'ಬ್ಯಾಡ್‌ ಮ್ಯಾನರ್ಸ್‌' ಬಳಿಕ 'ದುನಿಯಾ' ಸೂರಿ ಪ್ಲ್ಯಾನ್ ಏನು? ಮುಂದಿನ ಸಿನಿಮಾಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ!

'ದುನಿಯಾ' ಸೂರಿ ಮತ್ತು ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ'ಟಗರು' ನಂತರ ಮತ್ತೊಂದು ಸಿನಿಮಾ ಬರಲಿದೆ ಎಂದು ಸುದ್ದಿಯಾಗಿದೆ. ಈ ಬಗ್ಗೆ ವಿಚಾರಿಸಿದಾಗ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ವಿವರ ನೀಡಿದ ಬಗೆ ಇಲ್ಲಿದೆ.

'ಬ್ಯಾಡ್‌ ಮ್ಯಾನರ್ಸ್‌' ಬಳಿಕ 'ದುನಿಯಾ' ಸೂರಿ ಪ್ಲ್ಯಾನ್ ಏನು? ಮುಂದಿನ ಸಿನಿಮಾಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ!
Linkup
ಹರೀಶ್‌ ಬಸವರಾಜ್‌ ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್‌ ನಿರ್ದೇಶಕರಲ್ಲಿನಿರ್ದೇಶಕ ಸೂರಿ ಕೂಡ ಒಬ್ಬರು. ತಮ್ಮ ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ಅಸಂಖ್ಯ ಅಭಿಮಾನಿಗಳನ್ನು ಅವರು ಗಳಿಸಿಕೊಂಡಿದ್ದಾರೆ. ಸೂರಿಯವರ ಸಿನಿಮಾ ಎಂಬ ಕಾರಣಕ್ಕಾಗಿಯೇ ಅವರ ನಿರ್ದೇಶನದ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಬಳಗವೇ ಇದೆ. ಇಂತಹ ಸೂರಿಯವರಿಗೆ ಸ್ಯಾಂಡಲ್‌ವುಡ್‌ನ ಹಲವು ಹೀರೊಗಳ ಜತೆ ಕೆಲಸ ಮಾಡುವ ಆಸಕ್ತಿ ಇದೆ. ಅದನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ. 'ಟಗರು ಚಿತ್ರದ ನಂತರ ಸೂರಿ ಮತ್ತೆ ಶಿವರಾಜ್‌ಕುಮಾರ್‌ ಅವರ ಜತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿದೆ. ಹೌದು, ನಾನು ಶಿವರಾಜ್‌ಕುಮಾರ್‌ ಅವರ ಜತೆ ಮತ್ತೆ ಸಿನಿಮಾ ಮಾಡುತ್ತೇನೆ. ಅದರ ಜತೆಗೆ ಇನ್ನೂ ಹಲವರ ಜತೆ ಚರ್ಚೆಗಳು ನಡೆದಿವೆ. ಧ್ರುವ ಸರ್ಜಾ ಅವರ ಭೇಟಿಯೂ ಒಮ್ಮೆ ಆಗಿದೆ. ಪುನೀತ್‌ ರಾಜ್‌ಕುಮಾರ್‌, ರಕ್ಷಿತ್‌ ಶೆಟ್ಟಿ ಹೀಗೆ ಹಲವರ ಜತೆ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದೇನೆ. ಆದರೆ ಯಾರಿಗೆ ಯಾವಾಗ ಸಿನಿಮಾ ಮಾಡುತ್ತೇನೆ ಎಂಬುದಿನ್ನೂ ನಿಗದಿಯಾಗಿಲ್ಲ. ಸದ್ಯಕ್ಕೆ 'ಬ್ಯಾಡ್‌ ಮ್ಯಾನರ್ಸ್‌' ಸಿನಿಮಾದ ಕೆಲಸದಲ್ಲಿತೊಡಗಿಸಿಕೊಂಡಿದ್ದೇನೆ. ಅದು ಮುಗಿದ ಮೇಲೆ ಅದರಿಂದ ಹೊರಬರುತ್ತೇನೆ, ನಂತರ ಬೇರೆಯದರ ಬಗ್ಗೆ ಯೋಚಿಸುತ್ತೇನೆ' ಎಂದು ಹೇಳಿದರು. 'ಟಗರು ನಂತರ ಶಿವರಾಜ್‌ಕುಮಾರ್‌ ಅವರನ್ನು ಗಮನದಲ್ಲಿಇಟ್ಟುಕೊಂಡು ಬರೆಯುವಂತಹ ಬಹಳಷ್ಟು ವಿಷಯಗಳು ತಲೆಯಲ್ಲಿವೆ. ಅದಕ್ಕೆ 'ಬ್ಯಾಡ್‌ ಮ್ಯಾನರ್ಸ್‌' ಮುಗಿಯಬೇಕು. ಕೆಲವು ಭೇಟಿಗಳು ಇಷ್ಟವಾಗುತ್ತವೆ. ಕೆಲ ದಿನಗಳ ಹಿಂದೆ ರಕ್ಷಿತ್‌ ಶೆಟ್ಟಿಯವರನ್ನು ಭೇಟಿ ಮಾಡಿದಾಗ ನಡೆಸಿದ ಅವರ ಜತೆಗಿನ ಚರ್ಚೆ ಇಷ್ಟವಾಯಿತು. ಶಿವಣ್ಣ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ನಮ್ಮ ಹುಡುಗರ ಕಥೆ ಹೇಳಿಸಿದ್ದೇನೆ. 'ಬ್ಯಾಡ್‌ಮ್ಯಾನರ್ಸ್‌' ಮುಗಿದ ನಂತರ ಸೂರಿ ಬಂದು ಭೇಟಿಯಾಗುತ್ತಾರೆ ಎಂಬುದು ಶಿವಣ್ಣ ಅವರಿಗೂ ಗೊತ್ತು. ಹಾಗಾಗಿ ಈಗ 'ಬ್ಯಾಡ್‌ ಮ್ಯಾನರ್ಸ್‌' ನಂತರ ಯಾವ ಸಿನಿಮಾ ಎಂದು ನಿರ್ಧಾರ ಮಾಡಲು ಕಷ್ಟ' ಎಂದರು ಸೂರಿ. ನಟನೆ, ಓಟಿಟಿ ಆಫರ್‌ಇವೆಲ್ಲದರ ನಡುವೆ ಸೂರಿಯವರಿಗೆ ಓಟಿಟಿಯೊಂದಕ್ಕೆ ನಾಲ್ಕು ಗಂಟೆಗಳ ಕಥೆ ಮಾಡಿಕೊಡುವಂತೆ ಆಫರ್‌ ಕೂಡ ಬಂದಿದೆ. ಅದರ ಮೀಟಿಂಗ್‌ ಸಹ ಇತ್ತೀಚೆಗೆ ನಡೆದಿದೆ ಎಂದು ಹೇಳಿದರು. ಸಾಹಸ ನಿರ್ದೇಶಕ ರವಿವರ್ಮ ಅವರ ಕಡೆಯಿಂದ ಸೂರಿಯವರಿಗೆ ನಟನೆಗೂ ಆಫರ್‌ ಬಂದಿದೆ. 'ರವಿವರ್ಮ ಅವರ ಕಡೆಯಿಂದ 'ಜೇಡರಬಲೆ' ಎಂಬ ಸಿನಿಮಾದಲ್ಲಿ ನಟಿಸಿ ಎಂದು ಕೇಳಿದರು. ಸ್ಕ್ರಿಪ್ಟ್‌ ಕೂಡ ಕೊಟ್ಟಿದ್ದಾರೆ, ಬಹಳ ಚೆನ್ನಾಗಿದೆ. ಆದರೆ ನಟನೆ ನನ್ನ ತಟ್ಟೆಯ ಅನ್ನವಲ್ಲ. ನಾನು ನಿರ್ದೇಶಕ. ನಿರ್ದೇಶಕರೇ ನಿಮಗೆ ಬೇಕು ಎಂದರೆ ತಮಿಳಿನ ಮಿಸ್ಕಿನ್‌ ಅವರ ಬಳಿ ಮಾಡಿಸಿ ಎಂದು ಹೇಳಿದ್ದೇನೆ. ಅವರು ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ ಕೂಡ. ಆದರೆ ರವಿವರ್ಮ ಅವರು ಆಯ್ಕೆ ಮಾಡಿಕೊಂಡಿರುವ ಕಥೆ ಬಹಳ ಚೆನ್ನಾಗಿದೆ. ಪೊಲೀಸ್‌ ಕಥಾನಕವದು. ಇದರ ಜತೆಗೆ ರವಿಚಂದ್ರನ್‌ರ ಇಬ್ಬರು ಪುತ್ರರ ಮೇಲೆ ಒಂದು ವಿಶೇಷ ಆಸಕ್ತಿ ಇದೆ. ಅವರನ್ನು ಭೇಟಿ ಮಾಡಿದ್ದೇನೆ' ಎಂದರು ಸೂರಿ. ಹೇ ದಿನಕರ ನನ್ನ ಫೇವರಿಟ್‌ಸಿನಿಮಾಗಳ ವಿಷಯ ಮಾತನಾಡುತ್ತಾ ಸೂರಿಯವರು, 'ನನಗೆ ಓಂ ಸಿನಿಮಾದ 'ಹೇ ದಿನಕರ..' ಹಾಡು ಫೇವರಿಟ್‌' ಎಂದರು. 'ನಾನು ಹೇ ದಿನಕರ ಹಾಡನ್ನು ದಿನಕ್ಕೊಮ್ಮೆಯಾದರೂ ಕೇಳುತ್ತೇನೆ. ಸಿನಿಮಾದವರಿಗೆ ಸನ್‌ಲೈಟ್‌ ಎಷ್ಟು ಮುಖ್ಯ ಎಂಬುದು ನನಗೆ ಗೊತ್ತು. ಈ ಹಾಡು ಸಹ ಬಹಳ ಅರ್ಥಗರ್ಭಿತವಾಗಿದೆ. ಒಂದೊಂದು ಸಾಲೂ ಬದುಕಿಗೆ ಕನೆಕ್ಟ್ ಆಗುತ್ತದೆ' ಎಂದು ಹೇಳಿದರು. ಕೋಟ್ ನಾನು ಎಲ್ಲರ ಜತೆ ಸಿನಿಮಾ ಮಾಡುತ್ತೇನೆ. ಸದ್ಯಕ್ಕೆ ನನ್ನ ಗಮನ 'ಬ್ಯಾಡ್‌ ಮ್ಯಾನರ್ಸ್‌' ಮೇಲಿದೆ. ಅದನ್ನು ಮುಗಿಸಿದ ನಂತರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಯೋಚಿಸುತ್ತೇನೆ. -ಸೂರಿ, ನಿರ್ದೇಶಕ