'ಅವಳೇ ನನ್ನ ಹೆಂಡ್ತಿ', 'ತುಂಬಿದ ಮನೆ' ಖ್ಯಾತಿಯ ಉಮೇಶ್‌ಗೆ ಆರ್ಥಿಕ ಸಂಕಷ್ಟ! ಈ ಹಿರಿಯ ನಿರ್ದೇಶಕ ಮಾಡಿದ ಮನವಿ ಏನು?

'ಅವಳೇ ನನ್ನ ಹೆಂಡ್ತಿ', 'ಪ್ರೇಮ ಪರೀಕ್ಷೆ', 'ಬನ್ನಿ ಒಂದ್ಸಲ ನೋಡಿ', 'ಸಿಡಿದ್ದೆದ್ದ ಗಂಡು', 'ದಾಯಾದಿ', 'ತುಂಬಿದ ಮನೆ' ಹೀಗೆ ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಎಸ್‌. ಉಮೇಶ್‌ ಅವರು ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಜೊತೆಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

'ಅವಳೇ ನನ್ನ ಹೆಂಡ್ತಿ', 'ತುಂಬಿದ ಮನೆ' ಖ್ಯಾತಿಯ ಉಮೇಶ್‌ಗೆ ಆರ್ಥಿಕ ಸಂಕಷ್ಟ! ಈ ಹಿರಿಯ ನಿರ್ದೇಶಕ ಮಾಡಿದ ಮನವಿ ಏನು?
Linkup
1974ರ ಸಮಯದಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು ಎಸ್. ಉಮೇಶ್. ಆರಂಭದಲ್ಲಿ ಸಹಾಯಕ ನಿರ್ದೇಶಕ, ಸಂಕಲನಕಾರ ಹೀಗೆ ಸಿನಿಮಾರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿಕೊಂಡು, 1988ರ ಹೊತ್ತಿಗೆ '' ಮೂಲಕ ಸ್ವತಂತ್ರ ನಿರ್ದೇಶಕರಾದವರು ಉಮೇಶ್. ಮೊದಲ ಚಿತ್ರವೇ ಬ್ಲಾಕ್ ಬಸ್ಟರ್. ಆನಂತರ ನಿರ್ಮಾಣ/ನಿರ್ದೇಶನದಲ್ಲಿ ಮುಂದುವಿರಿದ ಅವರು ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಇಂದು ಅವರ ಕೈಯಲ್ಲಿ ಸಿನಿಮಾಗಳೂ ಇಲ್ಲ. ಜೊತೆಗೆ ಆರೋಗ್ಯವೂ ಇಲ್ಲದಂತಾಗಿದೆ. ಹೌದು, ಹಿರಿಯ ನಿರ್ದೇಶಕ ಎಸ್. ಉಮೇಶ್‌ಗೆ ಈಗ ಆರೋಗ್ಯ ಕೈಕೊಟ್ಟಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅವರು ದಾನಿಗಳಿಂದ ಹಣಕಾಸಿನ ನೆರವನ್ನು ಅವರು ಎದುರು ನೋಡುತ್ತಿದ್ದಾರೆ. ಮೊದಲ ಚಿತ್ರವೇ ಸೂಪರ್ ಹಿಟ್ ಈ ಕುರಿತು ವಿಡಿಯೋ ಮಾಡಿರುವ ಉಮೇಶ್‌, 'ನಾನು 48 ವರ್ಷಗಳ ಕಾಲ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದೇನೆ. ಆರಂಭದಲ್ಲಿ ಸಂಕಲನಕಾರ, ಸಹಾಯಕ ನಿರ್ದೇಶಕನಾಗಿದ್ದೆ. ನಂತರ 1988ರಲ್ಲಿ ಕಾಶಿನಾಥ್ ನಾಯಕತ್ವದಲ್ಲಿ ಮೊದಲ ಬಾರಿಗೆ 'ಅವಳೇ ನನ್ ಹೆಂಡ್ತಿ' ಸಿನಿಮಾವನ್ನು ನಿರ್ದೇಶಿಸಿದ್ದೆ. ಆ ಸಿನಿಮಾ ದೊಡ್ಡ ಯಶಸ್ಸು ಕಂಡು, ತೆಲುಗು ತಮಿಳು, ಹಿಂದಿ ಭಾಷೆಗಳಿಗೂ ರಿಮೇಕ್ ಆಯಿತು. ತಮಿಳು ವರ್ಷನ್‌ಗೆ ನಾನೇ ನಿರ್ದೇಶನ ಮಾಡಿದೆ. ಆದರೆ ಹಿಂದೆ ವರ್ಷನ್‌ಗೆ ನಿರ್ದೇಶನ ಮಾಡುವ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿತು' ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, 'ಅವಳೇ ನನ್ ಹೆಂಡ್ತಿ' ಚಿತ್ರದ ಹಿಂದಿ ರಿಮೇಕ್‌ನಲ್ಲಿ ಹೀರೋ ಆಗಿ ಆಮೀರ್ ಖಾನ್ ನಟಿಸಿದ್ದರು. ತಮಿಳಿನಲ್ಲೂ ಕೆಲಸ ಮಾಡಿದ್ದ ಉಮೇಶ್‌ 'ಅವಳೇ ನನ್ ಹೆಂಡ್ತಿ' ಚಿತ್ರದ ತಮಿಳು ರಿಮೇಕ್‌ ನಂತರ ಎರಡು ತಮಿಳು ಚಿತ್ರಗಳನ್ನೂ ನಿರ್ದೇಶನ ಮಾಡಿದ್ದೆ. ಅಲ್ಲಿ ನನಗೆ ಉತ್ತಮ ಹೆಸರು ಸಿಕ್ಕಿತ್ತು. ಆದರೆ, ನಾನು ಕನ್ನಡಿಗ. ಕರ್ನಾಟಕದಲ್ಲೇ ಉಳಿಯುವ ಪ್ರಯತ್ನ ಮಾಡಿ, 1990ರಲ್ಲಿ ಧೀರೇಂದ್ರ ಗೋಪಾಲ್‌, ಶ್ರುತಿ, ವಿನೋದ್ ರಾಜ್ ಇವರನ್ನೆಲ್ಲ ಇಟ್ಟುಕೊಂಡು 'ಬನ್ನಿ ಒಂದ್ಸಲ ನೋಡಿ' ಎಂಬ ಸಿನಿಮಾ ಶುರುಮಾಡಿದೆ. ಅದರ ನಿರ್ಮಾಣವೂ ನನ್ನದೇ ಆಗಿತ್ತು. ಆ ಸಿನಿಮಾದಿಂದ ನನಗೆ ಒಳ್ಳೆಯ ಹೆಸರು ಬಂದರೂ 7.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಆ ಸಿನಿಮಾವನ್ನು ಮಾರಾಟ ಮಾಡಲು ದೊಡ್ಡ ಕಷ್ಟವಾಯಿತು' ಎಂದು ಹೇಳಿಕೊಂಡಿದ್ದಾರೆ. 'ನಾನು 24 ಸಿನಿಮಾಗಳನ್ನು ಮಾಡಿದ್ದೆ. ಅದರಲ್ಲಿ ಮೂರನ್ನು ನಾನೇ ನಿರ್ಮಾಣ ಮಾಡಿದ್ದೆ. ಆ ಮೂರು ಸಿನಿಮಾಗಳಿಂದ ನನಗೆ ಯಾವುದೇ ಲಾಭವಾಗಲಿಲ್ಲ. ಕಷ್ಟನೋ ಸುಖನೋ ಜೀವನ ನಡೆಸಿಕೊಂಡು ಹೋಗ್ತಾ ಇದ್ದೇನೆ. ಎಲ್ಲೋ ನಾನು ಯಾಮಾರಿಬಿಟ್ಟೆ. ಕಳೆದ ವರ್ಷದ ಕೊರೊನಾ ಸಮಯದಲ್ಲಿ ನನಗೆ ಎಡ ಭಾಗದ ಕಿಡ್ನಿ ಫೇಲ್ಯೂರ್ ಆಯ್ತು. 1 ವರ್ಷ 3 ತಿಂಗಳಿನಿಂದ ಡಯಾಲಿಸಿಸ್ ಇಲ್ಲದೇ ಕೇವಲ ಮೆಡಿಸಿನ್ನಲ್ಲೇ ಡಾಕ್ಟರ್ಸ್ ನನ್ನನ್ನು ನೋಡಿಕೊಂಡಿದ್ದಾರೆ. ಒಂದುವೇಳೆ, ನನಗೆ ಡಯಾಲಿಸಿಸ್ ಶುರುವಾದರೆ ತುಂಬ ತೊಂದರೆ ಆಗುತ್ತದೆ. ಸತತವಾಗಿ 4 ವರ್ಷಗಳಿಂದ ಕೆಲಸ ಇಲ್ಲ. ಹಳಬರಿಗೆ ಬೆಲೆ ಇಲ್ಲ. ಈ ಕಾಯಿಲೆಗಳಿಂದ ನಾನು ಬಳಲಿ ಬೆಂಡಾಗಿದ್ದೇನೆ. ಐದು ದಿನಕ್ಕೆ ಒಂದು ಇಂಜೆಕ್ಷನ್ ಪಡೆಯಬೇಕಿದೆ. ಅದಕ್ಕೆ 2 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಯಾರಾದರೂ ದಾನಿಗಳು ನನಗೆ ಸಹಾಯ ಮಾಡುವುದಾದರೆ ನಾನು ಅದನ್ನು ಖಂಡಿತಾ ಸ್ವೀಕರಿಸುತ್ತೇನೆ' ಎಂದು ನಿರ್ದೇಶಕ ಉಮೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.