ದಾವೂದ್ ಜತೆ ನಂಟು ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್

ದಾವೂದ್ ಇಬ್ರಾಹಿಂ ಹಾಗೂ ಇತರೆ ಭೂಗತ ಲೋಕದ ಪಾತಕಿಗಳ ಜತೆ ನಂಟು ಹೊಂದಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆ ಆರೋಪದ ಅಡಿ ಬಂಧಿತರಾಗಿರುವ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರು, ತಮ್ಮ ಬಂಧನ ಹಾಗೂ ಪ್ರಕರಣದ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಈ ಅರ್ಜಿ ವಿಚಾರಣೆ ನಡೆಯಲಿದೆ.

ದಾವೂದ್ ಜತೆ ನಂಟು ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್
Linkup
ಮುಂಬಯಿ: ಭೂಗತ ಲೋಕದ ಪಾತಕಿ ಜತೆ ನಂಟು ಹೊಂದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಚಿವ ಅವರು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಲಿದೆ. ನವಾಬ್ ಮಲಿಕ್ ಅವರನ್ನು ಕಳೆದ ವಾರ ಇಡಿ ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ಮಾರ್ಚ್ 3ರವರೆಗೂ ಇಡಿ () ವಶಕ್ಕೆ ನೀಡಲಾಗಿದೆ. ತಮ್ಮ ಬಂಧನ ಅಕ್ರಮವಾಗಿದ್ದು, ಈ ಕೂಡಲೇ ಬಿಡುಗಡೆಗೆ ಆದೇಶಿಸುವಂತೆ ಕೋರಿ ಅವರು ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆಗೆ ಎತ್ತಿಕೊಳ್ಳಲು ಹೈಕೋರ್ಟ್ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂಧೆ ಮತ್ತು ಎನ್‌ಆರ್ ಬೋರ್ಕರ್ ಅವರ ವಿಭಾಗೀಯ ಪೀಠದ ಎದುರು ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳುವಂತೆ ಮಲಿಕ್ ಪರ ವಕೀಲರಾದ ತಾರಕ್ ಸಯ್ಯದ್ ಮಂಗಳವಾರ ಮನವಿ ಮಾಡಿದರು. ಅಪರಾಧ ಅರ್ಜಿಗಳ ವಿಚಾರಣೆಗಾಗಿ ನಿಯೋಜನೆಗೊಂಡ ನ್ಯಾಯಮೂರ್ತಿಗಳಾದ ಪಿಬಿ ವರಾಲೆ ಮತ್ತು ಎಸ್‌ಪಿ ತವ್ಡೆ ಅವರನ್ನು ಒಳಗೊಂಡ ಸಾಮಾನ್ಯ ಪೀಠ ಈ ವಾರ ಲಭ್ಯವಿಲ್ಲ ಎಂದು ಕೋರ್ಟ್ ಮಾಹಿತಿ ನೀಡಿತು. ಬುಧವಾರ ತಮ್ಮ ಪೀಠ ಕೂಡ ಲಭ್ಯವಿಲ್ಲ ಎಂದು ನ್ಯಾ. ಶಿಂಧೆ ತಿಳಿಸಿದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ಬಿ ಶುಕ್ರೆ ಮತ್ತು ಜಿಎ ಸನಪ್ ಅವರ ನ್ಯಾಯಪೀಠದ ಎದುರು ಬುಧವಾರ ವಿಚಾರಣೆಗೆ ನೀಡುವುದಾಗಿ ಅವರು ಹೇಳಿದರು. ತಮ್ಮನ್ನು ಇಡಿ ಕಸ್ಟಡಿಗೆ ಒಪ್ಪಿಸುವ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಗೂ ಪ್ರಕರಣವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿದ್ದರು. ತಮ್ಮ ಬಂಧನ 'ಅಕ್ರಮ'ವಾಗಿದೆ ಮತ್ತು 'ಕೇಂದ್ರ ಸಂಸ್ಥೆಗಳ ದುರ್ಬಳಕೆ ವಿರುದ್ಧ ಕಠಿಣ ಟೀಕೆಗಳನ್ನು ಮಾಡಿರುವುದಕ್ಕೆ' ಗುರಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ರೀತಿ ಗುರಿಯಾಗುತ್ತಿರುವುದು ತಾವು ಮೊದಲೇನಲ್ಲ. ಇದು ದೇಶಾದ್ಯಂತ ಹರಡಿರುವ ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ದೇಶ ವಿರೋಧಿ ಆರೋಪಿಗಳ (ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು) ಜತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದಾರೆ.