ಅಮರಾವತಿಯಲ್ಲಿ ನಾಲ್ಕು ದಿನ ನಿಷೇಧಾಜ್ಞೆ: ಇಂಟರ್‌ನೆಟ್‌ ಸೇವೆ ಸ್ಥಗಿತ!

ಬಂದ್‌ ವೇಳೆ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ನಗರದಲ್ಲಿ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂಟರ್‌ನೆಟ್‌ ಸೇವೆಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ಅಮರಾವತಿಯಲ್ಲಿ ನಾಲ್ಕು ದಿನ ನಿಷೇಧಾಜ್ಞೆ: ಇಂಟರ್‌ನೆಟ್‌ ಸೇವೆ ಸ್ಥಗಿತ!
Linkup
ಮುಂಬಯಿ: ಬಂದ್‌ ವೇಳೆ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ನಗರದಲ್ಲಿ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೋಮುಸೌಹಾರ್ದತೆ ಕದಡುವ ಯತ್ನ ನಡೆಯುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಂಟರ್‌ನೆಟ್‌ ಸೇವೆಗಳನ್ನು ಕೂಡ ನಗರಾದ್ಯಂತ ಮೂರು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ತ್ರಿಪುರಾದಲ್ಲಿ ಮಸೀದಿಗಳ ಹಾನಿ ಖಂಡಿಸಿ ಶುಕ್ರವಾರ ಮುಸ್ಲಿಂ ಸಂಘಟನೆಗಳು ರ್ಯಾಲಿ ಆಯೋಜಿಸಿದ್ದವು. ಇದನ್ನು ಖಂಡಿಸಿ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಗಳು ಶನಿವಾರ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ದುಷ್ಕರ್ಮಿಗಳ ಗುಂಪೊಂದು ಹಲವು ಅಂಗಡಿಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದೆ. ಪರಿಣಾಮ ಎರಡು ಗುಂಪುಗಳ ನಡುವೆ ವಾಗ್ವಾದ ಮತ್ತು ಹಿಂಸಾಚಾರ ಸಂಭವಿಸಿದೆ. ಶನಿವಾರ ಬೆಳಗ್ಗೆ ಕೇಸರಿ ಬಾವುಟಗಳನ್ನು ಹಿಡಿದು ನೂರಾರು ಜನರ ಗುಂಪೊಂದು ರಾಜ್‌ಕಮಲ್‌ ಚೌಕದಲ್ಲಿ ನಡಿಗೆಯಲ್ಲಿತ್ತು. ಈ ವೇಳೆ ಅಂಗಡಿ ಹಾಗೂ ಬಾವುಟ ಹಿಡಿದ ಜನರ ಮೇಲೆ ಕಲ್ಲುಗಳು ಬಂದು ಬಿದ್ದಿವೆ. ದುಷ್ಕರ್ಮಿಗಳನ್ನು ಬೆನ್ನಟ್ಟಲು ಕೇಸರಿ ಬಾವುಟದ ಪಡೆಯು ಮುನ್ನುಗ್ಗಿ ಹಿಂಸಾಚಾರ ಹೆಚ್ಚಾಗುವ ಸುಳಿವು ಸಿಕ್ಕ ಕೂಡಲೇ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಗುಂಪುಗಳನ್ನು ಚದುರಿಸಿದ್ದಾರೆ ಎಂದು ಅಮರಾವತಿಯ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ. ಶುಕ್ರವಾರ ಮುಸ್ಲಿಮರು ನಡೆಸಿದ ರ್ಯಾಲಿ ವೇಳೆ ಕೂಡ ಕಲ್ಲು ತೂರಾಟ ನಡೆದಿತ್ತು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅಮರಾವತಿ, ಯಾವತ್ಮಲ್‌, ನಾಂದೇಡ್‌, ವಶೀಮ್‌, ಮಾಲೇಗಾಂವ್‌ನಲ್ಲಿ ಸ್ಥಿತಿ ಸೂಕ್ಷ್ಮವಾಗಿದೆ. ಹಿಂಸಾಚಾರಕ್ಕೆ ಯತ್ನ, ಕಲ್ಲು ತೂರಾಟ ಪ್ರಕರಣ ಸಂಬಂಧ ಒಟ್ಟಾರೆ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾವಿಕಾಸ್‌ ಅಘಾಡಿ ನೇತೃತ್ವದ ಸರಕಾರವನ್ನು ಅಸ್ಥಿರಗೊಳಿಸಲು ಕೋಮುಗಲಭೆಗೆ ಪ್ರಚೋದನೆ ನೀಡಲು ಪ್ರತಿಪಕ್ಷ ಬಿಜೆಪಿ ಸಂಚು ಹೆಣೆದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪ ಕೂಡ ಮಾಡಲಿದ್ದಾರೆ. - ಸಂಜಯ್‌ ರಾವತ್‌, ಶಿವಸೇನೆ ವಕ್ತಾರ ತ್ರಿಪುರಾದಲ್ಲಿ ನಡೆಯದೇ ಇರದ ಒಂದು ಘಟನೆ ಆಧಾರಿಸಿ ಮಹಾರಾಷ್ಟ್ರದಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಬಾರದು. ಇದು ತಪ್ಪು. ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರ ಹಾನಿಯಾಗಿಲ್ಲ ಎಂದು ಅಲ್ಲಿನ ಸರಕಾರವೇ ತಿಳಿಸಿದೆ. ಜನರು ಶಾಂತವಾಗಿ, ತಾಳ್ಮೆಯಿಂದ ವರ್ತಿಸಬೇಕು ಎಂದು ಮನವಿ ಮಾಡುವೆ. - ದೇವೇಂದ್ರ ಫಡ್ನವಿಸ್‌, ಪ್ರತಿಪಕ್ಷ ಬಿಜೆಪಿ ನಾಯಕ