ಶಿವಣ್ಣ ಸಿನಿಮಾಕ್ಕೆ ಸಾಥ್ ನೀಡಿದ ಅಪ್ಪು! 'ಹ್ಯಾಟ್ರಿಕ್ ಹೀರೋ' ಫ್ಯಾನ್ಸ್‌ಗೆ ಇದು ಬರ್ತ್‌ಡೇ ಗಿಫ್ಟ್

'ಸೆಂಚುರಿ ಸ್ಟಾರ್' ಶಿವರಾಜ್‌ಕುಮಾರ್ ಅವರಿಗೆ ಜುಲೈ 12ರಂದು ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ಬಾರಿ ಅವರು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಹಾಗಂತ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಕಿಲ್ಲ. ಅಭಿಮಾನಿಗಳಿಗೆ ಈ ಬಾರಿ ಒಂದು ಸರ್ಪ್ರೈಸ್ ಗಿಫ್ಟ್ ಇದೆ.

ಶಿವಣ್ಣ ಸಿನಿಮಾಕ್ಕೆ ಸಾಥ್ ನೀಡಿದ ಅಪ್ಪು! 'ಹ್ಯಾಟ್ರಿಕ್ ಹೀರೋ' ಫ್ಯಾನ್ಸ್‌ಗೆ ಇದು ಬರ್ತ್‌ಡೇ ಗಿಫ್ಟ್
Linkup
ನಟ ಶಿವರಾಜ್‌ಕುಮಾರ್‌ ಅವರಿಗೆ ಜುಲೈ 12ರಂದು ಜನ್ಮದಿನದ ಸಂಭ್ರಮ. ಈ ಬಾರಿ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ಕೊರೊನಾ ಮಹಾಮಾರಿ! 'ನನ್ನ ಹುಟ್ಟುಹಬ್ಬದ ಸಂಭ್ರಮಾಚರಣೆಗಿಂತ ಅಭಿಮಾನಿಗಳ ಆರೋಗ್ಯ ಮುಖ್ಯ' ಎಂದಿರುವ ಶಿವಣ್ಣ ಅಂದು ಮನೆಯಲ್ಲಿ ಇರುವುದಿಲ್ಲ. ಹಾಗಂತ ಫ್ಯಾನ್ಸ್ ಬೇಸರ ಮಾಡಿಕೊಳ್ಳಬೇಕಿಲ್ಲ. ಈ ಬಾರಿ 'ಹ್ಯಾಟ್ರಿಕ್ ಹೀರೋ' ಹುಟ್ಟುಹಬ್ಬಕ್ಕೆ ಒಂದು ಗಿಫ್ಟ್ ರೆಡಿ ಆಗಿದೆ. ಶಿವಣ್ಣ ಸಿನಿಮಾಕ್ಕೆ ಅಪ್ಪು ಸಾಥ್ ಅಭಿನಯದ 123ನೇ ಸಿನಿಮಾಕ್ಕೆ ಈ ಹಿಂದೆ 'ಶಿವಪ್ಪ' ಅಂತ ಶೀರ್ಷಿಕೆ ಇಡಲಾಗಿತ್ತು. ಅದೇ ಹೆಸರಲ್ಲಿ ಒಂದಷ್ಟು ದಿನ ಶೂಟಿಂಗ್ ಕೂಡ ನಡೆದಿತ್ತು. ಆದರೆ, ಅದ್ಯಾಕೋ ಈಗ ಆ ಶೀರ್ಷಿಕೆಗೆ ಕೋಕ್‌ ನೀಡಿ, ಹೊಸ ಟೈಟಲ್ ಫಿಕ್ಸ್ ಮಾಡಿಕೊಂಡಿದೆ ಚಿತ್ರತಂಡ. ವಿಶೇಷವೆಂದರೆ, ಅದನ್ನು ಲಾಂಚ್ ಮಾಡುವುದು 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್. ಹೌದು, ಚಿತ್ರದ ಫಸ್ಟ್‌ ಲುಕ್ ಜುಲೈ 10ರಂದು ರಿಲೀಸ್ ಆದರೆ, ಚಿತ್ರದ ಶೀರ್ಷಿಕೆಯನ್ನು ಜುಲೈ 12ರಂದು ಲಾಂಚ್ ಮಾಡಲಿದ್ದಾರೆ. ಬಹುತಾರಾಗಣದ ಸಿನಿಮಾವಿದು ಶಿವರಾಜ್‌ಕುಮಾರ್ ನಟನೆಯ ಈ 123ನೇ ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ಜೊತೆಗೆ ನಟ ಜೊತೆಯಾಗಿದ್ದಾರೆ. ಈ ಹಿಂದೆ 'ಟಗರು' ಚಿತ್ರದಲ್ಲಿ ಇಬ್ಬರು ಮುಖಾಮುಖಿ ಆಗಿದ್ದರು. ಇನ್ನು, 'ದಿಯಾ' ಸಿನಿಮಾದ ಮೂಲಕ ಜನಪ್ರಿಯಗೊಂಡಿರುವ ಪೃಥ್ವಿ ಅಂಬರ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಕೃಷ್ಣ ಸಾರ್ಥಕ್ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣ ಜನ್ಮದಿನ ಆಚರಣೆ ಇಲ್ಲ ಇನ್ನು, ಶಿವಣ್ಣ ಈ ಬಾರಿ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆ ಕುರಿತು ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, 'ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆ ಆಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಜುಲೈ 12 ನನ್ನ ಹುಟ್ಟುಹಬ್ಬ. ಕೆಲವು ಕಾರಣಗಳಿಂದ ಅಂದು ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಿಮಗೆಷ್ಟು ಬೇಜಾರು ಆಗುತ್ತಿದೆಯೋ, ನನಗೂ ಅಷ್ಟೇ ಬೇಜಾರಾಗುತ್ತಿದೆ. ನಿಮ್ಮ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿ.. ನಿಮ್ಮ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ನನ್ನ ಜೊತೆಗೆ ಯಾವಾಗಲೂ ಇರಬೇಕು. ಅದನ್ನೇ ನಾನು ಬಯಸುವುದು' ಎಂದಿದ್ದಾರೆ.