ಮೆಡಿಕಲ್, ಆರ್ಥಿಕ ಸಹಾಯ ಕೇಳಿದವರಿಗೆ ಆಗಲ್ಲ ಎಂದ 'ಅಲಾ ವೈಕುಂಠಪುರಂಲೋ' ಸಿನಿಮಾ ನಟ!

ಅಭಿಮಾನಿಗಳು ನೆಚ್ಚಿನ ನಟರ ಬಳಿ ಕೊರೊನಾ ವೈರಸ್ ಸೋಂಕು ಇರೋದರಿಂದ ಸಹಾಯ ಕೇಳುತ್ತಾರೆ. ಅಂತೆಯೇ ನಟರೊಬ್ಬರು ಮೆಡಿಕಲ್ ಚಿಕಿತ್ಸೆ, ಆರ್ಥಿಕ ಸಹಾಯ ನೀಡಲು ಆಗೋದಿಲ್ಲ ಆಗೋದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಮೆಡಿಕಲ್, ಆರ್ಥಿಕ ಸಹಾಯ ಕೇಳಿದವರಿಗೆ ಆಗಲ್ಲ ಎಂದ 'ಅಲಾ ವೈಕುಂಠಪುರಂಲೋ' ಸಿನಿಮಾ ನಟ!
Linkup
ಎಂಬ ಮಹಾಮಾರಿ ಸೋಂಕು ದೇಶಕ್ಕೆ ಕಾಲಿಟ್ಟನಂತರ ಅನೇಕ ಜೀವಹಾನಿ ಆಯ್ತು, ದುಡಿಮೆ ಕಷ್ಟ ಆಯ್ತು, ಒಂದು ಹೊತ್ತು ಊಟ-ತಿಂಡಿ ಮಾಡಲು ಕಷ್ಟಪಡುವಂತಾಯ್ತು. ರಾಷ್ಟ್ರವೇ ಲಾಕ್‌ಡೌನ್ ಆದರೆ ಎಲ್ಲಿಂದ ಕೆಲಸ ಸಿಗುವುದು? ಈಗಾಗಲೇ ಸಾಕಷ್ಟು ನಟ-ನಟಿಯರು ಅಸಹಾಯಕರಿಗೆ ಚಿಕಿತ್ಸೆಗೆ ಹಣ ನೀಡಿದ್ದರು, ಆಹಾರ ನೀಡಿದ್ದರು. ಈಗ ಮತ್ತೆ ಕೊರೊನಾ ಎರಡನೇ ಅಲೆ ಎದ್ದಿರೋದರಿಂದ ಮತ್ತೆ ಸಹಾಯ ಹಸ್ತ ಚಾಚುವಂತಾಗಿದೆ. ನಟ ಅವರಿಗೆ ಪ್ರತಿನಿತ್ಯ ಚಿಕಿತ್ಸೆಗೆ ಸಹಾಯ ಮಾಡಿ, ಹಣ ನೀಡಿ ಅಂತ ಸಾಕಷ್ಟು ಮೆಸೇಜ್‌ಗಳು ಬರುತ್ತವಂತೆ. ಈಗಾಗಲೇ ಅವರು ಸಾಕಷ್ಟು ಜನರಿಗೆ ಧನಸಹಾಯ ಮಾಡಿದ್ದರು. ಆದರೆ ಈಗ ನನ್ನ ಹತ್ತಿರ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಕ್ಷಮೆ ಕೂಡ ಕೇಳಿದ್ದಾರೆ. ಇನ್ನು ಚೆನ್ನೈನಲ್ಲಿ ನೆರೆಪ್ರವಾಹ ಆದಾಗ ಕೂಡ ನವದೀಪ್ ಸಹಾಯ ಮಾಡಿದ್ದರು. ಕೊರೊನಾ ವೈರಸ್ ಕುರಿತು ಜಾಗೃತಿ ಮೂಢಿಸುವಂತಹ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು, ಆಗಾಗ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಉತ್ತರಖಂಡ್ ಸಿಎಂ ತಿರಂತ್ ಸಿಂಗ್ ರಾವತ್ ಅವರು ಹೆಣ್ಣು ಮಕ್ಕಳು ಹರಿದ ಜೀನ್ಸ್ ಹಾಕುತ್ತಾರೆ ಎಂಬ ಮಾತು ಹೇಳಿದ್ದರು. ಅದಕ್ಕೆ ನವದೀಪ್ ಸರಿಯಾದ ತಿರುಗೇಟು ನೀಡಿದ್ದರು. ಇನ್ನು ನವದೀಪ್ ಅವರು ಗಡ್ಡ ಬಿಟ್ಟು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. 2004ರಿಂದ ಇಲ್ಲಿಯವರೆಗೆ ಅನೇಕ ತೆಲುಗು, ತಮಿಳು ಸಿನಿಮಾಗಳಲ್ಲಿ ನಾಯಕನಾಗಿ ನವದೀಪ್ ಕಾಣಿಸಿಕೊಂಡಿದ್ದರು. 'ರೆಡಿ', 'ಓಹ್ ಮೈ ಫ್ರೆಂಡ್', '' ಮುಂತಾದ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದರು. ಇನ್ನು ಅನೇಕ ಟಿವಿ ಶೋಗಳ ನಿರೂಪಣೆ ಮಾಡಿದ್ದು, ನಿರ್ಣಾಯಕರಾಗಿ ಕೂಡ ಭಾಗವಹಿಸಿದ್ದಾರೆ.