ಗಾಜಾ ಯುದ್ಧದಲ್ಲಿ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಟೆಲ್ ಅವೀವ್: ಗಾಜಾ ಯುದ್ಧದಲ್ಲಿ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಒಂದು ವೇಳೆ ಕದನ ವಿರಾಮವನ್ನು ಘೋಷಿಸಿದರೆ ಅದು ಹಮಾಸ್ ಗೆ ಶರಣಾಗತಿಯಾಗುತ್ತದೆ ಎಂದು ಬೆಂಜಮಿನ್ ನೇತನ್ಯಾಹು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹಮಾಸ್ ವಿರುದ್ಧ ಮುಂದುವರೆದ ಇಸ್ರೇಲ್ ದಾಳಿ: ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು!
ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನೇತನ್ಯಾಹು, ಅ.7ರ ದಾಳಿಯ ವೇಳೆಯಲ್ಲಿ ಹಮಾಸ್ 230 ಒತ್ತೆಯಾಳುಗಳನ್ನಾಗಿಸಿಕೊಂಡವರನ್ನು ಬಿಡುಗಡೆ ಮಾಡಿಸಲು ಬೇರೆ ದೇಶಗಳು ಇಸ್ರೇಲ್ ಗೆ ನೆರವು ನೀಡಬೇಕೆಂದು ಹೇಳಿದ್ದಾರೆ.
ಬೇಷರತ್ತಾಗಿ, ತಕ್ಷಣವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅಂತಾರಾಷ್ಟ್ರೀಯ ಸಮುದಾಯ ಒತ್ತಾಯಿಸಬೇಕು ಎಂದು ನೇತನ್ಯಾಹು ಮನವಿ ಮಾಡಿದ್ದಾರೆ.
ಗಾಜಾ ಯುದ್ಧದಲ್ಲಿ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಟೆಲ್ ಅವೀವ್: ಗಾಜಾ ಯುದ್ಧದಲ್ಲಿ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಒಂದು ವೇಳೆ ಕದನ ವಿರಾಮವನ್ನು ಘೋಷಿಸಿದರೆ ಅದು ಹಮಾಸ್ ಗೆ ಶರಣಾಗತಿಯಾಗುತ್ತದೆ ಎಂದು ಬೆಂಜಮಿನ್ ನೇತನ್ಯಾಹು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹಮಾಸ್ ವಿರುದ್ಧ ಮುಂದುವರೆದ ಇಸ್ರೇಲ್ ದಾಳಿ: ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು!
ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನೇತನ್ಯಾಹು, ಅ.7ರ ದಾಳಿಯ ವೇಳೆಯಲ್ಲಿ ಹಮಾಸ್ 230 ಒತ್ತೆಯಾಳುಗಳನ್ನಾಗಿಸಿಕೊಂಡವರನ್ನು ಬಿಡುಗಡೆ ಮಾಡಿಸಲು ಬೇರೆ ದೇಶಗಳು ಇಸ್ರೇಲ್ ಗೆ ನೆರವು ನೀಡಬೇಕೆಂದು ಹೇಳಿದ್ದಾರೆ.
ಬೇಷರತ್ತಾಗಿ, ತಕ್ಷಣವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅಂತಾರಾಷ್ಟ್ರೀಯ ಸಮುದಾಯ ಒತ್ತಾಯಿಸಬೇಕು ಎಂದು ನೇತನ್ಯಾಹು ಮನವಿ ಮಾಡಿದ್ದಾರೆ.