ವಿರಾಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವರುಣನ ಅಬ್ಬರ : ಮತ್ತೆ 3 ದಿನ ಸುರಿಯಲಿದೆ ಮಳೆ

ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರಿದದೆ. ಇನ್ನು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗದರೆ ಏಕಾಏಕಿ ಸುರಿದ ಮಳೆಗೆ ಬೆಂಗಳೂರಿಗರು ಅನುಭವಿಸಿದ ತೊಂದರೆ ಏನು ಇಲ್ಲಿದೆ ಈ ಬಗ್ಗೆ ಮಾಹಿತಿ.

ವಿರಾಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವರುಣನ ಅಬ್ಬರ : ಮತ್ತೆ 3 ದಿನ ಸುರಿಯಲಿದೆ ಮಳೆ
Linkup
ಬೆಂಗಳೂರು: ನಗರದಲ್ಲಿ ಭಾನುವಾರ ಬೆಳಗ್ಗೆ ಕೆಲ ಹೊತ್ತು ವಿರಾಮ ಕೊಟ್ಟ ಮಳೆರಾಯ, ಸಂಜೆ ಬಳಿಕ ಮತ್ತೆ ಅಬ್ಬರಿಸಿದೆ. ಇದರ ಪರಿಣಾಮ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಪೀಣ್ಯ ದಾಸರಹಳ್ಳಿ ಕ್ಷೇತ್ರದ ಹಲವೆಡೆ, ಅಂದ್ರಹಳ್ಳಿ ಮೊದಲಾದೆಡೆ ಅವಾಂತರ ಸೃಷ್ಟಿಯಾಗಿದೆ. ಸಂಜೆ 6 ಗಂಟೆ ಬಳಿಕ ಹಲವೆಡೆ ಧಾರಾಕಾರ ಮಳೆಯಾಗಿದೆ. ದಾಸರಹಳ್ಳಿ ಕ್ಷೇತ್ರದ ಚಿಕ್ಕಬಾಣಾವರ ಕೆರೆ ಸುತ್ತಮುತ್ತ ಕೆರೆಗೆ ನೀರು ಹರಿಯಲು ರಾಜಕಾಲುವೆ ಇಲ್ಲದ ಕಾರಣ ಬಡಾವಣೆಗಳು ಜಲಾವೃತಗೊಂಡವು. ರಾಯಲ್‌ ಎನ್‌ಕ್ಲೇವ್‌, ಸೌಂದರ್ಯ ಲೇಔಟ್‌ ಬಳಿಯ ರುಕ್ಮಿಣಿ ನಗರದಲ್ಲಿ ರಸ್ತೆಗಳೆಲ್ಲ ಹೊಳೆಯಂತೆ ಪರಿವರ್ತನೆಯಾಗಿದ್ದವು. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಬೆಳಗ್ಗೆ ಬಿಸಿಲಿನ ವಾತಾವರಣವಿದ್ದ ಕಾರಣ ಹೆಚ್ಚಿನವರು ಮನೆಯಿಂದ ಹೊರಗೆ ಹೊರಟಿದ್ದರು. ಭಾನುವಾರ ರಜಾ ದಿನವೂ ಆಗಿದ್ದರಿಂದ ಹಲವರು ಶಾಪಿಂಗ್‌, ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ಅನಿರೀಕ್ಷಿತವಾಗಿ ಸುರಿದ ಮನೆ ಸೇರಲು ಅಡ್ಡಿಯಾಯಿತು. ಮಳೆ, ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಬಸವಳಿದರು. ಬಳ್ಳಾರಿ ರಸ್ತೆ ಟ್ರಾಫಿಕ್‌ಜಾಮ್‌ ಬಳ್ಳಾರಿ ರಸ್ತೆಯ ಹೆಬ್ಬಾಳ, ಪ್ಯಾಲೆಸ್‌ ಗುಟ್ಟಹಳ್ಳಿ ಮತ್ತಿತರಡೆ ರಸ್ತೆ ತುಂಬ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ನೀರು ನಿಂತ ಕಡೆಗಳಲ್ಲಿ ವಾಹನಗಳು 15-20 ನಿಮಿಷ ನಿಂತು ಮುಂದುವರಿಯುವಂತಾಯಿತು. ಬೆನ್ಸನ್‌ಟೌನ್‌ನಲ್ಲಿ ಹಳೆ ಮನೆಯೊಂದು ಕುಸಿದು ಬಿದ್ದಿದೆ. ಕೆರೆ ಕೋಡಿ ಒಡೆದು ತಗ್ಗು ಪ್ರದೇಶ ಜಲಾವೃತ ಅಂದ್ರಹಳ್ಳಿ ಬಳಿ ಲಿಂಗಧೀರನಹಳ್ಳಿಯಲ್ಲಿಕೆರೆ ಕೋಡಿ ಒಡೆದು ನಾಟಕದ ಚನ್ನಪ್ಪ ಲೇಔಟ್‌ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದ ಮನೆಗಳು ಜಲಾವೃತಗೊಂಡು, ನಿವಾಸಿಗಳು ಪರದಾಡುವಂತಾಯಿತು. ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದಿಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಎಲ್ಲೆಲ್ಲಿ ಎಷ್ಟು ಮಳೆ?: ರಾಜರಾಜೇಶ್ವರಿನಗರ 27 ಮಿ.ಮೀ, ಕೆಂಗೇರಿ 30 ಮಿ.ಮೀ, ಹಂಪಿನಗರ 29 ಮಿ.ಮೀ, ಜ್ಞಾನಭಾರತಿ 21 ಮಿ.ಮೀ, ಬೆನ್ನಿಗಾನಹಳ್ಳಿ 18 ಮಿ.ಮೀ, ನಾಗಧಿಪುರ 21 ಮಿ.ಮೀ, ಹೆಗ್ಗನಹಳ್ಳಿ 20 ಮಿ.ಮೀ, ಯಲಹಂಕ 30 ಮಿ.ಮೀ, ಜಕ್ಕೂರು 33 ಮಿ.ಮೀ, ಹೊರಮಾವು 31 ಮಿ.ಮೀ, ಕೊಧಿಡಿಧಿಗೇಹಳ್ಳಿ 32 ಮಿ.ಮೀ, ಬಾಗಲಕುಂಟೆ 36 ಮಿ.ಮೀ, ದೊಡ್ಡಬೊಮ್ಮಸಂದ್ರ 31 ಮಿ.ಮೀ, ಚೌಡೇಶ್ವರಿನಗರ 32 ಮಿ.ಮೀ, ಯಲಹಂಕ ಕೆಎಸ್‌ಎನ್‌ಡಿಎಂಸಿ 53 ಮಿ.ಮೀ ಮಳೆಯಾಗಿದೆ. ಇನ್ನೂ ಮೂರು ದಿನ ಮಳೆ ನಗರದಲ್ಲಿಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಆದರೆ ಯಾವುದೇ ಎಚ್ಚರಿಕೆ ಮುಧಿನ್ಸೂಚನೆ ನೀಡಿಲ್ಲ. ಕೆರೆ ನೀರು ಹರಿಯಲು ರಾಜಕಾಲುವೆ ಇಲ್ಲದಿರುವುದರಿಂದ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿದೆ. ಸರಕಾರ ಹಾಗೂ ಬಿಬಿಎಂಪಿಗೆ ಪದೇ ಪದೇ ಮನವಿ ಮಾಡಿದರೂ ರಾಜ ಕಾಲುವೆ ಅಭಿವೃದ್ಧಿಪಡಿಸಲಿಲ್ಲ. ನಿರ್ಲಕ್ಷ್ಯ ಮಾಡಿದ್ದರಿಂದ ಜನರು ತೊಂದರೆಗೊಳಗಾಗಿದ್ದಾರೆ. - ಆರ್‌. ಮಂಜುನಾಥ್‌, ಶಾಸಕರು ದಾಸರಹಳ್ಳಿ