ಸಂಚಾರಿ ವಿಜಯ್ ಅವರ ಅಪೂರ್ಣ ಆಸೆ ಪೂರೈಸುವತ್ತ 'ಉಸಿರು' ಬಳಗದ ಮೊದಲ ಹೆಜ್ಜೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ದಿವಂಗತ ಸಂಚಾರಿ ವಿಜಯ್ ಅವರ ಅಪೂರ್ಣ ಆಸೆ ಪೂರೈಸುವ ನಿಟ್ಟಿನಲ್ಲಿ 'ಉಸಿರು' ಬಳಗ ಮೊದಲ ಹೆಜ್ಜೆಯನ್ನಿಟ್ಟಿದೆ.

ಸಂಚಾರಿ ವಿಜಯ್ ಅವರ ಅಪೂರ್ಣ ಆಸೆ ಪೂರೈಸುವತ್ತ 'ಉಸಿರು' ಬಳಗದ ಮೊದಲ ಹೆಜ್ಜೆ
Linkup
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ದಿವಂಗತ ಅವರ ಅಪೂರ್ಣ ಆಸೆ ಪೂರೈಸುವ ನಿಟ್ಟಿನಲ್ಲಿ 'ಉಸಿರು' ಬಳಗ ಮೊದಲ ಹೆಜ್ಜೆಯನ್ನಿಟ್ಟಿದೆ. ಬಂಡೀಪುರದ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಸುವ ಕಾರ್ಯಕ್ಕೆ 'ಉಸಿರು' ತಂಡ ಚಾಲನೆ ನೀಡಿದೆ. 'ಉಸಿರು' ಬಳಗದ ಜೊತೆಗೆ ಚರ್ಚೆ ಮಾಡಿದ್ದ ನಟ ಸಂಚಾರಿ ವಿಜಯ್ ಬಂಡೀಪುರ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ವಿಚಾರವಾಗಿ ವಿಜಯ್ 'ಉಸಿರು' ಬಳಗದ ಜೊತೆಗೆ ಚರ್ಚೆ ನಡೆಸಿದ್ದರು. ಅದು ಕಾರ್ಯಗತಕ್ಕೆ ಬರುವ ಮುನ್ನವೇ ಸಂಚಾರಿ ವಿಜಯ್ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿಬಿಟ್ಟರು. ಇದೀಗ ಸಂಚಾರಿ ವಿಜಯ್ ಅವರ ಈ ಅಪೂರ್ಣ ಆಸೆ ನೆರವೇರಿಸಲು 'ಉಸಿರು' ಬಳಗ ಸಿದ್ದವಾಗಿದೆ. ಮೊದಲ ಹೆಜ್ಜೆ ಇಟ್ಟ 'ಉಸಿರು' ಬಳಗ ಬಂಡೀಪುರ ಬುಡಕಟ್ಟು ಜನಾಂಗದ ಹಾಡಿಗೆ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಟಾರ್ಪಲ್ ಹೊದಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು 'ಉಸಿರು' ಬಳಗದಲ್ಲಿರುವ ಗೀತ ಸಾಹಿತಿ, ನಿರ್ದೇಶಕ ಕವಿರಾಜ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ''ಉಸಿರು' ಬಳಗದಿಂದ ಸಂಚಾರಿ ವಿಜಯ್ ಅವರ ಅಪೂರ್ಣ ಆಸೆ ಪೂರೈಸಲು ಮೊದಲ ಹೆಜ್ಜೆ. ಇಂದು ಬೆಳ್ಳಂಬೆಳಗ್ಗೆ ಏಳು ಗಂಟೆಗೆ ನಮ್ಮ ಬಳಗದ ಸೇನಾನಿಗಳಾದ ಪವನ್ ದರೆಗುಂಡಿ, ಮಾದೇಶ್ ಗೌಡ್ರು, ಶ್ರೀ ಹರ್ಷ ಹುಣಸೂರು, ಚಿನ್ಮಯ್ ಎಚ್‌ಡಿ ಕೋಟೆ ಸಮೀಪದ ಬುಡಕಟ್ಟು ಜನಾಂಗದ ಹಾಡಿಗೆ ಹೋಗಿದ್ದಾರೆ. ಅಲ್ಲಿನ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ಸಲುವಾಗಿ ಆ ಮೇಲ್ಚಾವಣಿಗಳಿಗೆ ಅನುಗುಣವಾಗಿ ಟಾರ್ಪಲ್ ಸಜ್ಜುಗೊಳಿಸಲು ಅಳತೆ ತೆಗೆದುಕೊಂಡು ಬರುವ ಕೆಲಸ ಆರಂಭಿಸಿದ್ದಾರೆ. ಈ ಯುವ ಗೆಳೆಯರ ಜೀವಪರತೆ, ಕಾರ್ಯನಿಷ್ಠೆಯನ್ನು ಹೊಗಳಲು ಪದಗಳೇ ಇಲ್ಲ. ಇವರೇ 'ಉಸಿರು' ತಂಡದ ನಿಜವಾದ ಶಕ್ತಿ'' ಎಂದು ಕವಿರಾಜ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಅವರ ಮತ್ತೊಂದು ಅಪೂರ್ಣ ಆಸೆಯನ್ನು ಪೂರ್ಣಗೊಳಿಸಲಿದೆ 'ಉಸಿರು' ಬಳಗ ಗುಲ್ಬರ್ಗಾ ಜಿಲ್ಲೆಯ ಕಡುಬಡತನದ ಕುಟುಂಬವೊಂದರ ನಾಲ್ಕು ವರ್ಷದ ಹೆಣ್ಣು ಮಗುವೊಂದರ ಹೃದಯ ಚಿಕಿತ್ಸೆಗೆ ನೆರವಾಗಲು ಸಂಚಾರಿ ವಿಜಯ್ ಮುಂದಾಗಿದ್ದರು. ಆ ಮಗುವಿನ ಹೃದಯ ಚಿಕಿತ್ಸೆಯ ವೆಚ್ಚವನ್ನೂ ಭರಿಸಲು 'ಉಸಿರು' ಬಳಗ ನಿರ್ಧರಿಸಿದೆ. 'ಉಸಿರು' ತಂಡದಲ್ಲಿ ಯಾರ್ಯಾರಿದ್ದಾರೆ? 'ಉಸಿರು' ತಂಡದಲ್ಲಿ ನಿರ್ದೇಶಕ ಕವಿರಾಜ್, ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ದಿನಕರ್ ತೂಗುದೀಪ, ಸಾಧು ಕೋಕಿಲ, ಚೈತನ್ಯ, ನೀತು ಶೆಟ್ಟಿ, ಸಂಚಾರಿ ವಿಜಯ್, ಅಕ್ಷತಾ ಪಾಂಡವಪುರ, ಸುಂದರ್ ಮುಂತಾದವರಿದ್ದಾರೆ. 'ಉಸಿರು' ತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕೈಜೋಡಿಸಿದ್ದಾರೆ.