ನೀರಿನ ಬದಲು ತಲೆ ಮೇಲೆ 'ಉಗುಳಿ' ಕೇಶ ವಿನ್ಯಾಸ..! ಉತ್ತರ ಪ್ರದೇಶದ 'ತರ್ಲೆ ತಿಮ್ಮಣ್ಣ'ನ ಮೇಲೆ ಕೇಸ್..!

ಸೆಮಿನಾರ್ ಕಾರ್ಯಕ್ರಮದಲ್ಲಿ ಮಹಿಳೆಯ ಕೇಶ ವಿನ್ಯಾಸ ಮಾಡುವ ಜೊತೆಗೆ ಪ್ರೇಕ್ಷಕರಿಗೆ ಹಬೀಬ್ ವಿವರಣೆಯನ್ನೂ ನೀಡುತ್ತಾರೆ. ಒಂದು ವೇಳೆ ನೀವು ಕೇಶ ವಿನ್ಯಾಸ ಮಾಡುವಾಗ ನೀರಿನ ಕೊರತೆ ಎದುರಾದರೆ ನಿಮ್ಮ ಉಗುಳನ್ನೇ ಬಳಸಿ ಎಂದು ತಲೆ ಮೇಲೆ ಉಗುಳುತ್ತಾರೆ..!

ನೀರಿನ ಬದಲು ತಲೆ ಮೇಲೆ 'ಉಗುಳಿ' ಕೇಶ ವಿನ್ಯಾಸ..! ಉತ್ತರ ಪ್ರದೇಶದ 'ತರ್ಲೆ ತಿಮ್ಮಣ್ಣ'ನ ಮೇಲೆ ಕೇಸ್..!
Linkup
ಲಖನೌ (): ಪೊಲೀಸರು ಇಲ್ಲಿನ ಕೇಶ ವಿನ್ಯಾಸಕಾರನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತ ಮಾಡುವ ವೇಳೆ ನೀರಿಗೆ ಬದಲು ತನ್ನ ಉಗುಳನ್ನು ಬಳಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಮುಝಫ್ಪರ್ ನಗರದಲ್ಲಿ ಕಳೆದ ವಾರ ಕೇಶ ವಿನ್ಯಾಸ ಸಂಬಂಧ ಸೆಮಿನಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸೆಮಿನಾರ್‌ನಲ್ಲಿ ವಿನ್ಯಾಸಕಾರ ಹಬೀಬ್ ಎಂಬಾತನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಹಿಳೆಯೇ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸೆಮಿನಾರ್‌ನಲ್ಲಿ ಮಹಿಳೆಗೆ ಕೇಶ ವಿನ್ಯಾಸ ಮಾಡುವ ವಿಡಿಯೋ ಕೂಡಾ ವೈರಲ್ ಆಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ, ಕೇಶ ವಿನ್ಯಾಸಕಾರ ಹಬೀಬ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸೆಮಿನಾರ್ ಕಾರ್ಯಕ್ರಮದಲ್ಲಿ ಮಹಿಳೆಯ ಕೇಶ ವಿನ್ಯಾಸ ಮಾಡುವ ಜೊತೆಗೆ ಪ್ರೇಕ್ಷಕರಿಗೆ ಹಬೀಬ್ ವಿವರಣೆಯನ್ನೂ ನೀಡುತ್ತಾರೆ. ಒಂದು ವೇಳೆ ನೀವು ಕೇಶ ವಿನ್ಯಾಸ ಮಾಡುವಾಗ ನೀರಿನ ಕೊರತೆ ಎದುರಾದರೆ ನಿಮ್ಮ ಉಗುಳನ್ನೇ ಬಳಸಿ ಎಂದು ಅವರು ಹೇಳುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಇದೀಗ ಕೇಶ ವಿನ್ಯಾಸಕಾರ ಹಬೀಬ್ ಬೇಷರತ್ ಕ್ಷಮೆ ಕೇಳಿದ್ದು, ತಾವು ಈ ಸೆಮಿನಾರ್ ಕಾರ್ಯಕ್ರಮದಲ್ಲಿ ಒಂದಿಷ್ಟು ಹಾಸ್ಯ ಬೆರೆಸುವ ಸಂಬಂಧ ಆ ರೀತಿ ಮಾಡಿದ್ದಾಗಿ ಹೇಳಿದ್ದಾರೆ. ಕೇಶ ವಿನ್ಯಾಸಕಾರ ಹಬೀಬ್‌ನಿಂದ ತಮ್ಮ ಕೇಶ ವಿನ್ಯಾಸ ಮಾಡಿಸಿಕೊಂಡ ಕೂಡಾ ತಮಗಾದ ಅಹಿತಕರ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ‘ನಾನು