎಂ ಮನೆಯಲ್ಲಿರುತ್ತಾರೆ. ವಿಧಾನಸೌಧದ ಕಚೇರಿಗೆ ತೆರಳಿ ಕೆಲಸ ಮಾಡುವುದನ್ನು ಬಿಟ್ಟು, ಮುಖ್ಯಮಂತ್ರಿಗಳ ಬಾಲಂಗೋಚಿಯಾಗಿ ತಿರುಗಾಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಅವರ ಕೆಲಸ ಮಾಡಲಿ. ಸಚಿವರು ವಿಧಾನಸೌಧ, ವಿಕಾಸಸೌಧದಲ್ಲಿರುವ ಕಚೇರಿಯಲ್ಲಿಇಲಾಖೆ ಪ್ರಗತಿ ಪರಿಶಿಲಿಸಲಿ. ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿ. ಈ ನಿಟ್ಟಿನಲ್ಲಿತಕ್ಷಣ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ'' ಎಂದು ಹೇಳಿದರು. ಮೂಲ ಬಿಜೆಪಿ ಸಚಿವರಲ್ಲೂಕೆಲವರು ಹಾಗೂ ವಲಸಿಗರಲ್ಲೂ ಕೆಲವರು ನಿಷ್ಕ್ರಿಯರಿದ್ದಾರೆ. ಅಂತಹವರನ್ನು ಕೈಬಿಡಬಹುದು. ನಿಷ್ಕ್ರಿಯ ಸಚಿವರು ಯಾರೆಂದು ನಾನು ಹೇಳುವುದಿಲ್ಲ. ನೀವೇ (ಮಾಧ್ಯಮಗಳು) ಸಾಕಷ್ಟು ವಿಶ್ಲೇಷಣೆ ಮಾಡಿರುತ್ತೀರಿ. ಅಂತಹ ಅಯೋಗ್ಯರು ಯಾರು ಎಂಬ ಹೆಸರನ್ನು ನೀವೇ ಹೇಳಿ ಎಂದು ಉತ್ತರಿಸಿದರು. ಬಿಜೆಪಿಯ ಸಾಧನೆಯೇ ಮುಖ್ಯ: ಈಶ್ವರಪ್ಪ ಮೈಸೂರು: ಮೇಲ್ಮನೆಗೆ ಸ್ಥಳೀಯ ಸಂಸ್ಥೆಗಳಿಂದ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆರ್‌. ರಘು ಜಯಗಳಿಸಲಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ‘‘ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪರ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಕಾರ್ಯಕರ್ತರು ಮನೆ ಮನೆಗೆ ಕಾರ್ಯಕ್ರಮಗಳನ್ನು ಕೊಂಡೊಯ್ಯಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ಕಂಡು ಬರುತ್ತಿದೆ. ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸುವುದರಲ್ಲಿಅನುಮಾನವೇ ಇಲ್ಲ,’’ ಎಂದರು. ‘‘ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬರಬಹುದು. ದಲಿತರು ಹಾಗೂ ಹಿಂದುಳಿದವರ ಸಬಲೀಕರಣಕ್ಕೆ ಕಾಂಗ್ರೆಸ್‌ ಶ್ರಮಿಸಲೇ ಇಲ್ಲ. ಅವರಿಗೆ ಬಡತನವನ್ನೇ ಶಾಶ್ವತವಾಗಿ ನೀಡಿದೆ’’ ಎಂದರು. ‘‘ಪ್ರಧಾನಿ ನರೇಂದ್ರ ಮೋದಿ ಆಡಳಿತ ವನ್ನು ಜನರು ನೋಡಿದ್ದಾರೆ. ಸ್ವಾವಲಂಬಿ ಭಾರತ ನಿರ್ಮಾಣವನ್ನು ಗಮನಿಸಿದ್ದಾರೆ. ಗಡಿಯಾಚೆಗಿನ ತಂಟೆಗೆ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಅಧಿಕಾರವನ್ನು ಸೈನ್ಯಕ್ಕೆ ನೀಡಲಾಗಿದೆ’’ ಎಂದು ಹೇಳಿದರು.