ಕೋವಿಡ್ ಔಷಧಗಳ ಅನಧಿಕೃತ ಸಂಗ್ರಹ, ವಿತರಣೆ: ಗೌತಮ್ ಗಂಭೀರ್ ತಪ್ಪಿತಸ್ಥ ಎಂದ ಸಂಸ್ಥೆ

ಗೌತಮ್ ಗಂಭೀರ್ ಪ್ರತಿಷ್ಠಾನವು ಕೋವಿಡ್ ಚಿಕಿತ್ಸೆಗೆ ಬಳಸುವ ಫ್ಯಾಬಿಫ್ಲೂ ಲಸಿಕೆಗಳನ್ನು ಅಕ್ರಮವಾಗಿ ಸಂಗ್ರಹಣೆ ಮತ್ತು ವಿತರಣೆ ಮಾಡುತ್ತಿದ್ದ ವಿಚಾರದಲ್ಲಿ ತಪ್ಪಿತಸ್ಥ ಎಂದು ಕಂಡುಬಂದಿರುವುದಾಗಿ ದಿಲ್ಲಿ ಹೈಕೋರ್ಟ್‌ಗೆ ಔಷಧ ನಿಯಂತ್ರಕರು ತಿಳಿಸಿದ್ದಾರೆ.

ಕೋವಿಡ್ ಔಷಧಗಳ ಅನಧಿಕೃತ ಸಂಗ್ರಹ, ವಿತರಣೆ: ಗೌತಮ್ ಗಂಭೀರ್ ತಪ್ಪಿತಸ್ಥ ಎಂದ ಸಂಸ್ಥೆ
Linkup
ಹೊಸದಿಲ್ಲಿ: ರೋಗಿಗಳಿಗಾಗಿ ಔಷಧವನ್ನು ಅನಧಿಕೃತವಾಗಿ ಸಂಗ್ರಹಣೆ, ಖರೀದಿ ಮತ್ತು ಹಂಚುವ ವಿಚಾರದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಫೌಂಡೇಷನ್ ತಪ್ಪಿತಸ್ಥ ಎಂಬುದು ಪತ್ತೆಯಾಗಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ದಿಲ್ಲಿ ಸರ್ಕಾರದ ಔಷಧ ನಿಯಂತ್ರಕರು ಗುರುವಾರ ತಿಳಿಸಿದ್ದಾರೆ. ಗೌತಮ್ ಗಂಭೀರ್ ಪ್ರತಿಷ್ಠಾನ, ಡ್ರಗ್ ಡೀಲರ್‌ಗಳು ಹಾಗೂ ಇಂತಹ ಇತರೆ ಪ್ರಕರಣಗಳು ತಮ್ಮ ಗಮನಕ್ಕೆ ಬಂದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದೆಹಲಿ ಸರ್ಕಾರದ ಔಷಧ ನಿಯಂತ್ರಕರು ಹೇಳಿದ್ದಾರೆ. ಎಎಪಿಯ ಶಾಸಕ ಪ್ರವೀಣ್ ಕುಮಾರ್ ಅವರೂ ಕೂಡ ಔಷಧ ಮತ್ತು ಕಾಸ್ಮೆಟಿಕ್ ಕಾಯ್ದೆಯಡಿ ಇದೇ ರೀತಿಯ ಅಪರಾಧಗಳಲ್ಲಿ ತಪ್ಪಿತಸ್ಥ ಎನ್ನುವುದು ಕಂಡುಬಂದಿರುವುದಾಗಿ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ಕೋವಿಡ್‌ಗೆ ಬಳಲಾಗುವ ಈ ಔಷಧವನ್ನು ಯಾವುದೇ ವ್ಯಕ್ತಿ ಅನಧಿಕೃತವಾಗಿ ಸಂಗ್ರಹಿಸಿ ಇರಿಸಿಕೊಳ್ಳುವುದು ಅಪರಾಧವಾಗುತ್ತದೆ. ಆದರೆ ಗಂಭೀರ್ ಪ್ರತಿಷ್ಠಾನವು ಈ ಔಷಧಗಳನ್ನು ಬಲ್ಕ್‌ನಲ್ಲಿ ಖರೀದಿಸಲು ಹೇಗೆ ಸಾಧ್ಯವಾಯಿತು ಎಂದು ಕಳೆದ ವಾರ ಪ್ರಶ್ನಿಸಿದ್ದ ಕೋರ್ಟ್, ಸೂಕ್ತ ತನಿಖೆ ನಡೆಸದೆಯೇ ಗಂಭೀರ್ ಪ್ರತಿಷ್ಠಾನಕ್ಕೆ ಕ್ಲೀನ್ ಚಿಟ್ ನೀಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತು. ಈ ಬೆಳವಣಿಗೆಗೆ ಗೌತಮ್ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ನಾನೂ ಒಬ್ಬ ಮನುಷ್ಯ. ಮನುಕುಲಕ್ಕೆ ಹಾನಿ ಮಾಡುವ ಎಲ್ಲ ಸಂಗತಿಗಳೂ ನನಗೆ ಕಳವಳ ಉಂಟುಮಾಡುತ್ತವೆ- ಸರ್ದಾರ್ ಭಗತ್ ಸಿಂಗ್' ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಈ ಪ್ರಕರಣಗಳಲ್ಲಿ ಮುಂದಿನ ಪ್ರಗತಿಯ ಕುರಿತು ಆರು ವಾರಗಳಲ್ಲಿ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಔಷಧ ನಿಯಂತ್ರಕರಿಗೆ ಸೂಚನೆ ನೀಡಿದ , ಮುಂದಿನ ವಿಚಾರಣೆಯನ್ನು ಜುಲೈ 29ಕ್ಕೆ ನಿಗದಿಪಡಿಸಿದೆ.