ಜೀವನ್ಮರಣ ಹೋರಾಟದಲ್ಲಿ ಹಿರಿಯ ನಟ ಶಿವರಾಂ: ಬ್ರೇನ್ ಡ್ಯಾಮೇಜ್ ಆಗಿದೆ ಎಂದ ವೈದ್ಯರು

ನಟ ಶಿವರಾಂ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನಟ ಶಿವರಾಂ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಜೀವನ್ಮರಣ ಹೋರಾಟದಲ್ಲಿ ಹಿರಿಯ ನಟ ಶಿವರಾಂ: ಬ್ರೇನ್ ಡ್ಯಾಮೇಜ್ ಆಗಿದೆ ಎಂದ ವೈದ್ಯರು
Linkup
ಕನ್ನಡ ಚಿತ್ರರಂಗದ ಹಿರಿಯ ನಟ (Kannada Actor ) ಅವರ ಸ್ಥಿತಿ ಗಂಭೀರವಾಗಿದೆ. ಹೊಸಕೆರೆಹಳ್ಳಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಟ ಶಿವರಾಂ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನಟ ಶಿವರಾಂ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ತಲೆಗೆ ಗಂಭೀರ ಪೆಟ್ಟು ಮೂರು ದಿನಗಳ ಹಿಂದೆಯಷ್ಟೇ ಕಾರು ಸಂಭವಿಸಿತ್ತು. ಕಾರು ಅಪಘಾತದಲ್ಲಿ ನಟ ಶಿವರಾಂ ಗಾಯಗೊಂಡಿದ್ದರು. ಅದಾದ ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಶಿವರಾಂ ತೆರಳಿದ್ದರು. ಅಲ್ಲಿ ಬಿದ್ದು ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಪರಿಣಾಮ, ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೆ. ವೈದ್ಯರು ಹೇಳುವುದೇನು? ‘’ಶಿವರಾಂ ನನ್ನ ಫ್ಯಾಮಿಲಿ ಫ್ರೆಂಡ್. ನನ್ನ ಆರೈಕೆಯಲ್ಲೇ ಇದ್ದರು. ಇವತ್ತು ತೀವ್ರ ದುಃಖಕರ ಸಂಗತಿ. ಯಾಕಂದ್ರೆ, ಡಾಕ್ಟರ್ ಆಗಿಯೂ ಟ್ರೀಟ್ ಮಾಡಬೇಕು. ಆತ್ಮೀಯರಾಗಿಯೂ ನೋಡಬೇಕು. ನಮಗೆ ನಾವೇ ಧೈರ್ಯ ತೆಗೆದುಕೊಳ್ಳಬೇಕು. ಆ ಪರಿಸ್ಥಿತಿ ಬಂದಿದೆ. ಮಂಗಳವಾರ ಅಯ್ಯಪ್ಪ ಸ್ವಾಮಿ ಪೂಜೆ ಮಾಡೋಕೆ ಹೋಗಿದ್ದಾರೆ. ಸಾಯಂಕಾಲ ಬಿದ್ದಿದ್ದಾರೆ. ಬಳಿಕ ಅವರ ಉಸಿರಾಟಕ್ಕೆ ತೊಂದರೆಯಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರಿಗೆ ಪ್ರಜ್ಞೆ ಇರಲಿಲ್ಲ. ಬ್ರೇನ್ ಕಂಪ್ರೆಸ್ ಆಗಿತ್ತು. ಬ್ರೇನ್ ಡ್ಯಾಮೇಜ್ ಆಗಿತ್ತು. ಚಿಕಿತ್ಸೆಗೆ ಸ್ಪಂದಿಸಿದರೆ ನಾವೇನಾದರೂ ಮಾಡಬಹುದು’’ ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಮೋಹನ್ ಹೇಳಿದ್ದಾರೆ. ಪುತ್ರ ರವಿಶಂಕರ್ ಏನಂತಾರೆ? "ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಆಕ್ಸಿಡೆಂಟ್ ಆಗಿತ್ತು. ಅಂದಿನಿಂದ ಅವರಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ಹೋದಾಗ ಬಿದ್ದರು. ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಮೊನ್ನೆ ರಾತ್ರಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೇವೆ. ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿದೆ. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದ್ದರು. ಆದರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ" ಎಂದು ಶಿವರಾಂ ಪುತ್ರ ರವಿಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಿರಿಯ ನಟ ಶಿವರಾಂ ಕನ್ನಡ ಚಿತ್ರರಂಗದಲ್ಲಿ ಶಿವರಾಂ ‘ಶಿವರಾಮಣ್ಣ’ ಅಂತಲೇ ಹೆಸರುವಾಸಿ. ಚಿಕ್ಕವಯಸ್ಸಿನಲ್ಲೇ ನಟನೆಯತ್ತ ಆಸಕ್ತಿ ಬೆಳೆಸಿಕೊಂಡ ಶಿವರಾಂ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಸೀತಾರಾಮಶಾಸ್ತ್ರಿ ಅವರಿಗೆ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಶಿವರಾಂ ಪದಾರ್ಪಣೆ ಮಾಡಿದರು. ಕೆ.ಎಸ್‌.ಎಲ್.ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸ್‌ರಾವ್ ಮತ್ತು ಪುಟ್ಟಣ್ಣ ಕಣಗಾಲ್‌ರಿಗೆ ಶಿವರಾಂ ಸಹಾಯಕ ನಿರ್ದೇಶಕರಾಗಿದ್ದರು. ‘ಶರಪಂಜರ’, ‘ನಾಗರಹಾವು’, ‘ಶುಭಮಂಗಳ’, ‘ಬಂಗಾರದ ಪಂಜರ’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’, ‘ಹಾಲು ಜೇನು’, ‘ಹೊಂಬಿಸಿಲು’, ‘ಗುರು ಶಿಷ್ಯರು’ ಮುಂತಾದ ಅನೇಕ ಸಿನಿಮಾಗಳಲ್ಲಿ ಶಿವರಾಂ ಪೋಷಕ ಪಾತ್ರ ನಿರ್ವಹಿಸಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಶಿವರಾಂ ಗುರುತಿಸಿಕೊಂಡಿದ್ದಾರೆ.