ಹಬೀಬ್‌ ಅವರ ಕೇಶ ವಿನ್ಯಾಸ ಸೆಮಿನಾರ್‌ನಲ್ಲಿ ಭಾಗಿಯಾಗಿದ್ದೆ. ಈ ವೇಳೆ ಅವರು ವೇದಿಕೆಗೆ ನನ್ನನ್ನು ಕರೆದರು. ಈ ವೇಳೆ ಹಬೀಬ್ ಅವರು ನನ್ನ ಕೇಶ ವಿನ್ಯಾಸ ಮಾಡುವ ವೇಳೆ ನೀರಿನ ಬದಲು ತಮ್ಮ ಉಗುಳನ್ನೇ ನನ್ನ ಮೇಲೆ ಉಗಿದರು. ಒಂದು ವೇಳೆ ನೀರಿನ ಅಭಾವವಾದ್ರೆ ಉಗುಳನ್ನೇ ಬಳಸಿ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರಿಗೂ ಸಲಹೆ ನೀಡಿದರು. ಈ ಅಹಿತಕರ ಅನುಭವದ ಬಳಿಕ ನಾನು ಮುಂದೆ ಎಂದಾದರೂ ಕಟಿಂಗ್‌ಗೆ ಹೋಗಬೇಕೆಂದುಕೊಂಡರೆ ನಮ್ಮ ಮನೆ ಬಳಿಕ ರಸ್ತೆ ಬದಿ ಕ್ಷೌರಿಕರ ಬಳಿ ಹೋಗುತ್ತೇನೆ. ಹಬೀಬ್ ಬಳಿ ಎಂದಿಗೂ ಹೋಗೋದಿಲ್ಲ ಎಂದು ಪೂಜಾ ಗುಪ್ತಾ ಅವರು ಹೇಳಿದ್ದಾರೆ. ಪೂಜಾ ಅವರು ಸ್ವಂತ ಬ್ಯೂಟಿ ಪಾರ್ಲರ್ ಕೂಡಾ ನಡೆಸುತ್ತಿದ್ದಾರೆ. ಇನ್ನು ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ರಂಗ ಪ್ರವೇಶ ಮಾಡಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕೂಡಲೇ ಮಾಹಿತಿ ನೀಡುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿದೆ. ಆರೋಪಿ ವಿರುದ್ಧ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಟ್ವೀಟ್ ಕೂಡಾ ಮಾಡಲಾಗಿದೆ. ಈ ಎಲ್ಲಾ ವಿದ್ಯಮಾನಗಳ ಬೆನ್ನಲ್ಲೇ ಆರೋಪಿ ಕೇಶ ವಿನ್ಯಾಸಕಾರ ಹಬೀಬ್ ಕ್ಷಮೆ ಕೋರಿ ವಿಡಿಯೋ ಬಿಡುಗಡೆ ಮಾಡಿದ್ದು, ತಾನು ಕಾರ್ಯಕ್ರಮದಲ್ಲಿ ಹಾಸ್ಯ ತುಂಬುವುದಕ್ಕಾಗಿ ಈ ರೀತಿ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿವರಿಸಿದ್ದಾನೆ. ಇದೊಂದು ವೃತ್ತಿಪರ ವರ್ಕ್‌ ಶಾಪ್ ಆಗಿತ್ತು. ಇಲ್ಲಿ ಸೇರಿದ್ದ ಎಲ್ಲರೂ ನಮ್ಮದೇ ವೃತ್ತಿಯಲ್ಲಿ ತೊಡಗಿದ್ದವರು. ಈ ವರ್ಕ್ ಶಾಪ್ ತುಂಬಾನೇ ದೊಡ್ಡದಾಗಿತ್ತು. ಸುದೀರ್ಘ ಕಾಲ ನಡೆಯಿತು. ಈ ವೇಳೆ ಹಾಸ್ಯ ತುಂಬಲು ನಾನು ಆ ರೀತಿ ಮಾಡಬೇಕಾಯ್ತು. ಇಷ್ಟೆಲ್ಲಾ ಆದ ಮೇಲೆ ಇನ್ನೇನು ಹೇಳೋದು? ನನ್ನ ಈ ಕೃತ್ಯದಿಂದ ಯಾರ ಮನಸ್ಸಿಗಾದ್ರೂ ನೋವಾಗಿದ್ರೆ ನಾನು ಬೇಷರತ್ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಹಬೀಬ್ ಕೇಳಿಕೊಂಡಿದ್ದಾನೆ. ಇನ್ನು ಹಬೀಬ್ ವಿರುದ್ಧ ಪೊಲೀಸರು ಹಲವು ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲೂ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.