ಸಂಪುಟ ವಿಸ್ತರಣೆ ಬಳಿಕ 23,123 ಕೋಟಿ ರೂ. ಕೊರೊನಾ ಪ್ಯಾಕೇಜ್‌ ಘೋಷಿಸಿದ ಕೇಂದ್ರ

ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು, 20,000 ಐಸಿಯು ಬೆಡ್‌ಗಳನ್ನು ನಿರ್ಮಿಸಲು ಕೇಂದ್ರದ ಕೊರೊನಾ ಪ್ಯಾಕೇಜ್‌ನಿಂದ ನೆರವು ನೀಡಲಾಗುತ್ತದೆ ಎಂದು ನೂತನ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ ಹೇಳಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ 23,123 ಕೋಟಿ ರೂ. ಕೊರೊನಾ ಪ್ಯಾಕೇಜ್‌ ಘೋಷಿಸಿದ ಕೇಂದ್ರ
Linkup
ಹೊಸದಿಲ್ಲಿ: ಸಂಪುಟ ವಿಸ್ತರಣೆ ಬಳಿಕ ಗುರುವಾರ ನಡೆದ ಮೊದಲ ಸಂಪುಟ ಸಭೆಯಲ್ಲೇ ಕೇಂದ್ರ ಸರಕಾರ 23,123 ಕೋಟಿ ರೂ. ಮೊತ್ತದ ಘೋಷಣೆ ಮಾಡಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಿ ಹೊಸದಾಗಿ ಆರೋಗ್ಯ, ಐಟಿ ಮತ್ತು ಪೆಟ್ರೋಲಿಯಂ ಸಚಿವರನ್ನು ನೇಮಕ ಮಾಡಿಕೊಂಡಿದ್ದರು. ಬೆನ್ನಿಗೆ ಇದೀಗ ನಡೆದ ಸಂಪುಟ ಸಭೆಯಲ್ಲಿ ಬೃಹತ್‌ ಕೊರೊನಾ ಪ್ಯಾಕೇಜ್‌ ಘೋಷಣೆಯಾಗಿದೆ. ಈ ಪ್ಯಾಕೇಜ್‌ನಿಂದ ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು, 20,000 ಐಸಿಯು ಬೆಡ್‌ಗಳನ್ನು ನಿರ್ಮಿಸಲು ಕೇಂದ್ರ ನೆರವು ನೀಡಲಿದೆ ಎಂದು ನೂತನ ಆರೋಗ್ಯ ಸಚಿವ ಹೇಳಿದ್ದಾರೆ. 23,000 ಕೋಟಿ ರೂ. ಮೊತ್ತದ ಪ್ಯಾಕೇಜ್‌ನಲ್ಲಿ ಕೇಂದ್ರ ಸರಕಾರವೇ 15,000 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. ಉಳಿದ 8,000 ಕೋಟಿ ರು. ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಿದ್ದೇವೆ ಎಂದು ಅವರು ವಿವರ ನೀಡಿದ್ದಾರೆ. ಬುಧವಾರ ಕೊರೊನಾ ಬಿಕ್ಕಟ್ಟಿನ ವೇಳೆ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಜೆ ವೇಳೆಗೆ ಮನ್‌ಸುಖ್‌ ಮಾಂಡವಿಯಾ ಅವರನ್ನು ನೂತನ ಆರೋಗ್ಯ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.