ಕೋವಿಡ್ ಚಿಕಿತ್ಸೆಯಲ್ಲಿನ ವಿಳಂಬ ತಗ್ಗಿಸಲು ಮುಂಬೈ ಮಾದರಿ ಅಳವಡಿಸಿಕೊಂಡ ಬೆಂಗಳೂರು

ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಸೂಕ್ತ ಮಾಹಿತಿ ಮತ್ತು ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಗ್ಗಿಸಲು ವಾರ್ಡ್ ಮಟ್ಟದಲ್ಲಿ ವಿಕೇಂದ್ರೀಕೃತ ತುರ್ತು ಸ್ಪಂದನೆಯ ಸಮಿತಿಗಳನ್ನು ರಚಿಸುವ ಮೂಲಕ ಮುಂಬೈ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ.

ಕೋವಿಡ್ ಚಿಕಿತ್ಸೆಯಲ್ಲಿನ ವಿಳಂಬ ತಗ್ಗಿಸಲು ಮುಂಬೈ ಮಾದರಿ ಅಳವಡಿಸಿಕೊಂಡ ಬೆಂಗಳೂರು
Linkup
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿರುವುದರ ನಡುವೆ ಚಿಕಿತ್ಸೆಯಲ್ಲಿನ ವಿಳಂಬ ತಗ್ಗಿಸಲು ಬೆಂಗಳೂರಿನಲ್ಲಿ ಮುಂಬೈ ಮಾದರಿಯನ್ನು ಅನುಸರಿಸಲು ಕರ್ನಾಟಕ ಸರ್ಕಾರ ಶನಿವಾರ ನಿರ್ಧರಿಸಿದೆ. ಬೆಂಗಳೂರಿನ ಎಲ್ಲ 198 ವಾರ್ಡ್‌ಗಳಲ್ಲಿ ವಿಕೇಂದ್ರಿತ ಚಿಕಿತ್ಸೆಯ ಸರದಿ ಮತ್ತು ತುರ್ತು ಪ್ರತಿಕ್ರಿಯೆಯ (ಡಿಟೆರ್) ಸಮಿತಿಗಳ ಮೂಲಕ ವಿಕೇಂದ್ರೀಕೃತ ವ್ಯವಸ್ಥೆಗೆ ಮುಂದಾಗಿದೆ. 'ಎಲ್ಲ ನಾಗರಿಕರಿಗೂ, ಮುಖ್ಯವಾಗಿ ಆರೋಗ್ಯ ವ್ಯವಸ್ಥೆಯ ಸೌಲಭ್ಯ ಅಥವಾ ಮಾಹಿತಿ ಇಲ್ಲದ ದುರ್ಬಲ ಸಮುದಾಯದವರಿಗೆ ಸಮಿತಿಗಳೊಂದಿಗಿನ ಸಮನ್ವಯದ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಇದರ ಉದ್ದೇಶ' ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ವಾರ್ಡ್ ಮಟ್ಟದ ಸಮುದಾಯ ಚಿಕಿತ್ಸೆ ಸರದಿ ವ್ಯವಸ್ಥೆಯು ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ನಗರ (ಬಿಯು) ಸಂಖ್ಯೆಯ ಸೃಷ್ಟಿ ಪ್ರಕ್ರಿಯೆ ಹಾಗೂ ಕೇಂದ್ರೀಕೃತ ಐಸಿಎಂಆರ್ ಪ್ರಕ್ರಿಯೆ ಕಾರಣದಿಂದ ರೋಗಿಗಳಿಗೆ ಫಲಿತಾಂಶದ ಮಾಹಿತಿ ನೀಡುವಲ್ಲಿ ವಿಳಂಬವಾಗುತ್ತಿವೆ ಎಂದು ಅವರು ಹೇಳಿದ್ದಾರೆ. 'ಈಗ ಅದಕ್ಷ ವ್ಯವಸ್ಥೆಯ ಕಾರಣದಿಂದ ದಾಖಲಾತಿಗೆ ಗುರುತಿಸುವಲ್ಲಿ 12 ಗಂಟೆ ವಿಳಂಬವಾಗುತ್ತಿದೆ. ಹಾಸಿಗೆ ಲಭ್ಯತೆಯ ಸಮಯವನ್ನು ತಗ್ಗಿಸುವುದು ನಮ್ಮ ಗುರಿ. ಲಘು ಲಕ್ಷಣಗಳಿರುವ ವ್ಯಕ್ತಿ ಆಸ್ಪತ್ರೆಗೆ ದಾಖಲಾಗದಂತೆ, ತೀವ್ರ ಕಾಯಿಲೆಗೆ ಒಳಗಾದ ಜನರು ಹತ್ತು ದಿನಗಳ ಒಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವಂತೆ ಹಾಗೂ ಮಧ್ಯಮ ಪ್ರಮಾಣದ ಕಾಯಿಲೆಯುಳ್ಳ ರೋಗಿ ಐದು ದಿನಗಳ ಒಳಗೆ ಸಿಸಿಸಿಗೆ ಸ್ಥಳಾಂತರಗೊಳ್ಳುವಂತೆ ನೋಡಿಕೊಳ್ಳುವ ಮೂಲಕ ಇದನ್ನು ಸಾಧ್ಯವಾಗಿಸಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ. ಈ ಸಮಿತಿಯು ಬಿಬಿಎಂಪಿ ಸದಸ್ಯರು, ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ವಯಂಸೇವಕರು, ನಾಗರಿಕ ಸಮಾಜದ ಗುಂಪುಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಮುಂತಾದವರನ್ನು ಒಳಗೊಂಡಿರುತ್ತದೆ. ಇದು ವಾರ್ಡ್ ಮಟ್ಟದ ಕೋವಿಡ್ ನಿರ್ವಹಣೆ ಹಾಗೂ ಕೋವಿಡ್ ರೋಗಿಗಳೊಂದಿಗಿನ ಪ್ರಾಥಮಿಕ ಸಂಪರ್ಕದ ಮೇಲ್ವಿಚಾರಣೆಗೆ ನೆರವಾಗುತ್ತದೆ ಎಂದಿದ್ದಾರೆ. ಇದು ಪರೀಕ್ಷೆಯ ಫಲಿತಾಂಶಕ್ಕೆ ಕಾಯುವಾಗ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ, ರೋಗ ಲಕ್ಷಣಗಳು, ತಪಾಸಣೆ, ಹೋಮ್ ಐಸೋಲೇಷನ್ ಮುಂತಾದವುಗಳಿಗೆ ಸಂಬಂಧಿಸಿದಂತೆ ಸೂಕ್ತ ಮತ್ತು ನಿಖರ ಮಾಹಿತಿಗಳನ್ನು ಒದಗಿಸಲಿದೆ.