‘ಸಾರ್‌ ನಾನು ಮದುಮಗ.. ಮುಹೂರ್ತಕ್ಕೆ ಲೇಟ್‌ ಆಗ್ತಿದೆ. ಪ್ಲೀಸ್‌ ಬಿಟ್ಬಿಡಿ’; ಪೊಲೀಸರ ಕೈಲಿ ತಗ್ಲಾಕ್ಕೊಂಡ ವರ

ಮಾಗಡಿ ರಸ್ತೆ ಸಂಚಾರ ಪೊಲೀಸರು ಭಾನುವಾರ ಮಧ್ಯಾಹ್ನ ಮುಖ್ಯರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಬಂದ ಇಬ್ಬರು ಸವಾರರಿದ್ದ ಬೈಕ್‌ ನಿಲ್ಲಿಸಿ ಅನಗತ್ಯವಾಗಿ ಹೊರಗೆ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ, ನಾನು ಮದುವೆ ಗಂಡು. ಇವರು ನನ್ನ ತಂದೆ. ಮದುವೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ ಎಂದಿದ್ದಾರೆ. ಕಾರ್ಡ್‌ ನೋಡಿದ ಬಳಿಕ ಮದುಮಗನಿಗೆ ಶುಭಾಶಯ ತಿಳಿಸಿದ ಪೊಲೀಸರು, ಆತನನ್ನು ಕಳುಹಿಸಿಕೊಟ್ಟರು.

‘ಸಾರ್‌ ನಾನು ಮದುಮಗ.. ಮುಹೂರ್ತಕ್ಕೆ ಲೇಟ್‌ ಆಗ್ತಿದೆ. ಪ್ಲೀಸ್‌ ಬಿಟ್ಬಿಡಿ’; ಪೊಲೀಸರ ಕೈಲಿ ತಗ್ಲಾಕ್ಕೊಂಡ ವರ
Linkup
ಬೆಂಗಳೂರು: ಕೋವಿಡ್‌ ನಿಯಮ ಪಾಲನೆ ವೇಳೆ ಸಂಚಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮದುಮಗ, ನಾನೇ ಮದುವೆ ಗಂಡು. ಮೂಹೂರ್ತಕ್ಕೆ ತಡವಾಗುತ್ತಿದೆ ಬಿಡಿ ಸಾರ್‌ ಎಂದು ಮನವಿ ಮಾಡಿದ ಪ್ರಸಂಗ ನಗರದಲ್ಲಿ ನಡೆದಿದೆ. ಮಾಗಡಿ ರಸ್ತೆ ಸಂಚಾರ ಪೊಲೀಸರು ಭಾನುವಾರ ಮಧ್ಯಾಹ್ನ ಮುಖ್ಯರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಬಂದ ಇಬ್ಬರು ಸವಾರರಿದ್ದ ಬೈಕ್‌ ನಿಲ್ಲಿಸಿ ಅನಗತ್ಯವಾಗಿ ಹೊರಗೆ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ, ನಾನು ಮದುವೆ ಗಂಡು. ಇವರು ನನ್ನ ತಂದೆ. ಮದುವೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ ಎಂದಿದ್ದಾರೆ. ಆಶ್ಚರ್ಯಗೊಂಡ ಪೊಲೀಸರು, ಮದುವೆ ಕಾರ್ಡ್‌ ತೋರಿಸಿ ಎಂದು ಕೇಳಿದಾಗ, ಮದುಮಗ ಕಾರ್ಡ್‌ ತೆಗೆದು ತೋರಿಸಿದ್ದಾರೆ. ಮದುವೆಗೆ 50 ಜನರಿಗೆ ಸೀಮಿತಗೊಳಿಸಲಾಗಿದೆ. ಹೀಗಾಗಿ, ಕಲ್ಯಾಣ ಮಂಟಪದ ಬದಲು ಬದಲು ದೇಗುಲದಲ್ಲಿ ಮದುವೆ ಆಗುತ್ತಿದ್ದೇವೆ. ಮೂಹೂರ್ತಕ್ಕೆ ವಿಳಂಬವಾಗುತ್ತಿರುವ ಕಾರಣ ಬೈಕ್‌ನಲ್ಲಿ ಹೋಗುತ್ತಿದ್ದೇವೆ. ಬೇಗ ಬಿಡಿ ಸಾರ್‌ ಎಂದಿದ್ದಾರೆ. ಕಾರ್ಡ್‌ ನೋಡಿದ ಬಳಿಕ ಮದುಮಗನಿಗೆ ಶುಭಾಶಯ ತಿಳಿಸಿದ ಪೊಲೀಸರು, ಆತನನ್ನು ಕಳುಹಿಸಿಕೊಟ್ಟರು.