
ಅಮೃತಸರ: ಸಿಎಂ ಜತೆಗೆ ಅಧಿಕಾರ ಜಟಾಪಟಿ ನಡೆಸಿ, ಹೈಕಮಾಂಡ್ನ ಭರವಸೆ ಗೆದ್ದು ರಾಜ್ಯ ಕಾಂಗ್ರೆಸ್ನ (ಪಿಪಿಸಿಸಿ) ನೂತನ ಸಾರಥಿಯಾಗಿ ನೇಮಕಗೊಂಡಿರುವ ಅವರು ಬುಧವಾರ ತಮ್ಮ ನಿವಾಸದಲ್ಲಿ ಬೆಂಬಲಿಗ ಶಾಸಕರೊಂದಿಗೆ 'ಶಕ್ತಿ' ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಾಳಯಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ಸಿಧು, ಮುಂದಿನ ದಿನಗಳಲ್ಲಿ ಪಂಜಾಬ್ ಕಾಂಗ್ರೆಸ್ಅನ್ನು ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ.
80ರ ಪೈಕಿ 62 ಶಾಸಕರು ಬುಧವಾರ ಸಿಧು ಅವರ ನಿವಾಸದಲ್ಲಿ ಸೇರಿಕೊಂಡು ಮಹತ್ವದ ಸಭೆ ನಡೆಸಿದರು. ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿರುವ ಸುಖಜಿಂದರ್ ಸಿಂಗ್ ರಾಂಧ್ವಾ, ತೃಪ್ತ್ ರಾಜೀಂದರ್ ಸಿಂಗ್ ಬಾಜ್ವಾ, ಚರಣ್ಜೀತ್ ಸಿಂಗ್ ಛನ್ನಿ, ಸುಖಭಿಂದರ್ ಸಿಂಗ್ ಸರಕಾರಿಯಾ ಹಾಗೂ ನಿರ್ಗಮಿತ ರಾಜ್ಯಾಧ್ಯಕ್ಷ ಸುನಿಲ್ ಜಾಖರ್ ಸಿಧು ನಿವಾಸದಲ್ಲಿ ಸೇರಿದ್ದು ಗಮನಾರ್ಹ.
ಸ್ವರ್ಣಮಂದಿರ, ದೇವಸ್ಥಾನಕ್ಕೆ ಭೇಟಿ!ಸಿಧು ನಿವಾಸದಿಂದ ಐಷಾರಾಮಿ ಬಸ್ಗಳಲ್ಲಿ ತೆರಳಿದ 62 ಶಾಸಕರು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ದುರ್ಗಿಯಾನ ದೇವಸ್ಥಾನ ಮತ್ತು ರಾಮತೀರ್ಥ ಸ್ಥಳಗಳಿಗೂ ಭೇಟಿ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ನಿರ್ಗಮಿತ ರಾಜ್ಯಾಧ್ಯಕ್ಷ ಜಾಖರ್ ಅವರು, ''ಪಂಜಾಬ್ನ ಅಭಿವೃದ್ಧಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ನಾವೆಲ್ಲರೂ ಅಭಿವೃದ್ಧಿಗಾಗಿ ಶ್ರಮಿಸುವ ಸಂಕಲ್ಪ ಮಾಡಿದ್ದೇವೆ,'' ಎಂದರು.
ಸಿಎಂಗೆ ಆಮಂತ್ರಣ!ಶುಕ್ರವಾರದಂದು ಸಿಧು ಅವರು ಪಂಜಾಬ್ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕೂಡ ಸಿದ್ಧಪಡಿಸಲಾಗಿದೆ. ಒಟ್ಟು ನಾಲ್ವರು ಕಾರ್ಯಾಧ್ಯಕ್ಷರೊಂದಿಗೆ ಸಿಧು ಅಧಿಕಾರ ಸ್ವೀಕರಿಸಲಿದ್ದಾರೆ. ಸಿಎಂ ಅಮರೀಂದರ್ ಸಿಂಗ್ ಅವರಿಗೆ ಕೂಡ ಶೀಘ್ರವೇ ಆಹ್ವಾನ ಪತ್ರಿಕೆಯನ್ನು ರವಾನಿಸಲಾಗುವುದು ಎಂದು ಮೊಗಾ ಶಾಸಕ ಡಾ.ಹರ್ಜೋತ್ ಕಮಾಲ್ ತಿಳಿಸಿದ್ದಾರೆ. ಈಗಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ ಸಿಧು ತಮ್ಮ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಭೇಟಿಯ ಮಾತೇ ಇಲ್ಲಎಂದು ಸಿಎಂ ಅಮರೀಂದರ್ ಸಿಂಗ್ ಅವರು ತಮ್ಮ ಆಪ್ತರ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹಾಗಾಗಿ ಸಿಧು ಆಮಂತ್ರಣಕ್ಕೆ ಒಪ್ಪಿಗೆ ನೀಡಿ ಸಿಎಂ ಸಿಂಗ್ ಅವರು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಹೀಗಾದಲ್ಲಿ ಸದ್ಯ ಪಂಜಾಬ್ ಕಾಂಗ್ರೆಸ್ನಲ್ಲಿಮೂಡಿರುವ ಎರಡು ಬಣಗಳ ಬಿರುಕು ದೊಡ್ಡ ಮಟ್ಟದ್ದಾಗಿ 'ಕೈ' ಪಾಳಯ ಇಬ್ಭಾಗವಾಗುವುದು ನಿಶ್ಚಿತ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್ ವಿಧಾನಸಭೆಯಲ್ಲಿ80 ಶಾಸಕರನ್ನು ಕಾಂಗ್ರೆಸ್ ಹೊಂದಿದೆ.