Kantara Movie: ರಿಷಬ್ ಶೆಟ್ಟಿಯ 'ಕಾಂತಾರ' ಚಿತ್ರದ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್!

ನಟ/ನಿರ್ದೇಶಕ ರಿಷಬ್ ಶೆಟ್ಟಿ ಅವರು ನಿರ್ದೇಶಕರಾಗಿರುವ ಹೊಸ ಸಿನಿಮಾ 'ಕಾಂತಾರ' ಶುಕ್ರವಾರ (ಆ.6) ಅನೌನ್ಸ್‌ ಆಗಿದೆ. ಈ ಸಿನಿಮಾದ ಬಗೆಗಿನ ವಿಶೇಷ ಮಾಹಿತಿಯನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Kantara Movie: ರಿಷಬ್ ಶೆಟ್ಟಿಯ 'ಕಾಂತಾರ' ಚಿತ್ರದ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್!
Linkup
ಹರೀಶ್‌ ಬಸವರಾಜ್‌ ಕೆಲ ದಿನಗಳ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ , ಹೊಸ ಕಥೆಯೊಂದು ಸಿಕ್ಕಿದೆ, ನಿರ್ದೇಶನಕ್ಕೆ ರೆಡಿ ಎಂದು ಬರೆದುಕೊಂಡಿದ್ದರು. ಈಗ ಆ ಸಿನಿಮಾ ಅನೌನ್ಸ್‌ ಆಗಿದ್ದು, ಅದಕ್ಕೆ '' ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ರಿಷಬ್ ಅವರೇ ನಾಯಕನಾಗಿಯೂ ನಟಿಸುತ್ತಿದ್ದಾರೆ. ಗೆಜ್ಜೆಕಟ್ಟಿದ ಎರಡು ಕಾಲುಗಳು, ಕಂಬಳದ ಕೋಣ ಓಡಿಸುವ ಓಟಗಾರ, ಬೆಂಕಿಯ ಜ್ವಾಲೆ ಇತ್ಯಾದಿ ಇರುವ ಚಿತ್ರದ ಪೋಸ್ಟರ್‌ ಸೃಜನಶೀಲವಾಗಿ ಗಮನ ಸೆಳೆದಿದೆ. ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದ ರಿಷಬ್ ಶೆಟ್ಟಿ ಅಂದಿನಿಂದಲೂ ವಿಶಿಷ್ಟ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಿರಿಕ್‌ ಪಾರ್ಟಿಯಂತಹ ಯೂತ್‌ಫುಲ್‌ ಸಿನಿಮಾ ಮಾಡಿ ಸಕ್ಸಸ್‌ ಆದ ಅವರು ನಂತರ ಕೈಗೆತ್ತಿಕೊಂಡಿದ್ದು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಎಂಬ ಮಕ್ಕಳ ಸಿನಿಮಾ. ಈ ಸಿನಿಮಾದ ಮೂಲಕ ಅವರು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡರು. ಇದರ ಜತೆಗೆ 'ಬೆಲ್‌ ಬಾಟಮ್‌' ಸಿನಿಮಾ ಮೂಲಕ ನಾಯಕರಾಗಿಯೂ ನಟಿಸಿ ಅಲ್ಲಿಯೂ ಯಶಸ್ಸು ಕಂಡರು. ಈಗ 'ಕಾಂತಾರ' ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. 'ಪ್ರಕೃತಿ ಮತ್ತು ಮಾನವನ ನಡುವೆ ನಡೆಯುವ ಕಥೆ ಇದಾಗಿದೆ. ಎಲ್ಲ ಪಾತ್ರಗಳು ಮತ್ತು ಸಿನಿಮಾದ ಮೇಕಿಂಗ್‌, ನಿರೂಪಣೆ ಹೀಗೆ ಹಲವು ವಿಚಾರದಲ್ಲಿ'ಕಾಂತಾರ' ಸಿನಿಮಾ ಪ್ರೇಕ್ಷಕರಿಗೆ ವಿಶೇಷ ಅನುಭವವನ್ನು ನೀಡುತ್ತದೆ' ಎನ್ನುತ್ತಾರೆ ರಿಷಬ್‌. 'ಎರಡನೇ ಲಾಕ್‌ಡೌನ್‌ ಸಮಯದಲ್ಲಿ ನನ್ನ ಅಸೋಸಿಯೇಟ್‌ಗಳ ಜತೆ ಚರ್ಚೆ ಮಾಡುತ್ತಿದ್ದಾಗ, ಈ ಸಿನಿಮಾದ ಕಥೆಯ ಎಳೆ ಹೊಳೆಯಿತು. ಇದು ಪ್ರಕೃತಿ ಮತ್ತು ಮಾನವನ ನಡುವೆ ನಡೆಯುವ ಕಥೆ. 90ರ ದಶಕದಲ್ಲಿಸಿನಿಮಾದ ಕಥೆ ನಡೆಯುತ್ತದೆ. ಕಾಡು, ಪ್ರಕೃತಿ, ನದಿ ಹೀಗೆ ಎಲ್ಲಾ ವಿಷಯಗಳು ಸಿನಿಮಾದಲ್ಲಿ ಬಂದು ಹೋಗುತ್ತವೆ. ಹಾಗಾಗಿ 'ಕಾಂತಾರ' ಎಂಬ ಟೈಟಲ್‌ ಇಟ್ಟಿದ್ದೇನೆ. ಕಾಂತಾರ ಎಂದರೆ ನಿಗೂಢ ಅರಣ್ಯ ಎಂದರ್ಥ. ಅದರೊಳಗೆ ಸಾಕಷ್ಟು ವಿಷಯಗಳಿರುವುದರಿಂದ ಇದನ್ನೇ ಟೈಟಲ್‌ ಮಾಡಿದ್ದೇವೆ. ಕಥೆ, ಚಿತ್ರಕಥೆ ಎಲ್ಲವೂ ನನ್ನದೇ. ಸಂಭಾಷಣೆಯನ್ನು ನನ್ನ ಜತೆಗೆ ಕೆಲಸ ಮಾಡುತ್ತಿರುವ ಹುಡುಗರ ಜತೆ ಸೇರಿಕೊಂಡು ಬರೆದಿದ್ದೇನೆ. ಅವರನ್ನು ಸದ್ಯದಲ್ಲೇ ರಿವೀಲ್‌ ಮಾಡುತ್ತೇನೆ' ಎಂದು ಮಾಹಿತಿ ನೀಡಿದರು ರಿಷಬ್ ಶೆಟ್ಟ. ರಿಷಬ್ ಹುಟ್ಟೂರಿನ ಬಳಿ ಸೆಟ್‌ ಈ ಸಿನಿಮಾ 90ರ ದಶಕದಲ್ಲಿ ನಡೆಯುವುದರಿಂದ ಇದಕ್ಕಾಗಿ ರಿಷಬ್ ಶೆಟ್ಟಿಯವರ ಹುಟ್ಟೂರಾದ ಕುಂದಾಪುರದ ಬಳಿ ದೊಡ್ಡ ಸೆಟ್‌ ಹಾಕಲು ಪ್ಲಾನ್‌ ಮಾಡಿಕೊಂಡಿದ್ದಾರೆ. 'ನಮ್ಮ ಕಥೆಗೆ ಬೇಕಾದ ರೀತಿಯ ಸೆಟ್‌ ಅನ್ನು ಹಾಕುತ್ತಿದ್ದೇವೆ. ಕುಂದಾಪುರ, ಕೊಲ್ಲೂರು ಭಾಗದಲ್ಲಿ ಹೆಚ್ಚಾಗಿ ಚಿತ್ರೀಕರಣವಾಗುತ್ತದೆ' ಎಂದರು ರಿಷಬ್. ಈ ಸಿನಿಮಾದಲ್ಲಿ ರಿಷಬ್ ಜತೆ ಬಹುಭಾಷಾ ನಟ ಕಿಶೋರ್‌, ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿಶೋರ್‌ ಮತ್ತು ಅಚ್ಯುತ್‌ ಅವರ ಪಾತ್ರಗಳು ಬಹಳ ಚೆನ್ನಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಜತೆಗೆ ಇನ್ನೂ ಒಂದಷ್ಟು ನಟರು ಸರ್‌ಪ್ರೈಸಿಂಗ್‌ ಆಗಿ ಸಿನಿಮಾದಲ್ಲಿರಲಿದ್ದಾರೆ. ನಾಯಕಿಯ ಆಯ್ಕೆ ಸದ್ಯದಲ್ಲೆನಡೆಯಲಿದೆ. ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ ಕಶ್ಯಪ್‌ ಸಿನಿಮಾಟೋಗ್ರಫಿ, ಪ್ರತೀಕ್‌ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ. ಕಾಡಿನಲ್ಲಿ, ಕಾಡಿನ ಪಕ್ಕದ ಹಳ್ಳಿಗಳಲ್ಲಿನಡೆಯುವ ಈ ಕಥೆ ಆ್ಯಕ್ಷನ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾವಾಗಿರುತ್ತದೆ. 'ಕಾಂತಾರ' ಮುಗಿದ ಮೇಲೆ ರಿಷಬ್ 'ಬೆಲ್‌ ಬಾಟಮ್‌' ಸಿನಿಮಾ ಸೆಟ್‌ ಸೇರಿಕೊಳ್ಳಲಿದ್ದಾರೆ. ಅದಾದ ನಂತರ ಬಹು ನೀರಿಕ್ಷೆಯ 'ರುದ್ರ ಪ್ರಯಾಗ'ವನ್ನು ಆರಂಭಿಸಲಿದ್ದಾರೆ.