ಎಚ್ಚರ.. ಕಟ್ಟೆಚ್ಚರ..! ಬೆಂಗಳೂರಿನಲ್ಲಿ ಎರಡೇ ತಿಂಗಳಲ್ಲಿ ಶೇ. 84 ರಷ್ಟು ಡೆಂಗ್ಯೂ ಹೆಚ್ಚಳ..!

ಅಕ್ಟೋಬರ್‌ 21 ರಂದು ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಡೆಂಗ್ಯೂಗೆ ಐವರು ನಿಧನರಾದರು. ಇದು ಈ ವರುಷದಲ್ಲಿ ಈ ಕಾಯಿಲೆಗೆ ತೆತ್ತ ಜೀವ ಬೆಲೆಯಾಗಿದೆ. ನವೆಂಬರ್‌ ಆರಂಭದಿಂದ ಕರ್ನಾಟಕದಲ್ಲಿ 441 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಎಚ್ಚರ.. ಕಟ್ಟೆಚ್ಚರ..! ಬೆಂಗಳೂರಿನಲ್ಲಿ ಎರಡೇ ತಿಂಗಳಲ್ಲಿ ಶೇ. 84 ರಷ್ಟು ಡೆಂಗ್ಯೂ ಹೆಚ್ಚಳ..!
Linkup
: ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಪ್ರಕರಣಗಳು ವಿಪರೀತ ಹೆಚ್ಚುತ್ತಿವೆ. ಸೆಪ್ಟೆಂಬರ್‌ 15 ರವರೆಗೆ 2,987 ಪ್ರಕರಣಗಳು ಕಂಡು ಬಂದರೆ, ನವೆಂಬರ್‌ 17 ರವರೆಗೆ 2,516 ಪ್ರಕರಣಗಳು ದಾಖಲಾಗಿವೆ. ಎರಡೇ ತಿಂಗಳಲ್ಲಿ ಶೇ. 84 ಹೆಚ್ಚಳ ಹೇಗಾಯ್ತು ಎಂಬ ಪ್ರಶ್ನೆ ಮೂಡುತ್ತದೆ. ಅಕಾಲಿಕ ಮಳೆಯೇ ಸೊಳ್ಳೆಗಳ ಅಧಿಕ ಸಂತಾನೋತ್ಪತ್ತಿಗೆ ಕಾರಣವಾಗಿದೆ. ಇದರಿಂದ ಡೆಂಗ್ಯೂ ಹಬ್ಬಿತು ಎಂದು ವೈದ್ಯರು ಹೇಳುತ್ತಾರೆ. ಅಕ್ಟೋಬರ್‌ 21 ರಂದು ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಡೆಂಗ್ಯೂಗೆ ಐವರು ನಿಧನರಾದರು. ಇದು ಈ ವರುಷದಲ್ಲಿ ಈ ಕಾಯಿಲೆಗೆ ತೆತ್ತ ಜೀವ ಬೆಲೆಯಾಗಿದೆ. ನವೆಂಬರ್‌ ಆರಂಭದಿಂದ ಕರ್ನಾಟಕದಲ್ಲಿ 441 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಈ ಮಾಸದಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ. 'ನಿರಂತರ ವರ್ಷಧಾರೆಯಿಂದ ಕೆರೆ, ಕುಂಟೆ ಮತ್ತು ಹೊಂಡಗಳು ತುಂಬಿ ಕೊಂಡವು. ಅಗೆತದ ಸ್ಥಳಗಳಲ್ಲಿ ನೀರಿನ ಜಮಾವೆಯಿಂದ ಸೊಳ್ಳೆಗಳ ಸಂತತಿ ವೃದ್ಧಿಸಿತು' ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ (ಎನ್‌ವಿಬಿಡಿಸಿಪಿ)ದ ಜಂಟಿ ನಿರ್ದೇಶಕ ಡಾ ರಮೇಶ್‌ ಕೆ. ಕೌಲ್‌ ಗುಡ್‌ ಹೇಳಿದರು. ಡೆಂಗ್ಯೂನಿಂದ ಮೃತ ಪಟ್ಟ ಐವರು ರೋಗಿಗಳಲ್ಲಿ ಇಬ್ಬರು ರಾಮನಗರದವರು ಮತ್ತು ತಲಾ ಒಬ್ಬರು ಚಾಮರಾಜ ನಗರ, ದಕ್ಷಿಣ ಕನ್ನಡ ಮತ್ತು ಬೆಳಗಾವಿಗೆ ಸೇರಿದವರಾಗಿದ್ದಾರೆ. 2021 ರಲ್ಲಿ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಪರೀಕ್ಷೆಗೆ ಒಳಗಾಗಿದ್ದಾರೆ. ಶೇ. 40ರಷ್ಟು ಪರೀಕ್ಷೆಗಳು ಬೆಂಗಳೂರುವೊಂದರಲ್ಲೇ ಜರುಗಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ 1,038 ಪ್ರಕರಣ ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಮಾಣ ಶೇ. 19ರಷ್ಟಿದೆ ನವೆಂಬರ್‌ 1 ರಿಂದ 17 ರವರೆಗೆ ಬೆಂಗಳೂರಿನಲ್ಲಿ 110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಂತರ ಶಿವಮೊಗ್ಗ (393), ಕಲಬುರಗಿ (386), ಉಡುಪಿ (312), ಕೊಪ್ಪಳ (278) ದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಬಿಬಿಎಂಪಿ ಮತ್ತು ಎನ್‌ವಿಬಿಡಿಸಿಪಿ ಅಂಕಿ ಅಂಶಗಳಲ್ಲಿ ವ್ಯತ್ಯಾಸವಿದೆ. ಪಾಲಿಕೆ ಪ್ರಕಾರ, ನಗರದಲ್ಲಿ ಜನವರಿಯಿಂದ ನವೆಂಬರ್‌ 11ರ ತನಕ 1051 ಪ್ರಕರಣಗಳು ದಾಖಲಾಗಿವೆ.