'ಅವರು ರೈತರಲ್ಲ, ಗೂಂಡಾಗಳು': ಪ್ರತಿಭಟನಾಕಾರರ ಮೇಲೆ ಸಚಿವೆ ಮೀನಾಕ್ಷಿ ಲೇಖಿ ಕಿಡಿ

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ಅವರು ರೈತರಲ್ಲ ಗೂಂಡಾಗಳು ಎಂದು ಆರೋಪಿಸಿದ್ದಾರೆ.

'ಅವರು ರೈತರಲ್ಲ, ಗೂಂಡಾಗಳು': ಪ್ರತಿಭಟನಾಕಾರರ ಮೇಲೆ ಸಚಿವೆ ಮೀನಾಕ್ಷಿ ಲೇಖಿ ಕಿಡಿ
Linkup
ಹೊಸದಿಲ್ಲಿ: ವಿರುದ್ಧ ಜಂತರ್ ಮಂತರ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಧಾಳಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರತಿಭಟನಾನಿರತ ರೈತರನ್ನು ನೂತನ ಕೇಂದ್ರ ಸಚಿವೆ ಅವರು 'ಗೂಂಡಾಗಳು' ಎಂದು ಕರೆದಿದ್ದಾರೆ. 'ಅವರು ರೈತರಲ್ಲ, ಗೂಂಡಾಗಳು. ಇವೆಲ್ಲವೂ ಅಪರಾಧ ಕೃತ್ಯಗಳು. ಜನವರಿ 26ರಂದು ನಡೆದಿದ್ದು ಕೂಡ ನಾಚಿಕೆಗೇಡಿನ ಅಪರಾಧ ಚಟುವಟಿಕೆಗಳು. ವಿರೋಧಪಕ್ಷಗಳು ಅಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ' ಎಂದು ಅವರು ಆರೋಪಿಸಿದ್ದಾರೆ. ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆಗಳ ರಾಜ್ಯ ಸಚಿವೆಯಾಗಿರುವ ಮೀನಾಕ್ಷಿ ಲೇಖಿ ಅವರ ಹೇಳಿಕೆ ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. 'ಗೂಂಡಾಗಳೆಂದರೆ ಏನನ್ನೂ ಹೊಂದಿರದೆ ಇರುವವರು. ರೈತರ ಕುರಿತು ಅಂತಹ ಹೇಳಿಕೆಗಳನ್ನು ನೀಡುವುದು ತಪ್ಪು. ನಾವು ರೈತರು. ಗೂಂಡಾಗಳಲ್ಲ. ರೈತರು ಈ ನೆಲದ ಅನ್ನದಾತರು' ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ಅವರು ಲೇಖಿ ಹೇಳಿಕೆಯನ್ನು ಖಂಡಿಸಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಗುರುವಾರ ಆಯೋಜಿಸಿದ್ದು, ಅದರ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನೊಬ್ಬರ ಮೇಲೆ ಮಹಿಳೆಯೊಬ್ಬರು ಕೋಲಿನಿಂದ ಥಳಿಸಿದ್ದರು ಎಂದು ಆರೋಪಿಸಲಾಗಿದೆ. 'ಮಹಿಳಾ ಪತ್ರಕರ್ತರೊಬ್ಬರು ಪ್ರತಿಭಟನಾಕಾರರನ್ನು ಸಂದರ್ಶಿಸಲು ತೆರಳಿದ್ದಾಗ ಪ್ರತಿಭಟನಾಕಾರ್ತಿಯೊಬ್ಬರು ಕೆಟ್ಟ ಮಾತುಗಳಿಂದ ನಿಂದಿಸಿದರು. ನಾವೊಂದಿಬ್ಬರು ಆಕೆಯನ್ನು ಮಾತನಾಡಿಸಲು ತೆರಳಿದಾಗ ನನ್ನ ತಲೆಗೆ ಕೋಲಿನಿಂದ ಹೊಡೆದರು' ಎಂದು ಪತ್ರಕರ್ತ ಆರೋಪಿಸಿದ್ದಾರೆ.