Bitcoin Scam : ಸಿದ್ದರಾಮಯ್ಯ ಮಾಡಿದ ಟ್ವೀಟ್‌ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ; ಶಾಸಕ ಪಿ ರಾಜೀವ್ ಆರೋಪ

ಸಿದ್ದರಾಮಯ್ಯ ಹೇಳಿಕೆ ಮೂಲಕ ಎಲ್ಲರ ಮೇಲೆ ಸಂಶಯದ ದೃಷ್ಟಿ ನೆಟ್ಟಿಸಿದ್ದೀರಿ. ಇದನ್ನು ಸಾಬೀತು ಪಡಿಸುವ ಹೊಣೆ ನಿಮ್ಮ ಮೇಲಿದೆ ಎಂದರು. ಅಲ್ಲದೇ ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ಬಗ್ಗೆ ಇರುವ ವರದಿ ಕಳವಳಕಾರಿ ಎನ್ನುತ್ತಾರೆ. ಈ ಮೂಲಕ ತನಿಖಾಧಿಕಾರಿಗಳ ಬಗ್ಗೆ ಸಂಶಯ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯಗೆ ಯಾರು ವರದಿ ಕೊಟ್ಟರು? ಯಾವ ವರದಿಯನ್ನು ಉಲ್ಲೇಖ ಮಾಡಿದ್ದೀರಿ? ಎಂದು ಬಿಜೆಪಿ ಶಾಸಕ ರಾಜೀವ್ ಪ್ರಶ್ನಿಸಿದರು.

Bitcoin Scam : ಸಿದ್ದರಾಮಯ್ಯ ಮಾಡಿದ ಟ್ವೀಟ್‌ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ; ಶಾಸಕ ಪಿ ರಾಜೀವ್ ಆರೋಪ
Linkup
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕ ಅವರ ಟ್ವೀಟ್ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಶಾಸಕ ಪಿ. ರಾಜೀವ್ ಆರೋಪ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂದು ಹೇಳಿದ್ದರು. ಪ್ರಭಾವಿ ರಾಜಕಾರಣಿಗಳು ಎಲ್ಲ ಪಕ್ಷದಲ್ಲಿ ಇದ್ದಾರೆ. ಆದರೆ ಸಿದ್ದರಾಮಯ್ಯ ಹೇಳಿಕೆ ಮೂಲಕ ಎಲ್ಲರ ಮೇಲೆ ಸಂಶಯದ ದೃಷ್ಟಿ ನೆಟ್ಟಿಸಿದ್ದೀರಿ. ಇದನ್ನು ಸಾಬೀತು ಪಡಿಸುವ ಹೊಣೆ ನಿಮ್ಮ ಮೇಲಿದೆ ಎಂದರು. ಅಲ್ಲದೇ ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ಬಗ್ಗೆ ಇರುವ ವರದಿ ಕಳವಳಕಾರಿ ಎನ್ನುತ್ತಾರೆ. ಈ ಮೂಲಕ ತನಿಖಾಧಿಕಾರಿಗಳ ಬಗ್ಗೆ ಸಂಶಯ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯಗೆ ಯಾರು ವರದಿ ಕೊಟ್ಟರು? ಯಾವ ವರದಿಯನ್ನು ಉಲ್ಲೇಖ ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ನಿಮಗೆ ಬಂದ ಮಾಹಿತಿ ಎಲ್ಲಿಯದ್ದು ಎಂದು ರಾಜ್ಯದ ಜನರಿಗೆ ತಿಳಿಸಬೇಕು ಎಂದ ಶಾಸಕ , ದಲಿತರ ಬಗ್ಗೆ ವಿವಾದದ ಹೇಳಿಕೆಯನ್ನು ಮರೆಮಾಚಲು ಬಿಟ್ ಕಾಯಿನ್ ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ಖಾಲಿ ಬುಟ್ಟಿ ಇಟ್ಟುಕೊಂಡು, ಪ್ರಿಯಾಂಕ್ ಖರ್ಗೆ ಪುಂಗಿ ಊದಿದರೂ ಹಾವು ಮಾತ್ರ ಹೊರಗಡೆ ಬರಲಿಲ್ಲ ಎಂದರು. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಟ್ವೀಟ್ ಹಿಂಪಡೆದು ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ರಾಜೀವ್, 18-2-2018 ರಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಗಲಾಟೆ ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣ ಭಟ್ ವಿರುದ್ಧ ಸೂಕ್ತ ತನಿಖೆ ನಡೆಸಿದ್ದಲ್ಲಿ ದೊಡ್ಡ ಹಗರಣ ತಡೆಗಟ್ಟಬಹುದಿತ್ತು. ಇದು ಕಾಂಗ್ರೆಸ್ ಸರ್ಕಾರದ ದೊಡ್ಡ ವೈಫಲ್ಯ. ಚಾರ್ಜ್‌ಶೀಟ್‌ನಲ್ಲಿ ಶ್ರೀಕೃಷ್ಣ ನಾಪತ್ತೆ ಎಂದು ಉಲ್ಲೇಖ ಮಾಡಲಾಗುತ್ತದೆ. ಪೊಲೀಸರ ಮುಂದೆ ಹಾಜರಾಗದೆ ಚಾರ್ಟರ್ ವಿಮಾನದಲ್ಲಿ ಸುತ್ತಿಸುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು. ಇನ್ನು ಬಿಟ್‌ಕಾಯಿನ್ ಪ್ರಕರಣದ ಆರೋಪಿ ಶ್ರೀಕೃಷ್ಣಗೆ ಶರತ್ತು ಬದ್ಧ ಜಾಮೀನು ಕೊಟ್ಟಿದ್ದರೂ ನಂತರದಲ್ಲಿ ವಿಚಾರಣೆ ನಡೆಸಿಲ್ಲ. ಅಂದು ಆತನನ್ನು ಕಾನೂನು ಕ್ರಮಕ್ಕೆ ಒಳಪಡಿಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಶ್ರೀಕಿಯನ್ನು ಆ ಸಂದರ್ಭದಲ್ಲಿ ಪುಕ್ಕಟೆಯಾಗಿ ಬಿಟ್ಟಿದ್ದಕ್ಕಾಗಿ ಇಂತಹ ಸಮಸ್ಯೆ ಉದ್ಭವವಾಗಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹ್ರೈಡ್ರೋ ಗಾಂಜಾ ಪ್ರಕರಣದ ತನಿಖೆಯ ಸಂದರ್ಭದಲ್ಲಿ ರಾಜಕಾರಣಿಗಳು, ಶ್ರೀಮಂತರು, ಸಿನಿಮಾ ನಟರ ಬಂಧನ ಆಗುತ್ತದೆ. ಇಡೀ ದೇಶದಲ್ಲಿ ತನಿಖೆ ನಡೆಸುತ್ತಾರೆ. ಮೂರು ಜನರನ್ನು ಆರೆಸ್ಟ್ ಮಾಡಿ ಪ್ರಕರಣ ಕ್ಲೋಸ್ ಮಾಡುತ್ತಿದ್ದರೆ ಶ್ರೀಕಿ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ ಎಂದು ಸಮರ್ಥಿಸಿಕೊಂಡರು. ಇದು ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ದಕ್ಷಣೆ ತೋರಿಸುತ್ತದೆ. ಈ ಸಂದರ್ಭದ ತನಿಖೆಯ ಸಂದರ್ಭದಲ್ಲಿ ಶ್ರೀಕೃಷ್ಣ ಹ್ಯಾಕಿಂಗ್ ಪ್ರಕರಣ ಬೆಳಕಿಗೆ ಬರುತ್ತದೆ ಎಂದ ರಾಜೀವ್, ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಷವಾಗಿದೆ.‌ ಕಾನೂನಿನ ಬಗ್ಗೆ ಆಳವಾದ ಮಾಹಿತಿ ಇಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಭಾಗಷಃ ಸತ್ಯ, ಸುಳ್ಳು, ತನಿಖೆ ದಾರಿ ತಪ್ಪಿಸುವ ಉದ್ದೇಶದಿಂದ ಅಸಂಬದ್ಧ ಹೇಳಿಕೆಯನ್ನು ಕೊಡಬಹುದು. ಆದರೆ ಆರೋಪಿ ಹೇಳಿಕೆ ಪೂರ್ಣವಾಗಿ ದಾಖಲು ಮಾಡಬೇಕು ಹಾಗೂ ನಂತರದಲ್ಲಿ ಸತ್ಯವೋ ಸುಳ್ಳೋ ಎಂದು ತನಿಖೆ ಮಾಡಬೇಕು ಎಂಬುವುದು ಕಾನೂನಿನಲ್ಲಿದೆ.‌ಆದರೆ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಇದ್ದಿದ್ದೆಲ್ಲವನ್ನು ನ್ಯಾಯಾಲಯ ಒಪ್ಪಿಕೊಳ್ಳಲ್ಲ ಎಂದು ವಿವರಿಸಿದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹಾಸ್ಯ ನಟ ಆಗಿದ್ದಾರೆ.‌ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಕಾನೂನಿನ ಕನಿಷ್ಠ ಜ್ಞಾನ ಇರುವ ವ್ಯಕ್ತಿ ಆ ಪ್ರಶ್ನೆ ಕೇಳಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಬಿಟ್ ಕಾಯಿನ್ ಹಗರಣದ ವಿಷಯದಲ್ಲಿ ನಳಿನ್ ಕುಮಾರ್ ಕಟೀಲ್ ಮೌನ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಬತ್ತಳಿಕೆಯಲ್ಲಿರುವ ದೊಡ್ಡ ಅಸ್ತ್ರ ಅಂದರೆ ಅದು ನಮ್ಮ ರಾಜ್ಯಾಧ್ಯಕ್ಷರು‌. ಖಾಲಿ ಬುಟ್ಟಿ, ಪುಂಗಿ ನಾದಕ್ಕೆಲ್ಲಾ ಈ ಅಸ್ತ್ರವನ್ನು ನಾವು ಬಳಸ್ತೀವಾ...? ಪಕ್ಷದ ವಕ್ತಾರರಾಗಿ ನಾವು ಸಮರ್ಥರಿದ್ದೇವೆ. ನಾವೇ ಇದನ್ನು ಎದುರಿಸುತ್ತೇವೆ. ಒಂದು ವೇಳೆ ನಾವು ವಿಫಲರಾದಾಗ ಅವ್ರು ಬರ್ತಾರೆ ಎಂದರು.