ಏನದು ಯುಪಿಎ? ಯಾವ ಯುಪಿಎಯೂ ಇಲ್ಲ!: ಕಾಂಗ್ರೆಸ್‌ ದೂರವಿಟ್ಟು ಮಮತಾ ಬಣ ರಚನೆ?

ಬಿಜೆಪಿಗೆ ಎದುರಾಳಿಯಾಗಿ ಪ್ರಬಲ ವಿರೋಧ ಪಕ್ಷಗಳ ಬಣ ಕಟ್ಟುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅನ್ನು ಅದರಿಂದ ಹೊರಗಿಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಯುಪಿಎ ಎಂದರೇನು? ಯಾವ ಯುಪಿಎ ಕೂಡ ಇಲ್ಲ ಎಂದು ಮಮತಾ ಹೇಳಿದ್ದಾರೆ.

ಏನದು ಯುಪಿಎ? ಯಾವ ಯುಪಿಎಯೂ ಇಲ್ಲ!: ಕಾಂಗ್ರೆಸ್‌ ದೂರವಿಟ್ಟು ಮಮತಾ ಬಣ ರಚನೆ?
Linkup
ಮುಂಬಯಿ: ಸಾರ್ವತ್ರಿಕ ಚುನಾವಣೆಗೆ ಎರಡು ವರ್ಷಗಳು ಬಾಕಿ ಇರುವಾಗಲೇ ಬಿಜೆಪಿಯನ್ನು ಮಣಿಸಲು ವಿರೋಧಪಕ್ಷಗಳು ಜತೆಗೂಡುತ್ತಿವೆ. ಆದರೆ ಈ ವಿಪಕ್ಷ ಪಾಳೆಯದಿಂದ ಅನ್ನು ಹೊರಗಿಡಲಾಗುತ್ತಿದೆಯೇ? ಹೀಗೆ ಅನುಮಾನ ದಟ್ಟವಾಗುತ್ತಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ , ಕಾಂಗ್ರೆಸ್ ಹೊರತಾದ ಪ್ರಬಲ ತಂಡವನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿಯನ್ನೂ ನಡೆಸಿದ್ದಾರೆ. ಪ್ರಬಲ ಮೈತ್ರಿಕೂಟ ರಚನೆಯ ಭಾಗವಾಗಿ ಮುಂಬಯಿಗೆ ತೆರಳಿರುವ ಮಮತಾ ಬ್ಯಾನರ್ಜಿ, ಎನ್‌ಸಿಪಿ ಮುಖಂಡ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, 'ಯುಪಿಎ ಎಂದರೇನು? ಯಾವ ಕೂಡ ಇಲ್ಲ' ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಸ್ತಿತ್ವದಲ್ಲಿಯೇ ಇಲ್ಲ ಎಂಬಂತೆ ಪ್ರತಿಕ್ರಿಯೆ ನೀಡಿದರು. ಇಂದಿನ ಸನ್ನಿವೇಶದಲ್ಲಿ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರಮಟ್ಟದಲ್ಲಿ ಒಂದುಗೂಡಬೇಕು ಮತ್ತು ಸಾಮೂಹಿಕ ನಾಯಕತ್ವ ರಚಿಸಬೇಕು. ಕಾಂಗ್ರೆಸ್ ಇರಲಿ, ಅಥವಾ ಇತರೆ ಯಾವುದೇ ಪಕ್ಷ ಇರಲಿ. ವಿರುದ್ಧ ಯಾರೇ ಇದ್ದರೂ ಜತೆಗೆ ಬಂದರೆ ಒಟ್ಟಿಗೆ ಸಾಗುತ್ತೇವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು. 