ಅಸ್ಸಾಂನಲ್ಲಿ ಬ್ಯಾಂಕ್‌ ಲೂಟಿಗೆ ಯತ್ನಿಸಿದ ಮೂವರ ಹತ್ಯೆ: ಪೊಲೀಸರಿಗೆ ಸಿಎಂ ಬಿಸ್ವಾ ಶಹಬ್ಬಾಸ್‌ಗಿರಿ..

ಕೊಕ್ರಝಾರ್‌ ಪಟ್ಟಣ ಸಮೀಪದ ಭೋಟ್‌ಗಾನ್‌ನ ಅಲಹಾಬಾದ್‌ ಬ್ಯಾಂಕ್‌ ಶಾಖೆಗೆ ಕನ್ನ ಹಾಕಲು ಡಕಾಯಿತರ ತಂಡ ಯತ್ನಿಸಿತ್ತು. 'ಈ ಬಗ್ಗೆ ನಮಗೆ ಮೊದಲೇ ಖಚಿತ ಮಾಹಿತಿ ಬಂದಿದ್ದರಿಂದ ಯಶಸ್ವಿ ತಡೆ ಕಾರ್ಯಾಚರಣೆ ನಡೆಸಲಾಯಿತು' ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಬ್ಯಾಂಕ್‌ ಲೂಟಿಗೆ ಯತ್ನಿಸಿದ ಮೂವರ ಹತ್ಯೆ: ಪೊಲೀಸರಿಗೆ ಸಿಎಂ ಬಿಸ್ವಾ ಶಹಬ್ಬಾಸ್‌ಗಿರಿ..
Linkup
ಗುವಾಹಟಿ (): ಅಸ್ಸಾಂನ ಕೊಕ್ರಝಾರ್‌ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಬ್ಯಾಂಕ್‌ ದರೋಡೆಗೆ ಯತ್ನಿಸಿದ ಮೂವರು ಡಕಾಯಿತರನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಕೊಕ್ರಝಾರ್‌ ಪಟ್ಟಣ ಸಮೀಪದ ಭೋಟ್‌ಗಾನ್‌ನ ಅಲಹಾಬಾದ್‌ ಬ್ಯಾಂಕ್‌ ಶಾಖೆಗೆ ಕನ್ನ ಹಾಕಲು ಡಕಾಯಿತರ ತಂಡ ಯತ್ನಿಸಿತ್ತು. 'ಈ ಬಗ್ಗೆ ನಮಗೆ ಮೊದಲೇ ಖಚಿತ ಮಾಹಿತಿ ಬಂದಿದ್ದರಿಂದ ಯಶಸ್ವಿ ತಡೆ ಕಾರ್ಯಾಚರಣೆ ನಡೆಸಲಾಯಿತು' ಎಂದು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಕೂಡ ಇದೇ ಶಾಖೆಯ ದರೋಡೆಗೆ ವಿಫಲ ಯತ್ನ ನಡೆದಿತ್ತು. ಬ್ಯಾಂಕ್‌ ಸಮೀಪದ ಚೆಂಗ್‌ಮಾರಿ ಬಳಿ ಬೆಳಗಿನ 2.30ರ ಸುಮಾರಿಗೆ ಡಕಾಯಿತರನ್ನು ಪೊಲೀಸರು ಅಡ್ಡಗಟ್ಟಿದರು. ಈ ಹಠಾತ್‌ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾದ ದುಷ್ಕರ್ಮಿಗಳು, ಅಪ್ರಚೋದಿತವಾಗಿ ಪೊಲೀಸರತ್ತ ಗುಂಡು ಹಾರಿಸಿದರು. 'ಪ್ರತಿ ದಾಳಿ ನಡೆಸಿದಾಗ ಮೂವರು ದರೋಡೆಕೋರರು ಹತರಾದರು. ಉಳಿದವರು ಸಮೀಪದ ಅರಣ್ಯದಲ್ಲಿ ಪರಾರಿಯಾದರು' ಎಂದು ಅಧಿಕಾರಿಗಳು ಹೇಳಿದರು. ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ರಾಜ್ಯದಲ್ಲಿ ಯಾವುದೇ ರೀತಿಯ ಅಪರಾಧಕ್ಕೆ ಆಸ್ಪದ ಇಲ್ಲ. ಕಠಿಣ ಕ್ರಮಗಳ ಮೂಲಕ ಅಂತಹ ದುಷ್ಕೃತ್ಯಗಳನ್ನು ಮಟ್ಟಹಾಕಲಾಗುವುದು. ಅಪರಾಧ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿ' ಎಂದು ಹಿಮಂತ್‌ ಹೇಳಿದ್ದಾರೆ.