ಕಾಂಗ್ರೆಸ್‌ ಇಲ್ಲದೆ ಪರ್ಯಾಯ ರಾಜಕೀಯ ರಂಗ ರಚನೆ ಅಸಾಧ್ಯವೆಂದ ಪವಾರ್‌

ಬಿಜೆಪಿಗೆ ಪರ್ಯಾಯವಾಗಿ ದೇಶದಲ್ಲಿ ಯಾವುದೇ ರಾಜಕೀಯ ರಂಗ ರಚನೆಯಾದರೂ, ಕಾಂಗ್ರೆಸ್‌ ಅನ್ನು ಆ ಮೈತ್ರಿಕೂಟದಿಂದ ಹೊರಗಿಡುವ ಮಾತೇ ಇಲ್ಲ ಎಂದು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ಇಲ್ಲದೆ ಪರ್ಯಾಯ ರಾಜಕೀಯ ರಂಗ ರಚನೆ ಅಸಾಧ್ಯವೆಂದ ಪವಾರ್‌
Linkup
ಹೊಸದಿಲ್ಲಿ: ಬಿಜೆಪಿಗೆ ಪರ್ಯಾಯವಾಗಿ ದೇಶದಲ್ಲಿ ಯಾವುದೇ ರಾಜಕೀಯ ರಂಗ ರಚನೆಯಾದರೂ ಅನ್ನು ಆ ಮೈತ್ರಿಕೂಟದಿಂದ ಹೊರಗಿಡುವ ಮಾತೇ ಇಲ್ಲ ಎಂದು ರಾಷ್ಟ್ರವಾದಿ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ವರಿಷ್ಠ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಪವಾರ್‌ ಮತ್ತು ಟಿಎಂಸಿ ನಾಯಕ ಯಶವಂತ್‌ ಸಿನ್ಹಾ ಇತ್ತೀಚೆಗೆ ನಡೆಸಿದ ಪ್ರತಿಪಕ್ಷ ನಾಯಕರ ಸಭೆ ಕುರಿತಂತೆ ಕಾಂಗ್ರೆಸ್‌ ಅಸಮಾಧಾನ ಹೊಂದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. "ರಾಷ್ಟ್ರಮಂಚ್‌ ಮೂಲಕ ಯೋಜಿಸಲಾಗಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ರಾಜಕೀಯದ ಕುರಿತು ಚರ್ಚೆಯೇ ನಡೆಯಲಿಲ್ಲ. ಒಂದೊಮ್ಮೆ ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗವೋ, ಮತ್ತೊಂದು ರಂಗವೋ ರಚನೆ ಆಗುವುದಿದ್ದರೆ ಕಾಂಗ್ರೆಸ್‌ ಅನ್ನು ಹೊರಗಿಟ್ಟು ರಾಜಕೀಯ ರಂಗ ರಚಿಸಲು ಸಾಧ್ಯವೇ ಇಲ್ಲ. ಹಾಗೆಯೇ ಅಂತಹ ಯಾವುದೇ ರಂಗ ರಚನೆಯಾದರೆ ಅಲ್ಲಿ ಸಾಮೂಹಿಕ ನಾಯಕತ್ವ ಮುಖ್ಯವಾಗುತ್ತದೆ," ಎಂದೂ ಪವಾರ್‌ ಹೇಳಿದ್ದಾರೆ. ''ಮಹಾರಾಷ್ಟ್ರದಲ್ಲಿನ ಮಹಾವಿಕಾಸ ಅಘಾಡಿ ಮೈತ್ರಿಕೂಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಅದರಲ್ಲಿಯೂ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಭಯ ಪಕ್ಷಗಳ ಮೈತ್ರಿ ಮಹಾರಾಷ್ಟ್ರದಲ್ಲಿಯೂ ಮುಂದುವರಿಯಲಿದೆ. ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬುದೆಲ್ಲ ವದಂತಿಗಳಷ್ಟೇ,'' ಎಂದೂ ಪವಾರ್‌ ತಿಳಿಸಿದ್ದಾರೆ.