'ಕೇಂದ್ರದ ನಾಯಕತ್ವಕ್ಕೆ ಪ್ರಬಲ ಪರ್ಯಾಯವನ್ನು ನಾವು ಒದಗಿಸಬೇಕಿದೆ. ನಮ್ಮ ಆಲೋಚನೆ ಈ ದಿನಕ್ಕೆ ಅಲ್ಲ. ಆದರೆ ಚುನಾವಣೆಗೆ. ಇದನ್ನು ಸ್ಥಾಪಿಸಬೇಕು. ಈ ಉದ್ದೇಶದಿಂದಲೇ ಅವರು ಇಲ್ಲಿಗೆ ಬಂದಿದ್ದಾರೆ. ನಮ್ಮೆಲ್ಲರ ಜತೆಗೆ ಸಕಾರಾತ್ಮಕ ಮಾತುಕತೆ ನಡೆದಿದೆ' ಎಂದು ಪವಾರ್ ತಿಳಿಸಿದರು. ಕಾಂಗ್ರೆಸ್ ಈ ಗುಂಪಿನ ಭಾಗವಾಗಲಿದೆಯೇ ಎಂಬ ಪ್ರಶ್ನೆಗೆ ಪವಾರ್, 'ಅದು ಕಾಂಗ್ರೆಸ್ ಇರಲಿ ಅಥವಾ ಬೇರೆ ಯಾವುದೇ ಪಕ್ಷ ಇರಲಿ. ಬಿಜೆಪಿ ವಿರುದ್ಧ ಯಾರು ಇದ್ದಾರೆ ಎನ್ನುವುದು ನಮಗೆ ಮುಖ್ಯ. ಅವರು ಜತೆಯಾಗಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ' ಎಂದರು. ಈಗ ನಡೆಯುತ್ತಿರುವ ಫ್ಯಾಸಿಸಂ ವಿರುದ್ಧ ಯಾರೂ ಹೋರಾಡುತ್ತಿಲ್ಲ. ಈ ಕಾರಣಕ್ಕಾಗಿ ಅಚಲವಾದ ಪರ್ಯಾಯ ತಂಡವೊಂದನ್ನು ರಚಿಸಬೇಕಿದೆ. ಶರದ್ ಪವಾರ್ ಅವರು ಹಿರಿಯ ನಾಯಕರು. ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಇಲ್ಲಿಗೆ ಬಂದಿದ್ದೇನೆ. ಶರದ್ ಅವರು ಹೇಳಿದ್ದಕ್ಕೆ ನನ್ನ ಸಹಮತವಿದೆ ಎಂದು ಮಮತಾ ಹೇಳಿದರು. ಬಂಗಾಳದಿಂದ ಹೊರಬರುವುದು ಮುಖ್ಯಬಳಿಕ ಮುಂಬಯಿ ಸಿವಿಲ್ ಸೊಸೈಟಿಯ ಸದಸ್ಯರೊಂದಿಗೆ ಸಂವಾದದಲ್ಲಿ ಮಾತನಾಡಿದ ಮಮತಾ, 'ನಾನು ಬಿಜೆಪಿಯನ್ನು ರಾಜಕೀಯವಾಗಿ ದೇಶದಿಂದ ಹೊರಹಾಕಲು ಬಯಸಿದ್ದೇನೆ. ಬಂಗಾಳದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತದೆ ಎಂದಾದರೆ, ನಾನು ಏಕೆ ಗೋವಾದಲ್ಲಿ ಸ್ಪರ್ಧಿಸಬಾರದು?' ಎಂದು ಪ್ರಶ್ನಿಸಿದರು. ಬಿಜೆಪಿ ವಿರುದ್ಧ ಹೋರಾಡಲು ಕಣದಲ್ಲಿ ಉಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅವರು ಮುಳುಗಿಸಿಬಿಡುತ್ತಾರೆ. ಎಲ್ಲ ಪ್ರಾದೇಶಿಕ ಪಕ್ಷಗಳೂ ಒಂದಾಗಿ ಬಂದರೆ ಬಿಜೆಪಿಯನ್ನು ಸೋಲಿಸುವುದು ಸುಲಭ. ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿ ಇದ್ದರೂ ನಾನು ಬಂಗಾಳದಿಂದ ಹೊರಗೆ ಬರುವುದು ಮುಖ್ಯ. ಇದರಿಂದ ಉಳಿದವರೂ ಹೊರ ಬರುತ್ತಾರೆ. ಆಗ ಸ್ಪರ್ಧೆ ಇರಲಿದೆ ಎಂದರು. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಹೆದರಿರುತ್ತಾರೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಡಿಮೆಯಾಗುತ್ತದೆ. ಆದರೆ ಉಳಿದ ಸಮಯಗಳಲ್ಲಿ ಅವುಗಳ ಬೆಲೆ ಏರಿಕೆಯಾಗುತ್ತದೆ. ಚುನಾವಣೆಯನ್ನು ಮನದಲ್ಲಿ ಇಟ್ಟುಕೊಂಡೇ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದರು.