22 ರಾಜ್ಯಗಳಲ್ಲಿ 'ಜನ ಆಶೀರ್ವಾದ ಯಾತ್ರೆ' ಮೂಲಕ ಹೊಸ ಸಚಿವರ ಪರಿಚಯ: ಬಿಜೆಪಿ ಯೋಜನೆ

ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಜನರಿಗೆ ಪರಿಚಯಿಸುವ ಸಲುವಾಗಿ ಬಿಜೆಪಿ 22 ರಾಜ್ಯಗಳಲ್ಲಿ ಜನ ಆಶೀರ್ವಾದ ಯಾತ್ರೆ ಎಂಬ ಜಾಥಾವನ್ನು ಆಯೋಜಿಸಲು ಉದ್ದೇಶಿಸಿದೆ.

22 ರಾಜ್ಯಗಳಲ್ಲಿ 'ಜನ ಆಶೀರ್ವಾದ ಯಾತ್ರೆ' ಮೂಲಕ ಹೊಸ ಸಚಿವರ ಪರಿಚಯ: ಬಿಜೆಪಿ ಯೋಜನೆ
Linkup
ಹೊಸದಿಲ್ಲಿ: ಕೇಂದ್ರದ ಹೊಸ ಸಚಿವರನ್ನು ಜನರಿಗೆ ಪರಿಚಯಿಸುವ ಸಲುವಾಗಿ ಆಗಸ್ಟ್ 16 ರಿಂದ 22 ರಾಜ್ಯಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲು ಚಿಂತನೆ ನಡೆಸಿದೆ. ''ಯು ದೇಶದ ಅನೇಕ ರಾಜ್ಯಗಳಲ್ಲಿ ನಡೆಯಲಿದ್ದು, ಕಳೆದ ತಿಂಗಳು ಸಂಪುಟಕ್ಕೆ ಸೇರ್ಪಡೆಯಾದ 39 ಸಚಿವರನ್ನು ಜನತೆಗೆ ಪರಿಚಯಿಸಲಾಗುತ್ತದೆ. 22 ರಾಜ್ಯಗಳಲ್ಲಿ ಈ ಯಾತ್ರೆಯು ಸುಮಾರು 19,567 ಕಿಮೀ ಪ್ರದೇಶವನ್ನು ಕ್ರಮಿಸಲಿದೆ. 212 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ 265 ಜಿಲ್ಲೆಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಮಾರ್ಗ ಮಧ್ಯೆ 1,663 ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸಚಿವರು ತಮ್ಮ ಮನೆಗಳಿಗೆ ಮರಳುವ ಮುನ್ನ ಜನರ ಬಳಿ ಹೋಗಬೇಕು ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಸಂದರ್ಭದಲ್ಲಿ ಕೇಂದ್ರದ ನೂತನ ಸಚಿವರಾಗಿ ಸೇರ್ಪಡೆಯಾದ ಸಂಸದರು ಇದುವರೆಗೂ ತಮ್ಮ ಮನೆಗೆ ಹೋಗಿಲ್ಲ. ಸ್ವಾತಂತ್ರ್ಯ ದಿನಾಚರಣೆ ಮುಗಿಯುವವರೆಗೂ ಅವರು ದಿಲ್ಲಿಯಲ್ಲಿಯೇ ಇರಬೇಕು ಎಂದು ಪ್ರಧಾನಿ ಆದೇಶಿಸಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ. ಯಾತ್ರೆಗೆ ಪೂರ್ವಭಾವಿಯಾಗಿ ಹೊಸ ಸಚಿವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಭೆಗಳನ್ನು ನಡೆಸುತ್ತಿದ್ದಾರೆ. ಈವರೆಗೂ 20 ಸಚಿವರನ್ನು ಭೇಟಿ ಮಾಡಿದ್ದು, ಬುಧವಾರ ಒಂದೇ ದಿನ 11 ಸಚಿವರೊಂದಿಗೆ ಚರ್ಚಿಸಿದ್ದಾರೆ. ಮಂಗಳವಾರ 9 ಸಚಿವರನ್ನು ಭೇಟಿಯಾಗಿದ್ದರು. 19 ರಾಜ್ಯಗಳ ಸಚಿವರು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಂಪುಟದ ಕಿರಿಯ ಸಚಿವರು ಆಗಸ್ಟ್ 16ರಿಂದ ಯಾತ್ರೆ ಆರಂಭಿಸಲಿದ್ದಾರೆ. ಸಂಪುಟ ಸಚಿವರು ನಾಲ್ಕು ದಿನಗಳ ಬಳಿಕ ಅದನ್ನು ಸೇರಿಕೊಳ್ಳಲಿದ್ದಾರೆ. ಸಚಿವರು ಮೂರರಿಂದ 10 ದಿನಗಳವರೆಗೆ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಾರಾಯಣ ರಾಣೆ ಏಳು ದಿನ ಯಾತ್ರೆಯಲ್ಲಿರಲಿದ್ದು, ಅತಿ ದೀರ್ಘ ಕಾಲ ಇರಲಿರುವ ಸಚಿವರೆನಿಸಿದ್ದಾರೆ. ತಮ್ಮದೇ ಲೋಕಸಭೆ ಕ್ಷೇತ್ರವಲ್ಲದೆ ಇತರೆ ಮೂರು ಲೋಕಸಭಾ ಕ್ಷೇತ್ರದಲ್ಲಿ ಕೂಡ ಸಚಿವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಜಿಲ್ಲೆಯಲ್ಲದೆ ಇತರೆ ನಾಲ್ಕು ಜಿಲ್ಲೆಗಳಿಗೆ ಸಹ ತೆರಳಲಿದ್ದಾರೆ.