Bangalore Ganesh Festival Rules: ವಾರ್ಡ್‌ಗೊಂದೇ ಗಣೇಶ - ವಿಸರ್ಜನೆಗಿಲ್ಲ ಅವಕಾಶ; ಇದು ಬೆಂಗಳೂರಿಗರಿಗೆ ಕಟ್ಟುನಿಟ್ಟಿನ ಆದೇಶ!

Ganesh Festival Guidelines in Karnataka: ಗಣೇಶ ಮೂರ್ತಿಗಳ ವಿಸರ್ಜನೆಗಾಗಿಯೇ 300- 400 ಮಂದಿ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಗಣೇಶೋತ್ಸವ ಸಮಿತಿಗಳ ಆಯೋಜಕರು ನೇರವಾಗಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಅನುಮತಿ ಇಲ್ಲ. ವಾಹನಗಳಲ್ಲಿ ತಂದು ನಿಗದಿತ ಟೇಬಲ್‌ಗಳ ಮೇಲೆ ಇಟ್ಟು ವಾಪಸ್ಸಾಗಬೇಕು. ಪಾಲಿಕೆಯಿಂದ ನಿಯೋಜಿಸಲ್ಪಟ್ಟ ಸಿಬ್ಬಂದಿಯೇ ವಿಸರ್ಜನೆ ಕಾರ್ಯ ಕೈಗೊಳ್ಳುತ್ತಾರೆ. ಗಣೇಶ ಮೂರ್ತಿಗಳೊಂದಿಗೆ ಕೇವಲ 20 ಮಂದಿಯಷ್ಟೇ ಬರಬಹುದು. ಅದಕ್ಕಿಂತ ಹೆಚ್ಚು ಮಂದಿ ಆಗಮಿಸುವಂತಿಲ್ಲ. ಮೆರವಣಿಗೆಗೂ ಅವಕಾಶವಿಲ್ಲ

Bangalore Ganesh Festival Rules: ವಾರ್ಡ್‌ಗೊಂದೇ ಗಣೇಶ - ವಿಸರ್ಜನೆಗಿಲ್ಲ ಅವಕಾಶ; ಇದು ಬೆಂಗಳೂರಿಗರಿಗೆ ಕಟ್ಟುನಿಟ್ಟಿನ ಆದೇಶ!
Linkup
ಬೆಂಗಳೂರು: ವ್ಯಾಪ್ತಿಯಲ್ಲಿ ವಾರ್ಡ್‌ಗೊಂದು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಸಂಘ- ಸಂಸ್ಥೆಗಳು, ಸಮಿತಿಗಳಿಂದ ಹೆಚ್ಚಿನ ಅರ್ಜಿಗಳು ಬಂದರೆ, ಸ್ಥಳೀಯ ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಪಾಲಿಕೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಆಯ್ದ ಕೆರೆಗಳಲ್ಲಿನ ಕಲ್ಯಾಣಿಗಳಲ್ಲಿ ಹಾಗೂ ಮನೆಗಳಲ್ಲಿ ಪೂಜಿಸುವ ಗಣೇಶ ವಿಗ್ರಹಗಳ ವಿಸರ್ಜನೆಗೆ ಸಂಚಾರಿ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಐದು ದಿನಗಳ ಬಳಿಕ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗಣೇಶ ಮೂರ್ತಿಗಳ ವಿಸರ್ಜನೆಗೆ ನಿಗದಿಪಡಿಸಿರುವ ಕೆರೆಗಳು, ಕಲ್ಯಾಣಿಗಳ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಬೆಳಗ್ಗೆಯಿಂದ ರಾತ್ರಿ 9 ರವರೆಗೆ ಮಾತ್ರ ವಿಸರ್ಜನೆ ಮಾಡಬಹುದು. ಆನಂತರ ಕರ್ಫ್ಯೂ ಜಾರಿಯಾಗಲಿದೆ. ಹಾಗಾಗಿ, ಸಂಘ- ಸಂಸ್ಥೆಗಳು, ಉತ್ಸವ ಸಮಿತಿಗಳ ಆಯೋಜಕರು 8 ಗಂಟೆಯೊಳಗೆ ಕಲ್ಯಾಣಿಗಳ ಬಳಿ ಮೂರ್ತಿಗಳನ್ನು ತಂದಿಟ್ಟು ಪೂಜೆ ಮುಗಿಸಿ ಮನೆಗಳಿಗೆ ವಾಪಸ್ಸಾಗಬೇಕು ಎಂದು ಮನವಿ ಮಾಡಿದರು. ಗಣೇಶ ಮೂರ್ತಿಗಳ ವಿಸರ್ಜನೆಗಾಗಿಯೇ 300- 400 ಮಂದಿ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಗಣೇಶೋತ್ಸವ ಸಮಿತಿಗಳ ಆಯೋಜಕರು ನೇರವಾಗಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಅನುಮತಿ ಇಲ್ಲ. ವಾಹನಗಳಲ್ಲಿ ತಂದು ನಿಗದಿತ ಟೇಬಲ್‌ಗಳ ಮೇಲೆ ಇಟ್ಟು ವಾಪಸ್ಸಾಗಬೇಕು. ಪಾಲಿಕೆಯಿಂದ ನಿಯೋಜಿಸಲ್ಪಟ್ಟ ಸಿಬ್ಬಂದಿಯೇ ವಿಸರ್ಜನೆ ಕಾರ್ಯ ಕೈಗೊಳ್ಳುತ್ತಾರೆ. ಪ್ರತಿಯೊಂದು ಕಲ್ಯಾಣಿ, ಕೆರೆಗಳ ಬಳಿ ಎಸಿಪಿ ದರ್ಜೆಯ ಪೊಲೀಸ್‌ ಅಧಿಕಾರಿ ಮತ್ತು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ನೇಮಿಸಲಾಗುತ್ತಿದೆ. ಗಣೇಶ ಮೂರ್ತಿಗಳೊಂದಿಗೆ ಕೇವಲ 20 ಮಂದಿಯಷ್ಟೇ ಬರಬಹುದು. ಅದಕ್ಕಿಂತ ಹೆಚ್ಚು ಮಂದಿ ಆಗಮಿಸುವಂತಿಲ್ಲ. ಮೆರವಣಿಗೆಗೂ ಅವಕಾಶವಿಲ್ಲ ಎಂದು ಹೇಳಿದರು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಪಾಲಿಕೆಯಿಂದಲೇ ಸ್ಯಾನಿಟೈಸ್‌ ವ್ಯವಸ್ಥೆ ಮಾಡಲಾಗುವುದು. ಉತ್ಸವ ಸಮಿತಿಗಳ ಎಲ್ಲ ಪದಾಧಿಕಾರಿಗಳಿಗೆ ಲಸಿಕೆ ನೀಡಲಾಗುವುದು. ಕೊರೊನಾ ನಿಯಮಾವಳಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಗಳಲ್ಲಿ ಪೂಜಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಚಾರಿ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಯು ಧ್ವನಿ ವರ್ಧಕಗಳ ಮೂಲಕ ಘೋಷಣೆ ಮಾಡಿ, ವಿಸರ್ಜನೆಗೆ ಅನುವು ಮಾಡಿಕೊಡಲಿದ್ದಾರೆ. ಸಾರ್ವಜನಿಕ ಗಣೇಶೋತ್ಸವಗಳಿಗೆ ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಮುಚ್ಚಳಿಕೆ ಬರೆದು ಕೊಟ್ಟು ಅನುಮತಿ ಪಡೆದುಕೊಳ್ಳಬಹುದು ಎಂದರು.