700ಕ್ಕೂ ಅಧಿಕ ಸಿನಿಮಾ ಕೊರಿಯೋಗ್ರಫಿ; 'ಮಗಧೀರ'ಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶಿವ ಶಂಕರ್ ವಿಧಿವಶ!

ಕೊರಿಯೋಗ್ರಾಫರ್ ಶಿವ ಶಂಕರ್ ಅವರು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು. ಜೀವನ್ಮರಣದ ಹೋರಾಟದಲ್ಲಿ ಅವರು ಕೊನೆಗೂ ಅಸು ನೀಗಿದ್ದಾರೆ. ಶಿವ ಶಂಕರ್ ನಿಧನಕ್ಕೆ ತೆಲುಗು, ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ.

700ಕ್ಕೂ ಅಧಿಕ ಸಿನಿಮಾ ಕೊರಿಯೋಗ್ರಫಿ; 'ಮಗಧೀರ'ಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶಿವ ಶಂಕರ್ ವಿಧಿವಶ!
Linkup
ಕೊರಿಯೋಗ್ರಾಫರ್ ಹೈದರಾಬಾದ್‌ನಲ್ಲಿ ರವಿವಾರ (ನ, 28) 72ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೊರೊನಾ ವೈರಸ್ ಸಂಬಂಧಿತ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಶಿವ ಶಂಕರ್‌ಗೆ ಕೊರೊನಾ ಸೋಂಕು ತಗುಲಿತ್ತಯ. ಹೀಗಾಗಿ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ ಶಿವ ಶಂಕರ್ ಅಸು ನೀಗಿದ್ದಾರೆ. ಶಿವ ಶಂಕರ್ ಅವರ ಹಿರಿಯ ಪುತ್ರ, ಪತ್ನಿಗೂ ಕೂಡ ಕೊರೊನಾ ಸೋಂಕು ತಗುಲಿದೆ. ಅವರ ಪುತ್ರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಪತ್ನಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಶಿವ ಶಂಕರ್ ಅವರ ಆರ್ಥಿಕ ಸಮಸ್ಯೆ ಕೇಳಿದ ನಂತರದಲ್ಲಿ ತೆಲುಗು, ತಮಿಳು, ಹಿಂದಿ ಚಿತ್ರರಂಗದ ಕಲಾವಿದರು ಸಹಾಯಕ್ಕೆ ಧಾವಿಸಿದ್ದರು. ನಟ , ಮೆಗಾಸ್ಟಾರ್ , ಧನುಷ್ ಮೂವಿ ಆರ್ಟಿಸ್ಟ್ಸ್‌ ಅಸೋಸಿಯೇಶನ್ ಕೂಡ ಶಿವ ಶಂಕರ್‌ಗೆ ಸಹಾಯ ಮಾಡಿತ್ತು. 10 ಭಾಷೆಗಳಲ್ಲಿ 700ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದರು. 2009ರಲ್ಲಿ ತೆರೆ ಕಂಡಿದ್ದ ರಾಮ್ ಚರಣ್ ತೇಜ ನಟನೆಯ, ರಾಜಮೌಳಿ ನಿರ್ದೇಶನದ '' ಸಿನಿಮಾಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಶಿವ ಶಂಕರ್ ನಿಧನಕ್ಕೆ ತೆಲುಗು, ತಮಿಳು ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ. ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿ "ಕೊರಿಯೋಗ್ರಾಫರ್ ಶಿವ ಶಂಕರ್ ನಿಧನರಾದ ವಿಷಯ ಕೇಳಿ ದುಃಖವಾಯ್ತು. ಮಗಧೀರ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದು ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಸಂತಾಪಗಳು" ಎಂದು ಹೇಳಿದ್ದಾರೆ. ಆಸ್ಪತ್ರೆಯವರು ನವೆಂಬರ್ 29ಕ್ಕೆ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ. ನವೆಂಬರ್ 29ರಂದು Mahaprasthanam ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ.