ಗಂಡ, ಮಗನನ್ನು ಕಳೆದುಕೊಂಡ ಆಕೆಗೆ ಸಮಾಜ ಸೇವೆಯೇ ಸರ್ವಸ್ವ: ಬಡ ಮಕ್ಕಳಲ್ಲಿ ಮಗನನ್ನು ಕಾಣುವ ತವಕ..!

ಗಂಡನ ಸಾವಿನ ನೋವಿನಿಂದ ಹೊರಬರುತ್ತಿದ್ದ ಗೀತಾ ಅವರಿಗೆ ದೇವರು ಮತ್ತೊಂದು ದೊಡ್ಡ ಹೊಡೆತ ನೀಡಿದ. ಗೀತಾ ಅವರ 21 ವರ್ಷ ವಯಸ್ಸಿನ ಮೊದಲನೇ ಮಗ ಮೊನೀಶ್, ಬಾರದ ಲೋಕಕ್ಕೆ ಹೊರಟು ಹೋಗಿದ್ದ..!

ಗಂಡ, ಮಗನನ್ನು ಕಳೆದುಕೊಂಡ ಆಕೆಗೆ ಸಮಾಜ ಸೇವೆಯೇ ಸರ್ವಸ್ವ: ಬಡ ಮಕ್ಕಳಲ್ಲಿ ಮಗನನ್ನು ಕಾಣುವ ತವಕ..!
Linkup
ತಾಯಿಯೇ ದೇವರು.. ತಾಯಿಯೇ ನಮ್ಮ ಮೊದಲ ಗುರು.. ತನ್ನ ಆಸೆಯನ್ನೆಲ್ಲ ಬದಿಗಿಟ್ಟು ಮಕ್ಕಳನ್ನು ಸಾಕ್ತಾಳೆ..‌ ತಾನು ನೀರು ಕುಡಿದು ಮಕ್ಕಳ ಹೊಟ್ಟೆ ತುಂಬಿಸ್ತಾಳೆ.. ತಾಯಿಯಂತಹ ಕರುಣಾಮಯಿ ಇನ್ನೊಬ್ಬರು ಸಿಗೋದಕ್ಕೆ ಸಾಧ್ಯವಿಲ್ಲ.. ಹೀಗಿರುವಾಗ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ ತಾಯಿಯ ಕಣ್ಣೆದುರಲ್ಲೇ ಮಕ್ಕಳು ಇಹಲೋಕ ತ್ಯಜಿಸಿದರೆ ಅದರಿಂದ ಆಕೆಗೆ ಆಗುವ ನೋವು ಊಹಿಸಲೂ ಸಾಧ್ಯವಿಲ್ಲ.. ಮಕ್ಕಳೇ ತನ್ನ ಪ್ರಪಂಚ ಎಂದು ಭಾವಿಸಿದ್ದ ತಾಯಿಗೆ ಆ ಪ್ರಪಂಚವೇ ಮಾಯಾವಾದಾಗ ಆಕೆ ಇದ್ದೂ ಸತ್ತಂತೆ ಆಗಿಬಿಡ್ತಾಳೆ.. ಆದ್ರೆ ಇವೆಲ್ಲವನ್ನೂ ಮೆಟ್ಟಿನಿಂತು ಮಗನ ನೆನಪಲ್ಲೇ ಮಾಡ್ತಿರುವ ತಾಯಿಯ ಕಥೆ ಇಲ್ಲಿದೆ.. ಇವರ ಹೆಸರು ಗೀತಾ.. ಇವವರಿಗೆ ಇಬ್ಬರು ಮಕ್ಕಳು.. ಮೊನೀಶ್ ಮತ್ತು ಆಶಿಶ್.. ಗೀತಾ ಅವರ ಪತಿ ಅನಾರೋಗ್ಯದ ಸಮಸ್ಯೆಯಿಂದ ತೀರಿ ಹೋಗಿದ್ದರು. ಹೀಗಾಗಿ, ಇಬ್ಬರು ಮಕ್ಕಳನ್ನು ಕಷ್ಟಪಟ್ಟು ಸಾಕಿದ್ದ ಗೀತಾ ಅವರು, ಸಾವಿರಾರು ಕನಸನ್ನು ಹೊಂದಿದ್ದರು. ಆದ್ರೆ ವಿಧಿ ಇವರ ಬಾಳಲ್ಲಿ ಕೆಟ್ಟ ಆಟವನ್ನೇ ಆಡಿಬಿಡ್ತು. ಗಂಡನ ಸಾವಿನ ನೋವಿನಿಂದ ಹೊರಬರುತ್ತಿದ್ದ ಗೀತಾ ಅವರಿಗೆ ದೇವರು ಮತ್ತೊಂದು ಹೊಡೆತ ನೀಡಿದ. ಗೀತಾ ಅವರ 21 ವರ್ಷ ವಯಸ್ಸಿನ ಮೊದಲನೇ ಮೊನೀಶ್, ಬಾರದ ಲೋಕಕ್ಕೆ ಹೊರಟು ಹೋದ.. ಬೆಂಗಳೂರಿನ ಮಾರತ್‌ ಹಳ್ಳಿ ನಿವಾಸಿ ಗೀತಾ ಅವರಿಗೆ ಇದು ನಿಜಕ್ಕೂ ದೊಡ್ಡ ಆಘಾತವನ್ನೇ ತಂದೊಡ್ಡಿತು. ಹುಟ್ಟು ಛಲಗಾರ ಈ ಮೊನೀಶ್ ಪೈಲೆಟ್ ಆಗಬೇಕು ಅಂತ ಕನಸು ಕಂಡಿದ್ದ. ಸೆಕೆಂಡ್ ಪಿಯುಸಿ ಮುಗಿಸಿದ ನಂತರ ಪುಣೆಯಲ್ಲಿನ ಬಾರಾಮತಿ ಬಳಿಯ ಕಾರ್ ವಾರ್ ಎವಿಯೇಷನ್ ಎಂಬ ಸಂಸ್ಥೆಯಲ್ಲಿ ಪೈಲೆಟ್ ತರಬೇತಿ ಪಡೆಯುತ್ತಿದ್ದ. ಕಳೆದ ಮೂರು ವರ್ಷಗಳಿಂದ ಟ್ರೈನಿಂಗ್‌ನಲ್ಲಿದ್ದ ಮೊನೀಶ್, ಕೆಲವೇ ತಿಂಗಳಿನಲ್ಲಿ ಸಂಪೂರ್ಣವಾಗಿ ಟ್ರೈನಿಂಗ್ ಮುಗಿಸಿ ಪೈಲೆಟ್ ಆಗುವ ಆದಿಯಲ್ಲಿದ್ದ. ಆದ್ರೆ ಅನಾರೋಗ್ಯ ಸಮಸ್ಯೆ ಆತನನ್ನು ಕಾಡಿತ್ತು. ಇದ್ದಕ್ಕಿದಂತೆಯೇ ಇದು ವಿಪರೀತವಾಗಿ ನಾಲ್ಕು ತಿಂಗಳ ಹಿಂದೆ ಆತ ಇಹಲೋಕ ತ್ಯಜಿಸಿದ. ಇದೀಗ ಮಗನ ನೆನಪಿನಲ್ಲೇ ಕಾಲ ಕಳೆಯುತ್ತಿರುವ ತಾಯಿ, ಆತನ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಮೊನೀಶ್ ಚಾರಿಟೆಬಲ್ ಟ್ರಸ್ಟ್ ಎಂಬ ಟ್ರಸ್ಟ್ ಸ್ಥಾಪನೆ ಮಾಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ನವೆಂಬರ್ 8 ರಂದು ಮೋನಿಷ್ ಹುಟ್ಟುಹಬ್ಬ ಅಂಗವಾಗಿ ಮಾರತ್ತಹಳ್ಳಿಯ ಅಯ್ಯಪ್ಪ ಲೇಔಟ್‌ನಲ್ಲಿ ಮೋನೀಷ್ ಚಾರಿಟಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಮ್ಮಿಕೊಂಡು, ಈ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಮೊದಲ‌ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಮತ್ತು ಅಭಿನಂದನಾ ಕಾರ್ಯಕ್ರಮ, ಪೌರ‌ ಕಾರ್ಮಿಕರಿಗೆ ಸೀರೆ ವಿತರಣೆ, ಆ್ಯಂಬುಲೆನ್ಸ್ ಚಾಲಕರಿಗೆ ಜರ್ಕಿನ್ ವಿತರಣೆ, ಮತ್ತು ಪೊಲೀಸ್ ಸಿಬ್ಬಂದಿ, ಶಿಕ್ಷಕರು, ಮಂಗಳಮುಖಿಯರಿಗೆ ಅಭಿನಂಧನಾ ಕಾರ್ಯಕ್ರಮ, ಅನ್ನ ಸಂತರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ ಮಗನನ್ನು ಈ ರೀತಿಯಲ್ಲಿ ಗೀತಾರವರು ನೆನೆದರು. ಈ ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಪುಪ್ಪ ಮಂಜುನಾಥ್, ಸಮಾಜ ಸೇವಕಿ ಗೀತಾ, ಸ್ಥಳಿಯ ಮುಖಂಡರಾದ ಮಾರತ್ತಹಳ್ಳಿ ಆನಂದ್, ಕನ್ನಡ ಪರ ಸಂಘಟನೆ ಮುಖಂಡರಾದ ರವಿ ಶೆಟ್ಟಿ ಬೈಂದೂರು, ವಿಶ್ವನಾಥ್, ನಾಗೇಶ್, ನಟರಾದ ಲಕ್ಷಣ್ ಸೇರಿದಂತೆ ಅನೇಕರು ಗೀತಾರವರ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿ ಅವರ ಬೆನ್ನಿಗೆ ನಿಂತು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಮಗನ ಬಗ್ಗೆ ಬೆಟ್ಟದಷ್ಟು ಆಸೆ ಹೊಂದಿದ್ದ ಗೀತಾರವರು ಇದೀಗ ತನ್ನ ಮಗನ ನೆನಪಿನಲ್ಲಿ ಒಂದಷ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದು, ಅವರಿಗೆ ಆ ದೇವರು ಇನ್ನಷ್ಟು‌ ಶಕ್ತಿ ನೀಡಲಿ.