ಬಿಜೆಪಿ ವಿರುದ್ಧ ಹೋರಾಟ : ಮಮತಾ ನಂತರ ಕೆಸಿಆರ್‌ಗೆ ಮಾಜಿ ಪ್ರಧಾನಿ ದೇವೇಗೌಡ ಬೆಂಬಲ!

ಬಿಜೆಪಿ ವಿರುದ್ಧ ಸೆಣೆಸುವ ಸಂಬಂಧ ಈಗಾಗಲೇ ಕಹಳೆ ಊದಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಮಮತಾ ಬ್ಯಾನರ್ಜಿ ಬಳಿಕ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಜೆಪಿ ವಿರುದ್ಧ ಹೋರಾಟ : ಮಮತಾ ನಂತರ ಕೆಸಿಆರ್‌ಗೆ ಮಾಜಿ ಪ್ರಧಾನಿ ದೇವೇಗೌಡ ಬೆಂಬಲ!
Linkup
ಹೈದರಾಬಾದ್‌: ಪ್ರಾದೇಶಿಕ ಪಕ್ಷಗಳು ಸಂಘಟಿತವಾಗಿ ರಾಷ್ಟ್ರಮಟ್ಟದಲ್ಲಿ ವಿರುದ್ಧ ಸೆಣೆಸುವ ಸಂಬಂಧ ಈಗಾಗಲೇ ಕಹಳೆ ಊದಿರುವ ಮುಖ್ಯಮಂತ್ರಿ ಅವರಿಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ಅವರು ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸಿಎಂ ಕೆಸಿಆರ್‌ ಅವರ ಕಚೇರಿಯು ರಾಷ್ಟ್ರೀಯ ಸುದ್ದಿವಾಹಿನಿಗೆ ಖಾತ್ರಿಪಡಿಸಿದೆ. ''ರಾಷ್ಟ್ರ ರಕ್ಷಣೆಗೆ, ವಿಭಜಕ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ನಿಮ್ಮ ಬೆನ್ನ ಹಿಂದೆ ನಿಂತುಕೊಳ್ಳುವೆ,'' ಎಂದು ದೇವೇಗೌಡ ಅವರು ಕೆಸಿಆರ್‌ ಅವರಿಗೆ ಭರವಸೆ ಕೊಟ್ಟಿದ್ದಾರೆ ಎಂದು ಕಚೇರಿಯ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಚರ್ಚೆಗೆ ಶೀಘ್ರವೇ ಕೆಸಿಆರ್‌ ಅವರು ಬೆಂಗಳೂರಿಗೆ ಆಗಮಿಸಿ ದೇವೇಗೌಡ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೆಸಿಆರ್‌ ಜತೆಗೆ ತೃತೀಯ ರಂಗ ರಚನೆ ಸಂಬಂಧ ಚರ್ಚೆಗೆ ಶೀಘ್ರವೇ ಹೈದರಾಬಾದಿಗೆ ಬರಲಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಹೊರಗಿರಿಸಿ ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗ-ವೊಂದರ ರಚನೆಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಜತೆಗೂಡಿ ಕೆಸಿಆರ್‌ ಯತ್ನಿಸಿದ್ದರು. ''ನನಗೆ ಪ್ರಧಾನಿ ಆಗುವ ಆಸೆ ಇಲ್ಲ, ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ಹೊರತಾದ ಸರಕಾರ ತಂದು ಬದಲಾವಣೆಗೆ ನಾಂದಿ ಹಾಡಲು ಬಯಸುತ್ತೇನೆ,'' ಎಂದು ಸುದ್ದಿಗಾರರಿಗೆ ಸ್ಪಷ್ಟನೆ ಕೊಟ್ಟಿದ್ದರು. ಇತ್ತೀಚೆಗೆ, ಕೆಸಿಆರ್‌ ಅವರು ರಾಜ್ಯಗಳ ಒಕ್ಕೂಟ ವ್ಯವಸ್ಥೆ ಸಬಲೀಕರಣಕ್ಕೆ ಶ್ರಮಿಸುವಲ್ಲಿಕೇಂದ್ರ ಸರಕಾರವು ವಿಫಲಧಿವಾಗಿದೆ ಎಂದು ಅಸ-ಮಾಧಾನ ಹೊರಹಾಕಿಧಿದ್ದರು. ಸದ್ಯದ ಅಗತ್ಯತೆಗಳಿಗೆ ತಕ್ಕಂತೆ ಸಂವಿಧಾನ ಪರಿಷ್ಕರಣೆಗೂ ನಾವು ಮುಂದಾಗ-ಬೇಕಿದೆ ಎಂದಿದ್ದರು.