
ಹೊಸದಿಲ್ಲಿ: ಸಂಘಟನೆಗಳು, ಉದ್ಯಮಿಗಳು, ಸಾರ್ವಜನಿಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಹರಿದುಬರದ ಹಿನ್ನೆಲೆಯಲ್ಲಿ ಪಕ್ಷದ ಸಂಸದರಿಂದಲೇ ದೇಣಿಗೆ ಸಂಗ್ರಹಿಸಲು ಮುಂದಾಗಿರುವ , ''ಪಕ್ಷದ ಸಂಸದರು ವಾರ್ಷಿಕ 50 ಸಾವಿರ ರೂ. ಕೊಡುಗೆ ನೀಡಬೇಕು,'' ಎಂದು ಹೊಸ ಆದೇಶ ಹೊರಡಿಸಿದೆ.
''ವೆಚ್ಚ ಕಡಿತಗೊಳಿಸಲು ಪಕ್ಷ ತೀರ್ಮಾನಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ () ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳ ಭತ್ಯೆಯನ್ನು 15 ಸಾವಿರ ರೂ. ನಿಂದ 12 ಸಾವಿರ ರೂ.ಗೆ ಇಳಿಸಲಾಗಿದೆ. ಅಲ್ಲದೆ, ವಿಮಾನದ ಟಿಕೆಟ್ ದರ ಹೆಚ್ಚಿದ್ದರೆ ನಾಯಕರು ರೈಲಿನ ಪ್ರಯಾಣ ಆಯ್ಕೆ ಮಾಡಿಕೊಳ್ಳಬೇಕು. 1400 ಕಿ.ಮೀ. ದೂರದ ರೈಲು ಪ್ರಯಾಣದ ದರವನ್ನು ಪಕ್ಷವು ಹಿಂದಿರುಗಿಸಲಿದೆ.
ಜತೆಗೆ ಕ್ಯಾಂಟೀನ್, ವಿದ್ಯುತ್, ಇಂಧನ, ಪತ್ರಿಕೆ ಸೇರಿದಂತೆ ಸಾಧ್ಯವಾದಷ್ಟು ಖರ್ಚುಗಳನ್ನು ಕಡಿಮೆ ಮಾಡಿ,'' ಎಂದು ಸೂಚಿಸಿದ್ದೇವೆ ಎಂಬುದಾಗಿ ಕಾಂಗ್ರೆಸ್ ಖಜಾಂಚಿ ಪವನ್ ಬನ್ಸಾಲ್ ಹೇಳಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ಸಿನ ದೇಣಿಗೆ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಇತ್ತೀಚಿನ ಚುನಾವಣೆ ಆಯೋಗ ವರದಿ ಹೇಳಿದೆ. ಇದರ ಬೆನ್ನಲ್ಲೇ ಪಕ್ಷವು ವೆಚ್ಚ ಕಡಿತಕ್ಕೆ ಮುಂದಾಗಿದೆ.