16 ತಿಂಗಳ ಮಗಳ ಶವದ ಜತೆ ಪ್ರಯಾಣಿಸುತ್ತಿದ್ದ ದಂಪತಿ ಸೆರೆ : ಪಾಪಿ ತಂದೆ ಯಿಂದಲೇ ಕತ್ತು ಹಿಸುಕಿ ಕೊಲೆ

ತಂದೆ ಎಂದರೆ ಆಕಾಶ ಎನ್ನುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಅಂದರೆ ತಂದೆಗೆ ಪಂಚಪ್ರಾಣ. ಹೀಗೆ ಹೆಣ್ಣು ಮಗುವಿನ ಜೀವನದಲ್ಲಿ ಆದರ್ಶವಾಗಬೇಕಿದ್ದ ತಂದೆ ವಿಲನ್ ಆಗಿದ್ದಾನೆ. ಮಗುವಿಗೆ ಲೈಂಗಿಕ ಕಿರುಕುಳ ನೀಡಿ ಕೊಂದು ಹಾಕಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

16 ತಿಂಗಳ ಮಗಳ ಶವದ ಜತೆ ಪ್ರಯಾಣಿಸುತ್ತಿದ್ದ ದಂಪತಿ ಸೆರೆ : ಪಾಪಿ ತಂದೆ ಯಿಂದಲೇ ಕತ್ತು ಹಿಸುಕಿ ಕೊಲೆ
Linkup
ಮುಂಬಯಿ: ತಮ್ಮ 16 ತಿಂಗಳ ಹೆಣ್ಣುಮಗುವಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿ, ಮಗುವಿನ ಶವದೊಂದಿಗೆ ರೈಲಿನಲ್ಲಿ ಪ್ರಯಾಣಿಸು-ತ್ತಿದ್ದ ದಂಪತಿಯನ್ನು ಮಹಾರಾಷ್ಟ್ರದ ಸೋಲಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯು, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಪತ್ನಿ ಹಾಗೂ ಮಗನಿಗೆ ಬೆದರಿಕೆ ಹಾಕಿ ಬಾಯಿಮುಚ್ಚಿಸಿದ್ದಾನೆ. ನಂತರ ಮಗಳ ಅಂತ್ಯಸಂಸ್ಕಾರವನ್ನು ರಾಜಸ್ಥಾನದ ತಮ್ಮ ಊರಿನಲ್ಲಿಯೇ ನೆರವೇರಿಸಲು ಸಂಸಾರಸಮೇತ ಸಿಕಂದರಾಬಾದ್‌-ರಾಜ್‌ಕೋಟ್‌ ಎಕ್ಸ್‌ಪ್ರೆಸ್‌ ರೈಲು ಹತ್ತಿದ್ದಾನೆ. ಆರು ತಾಸಿಗೂ ಹೆಚ್ಚು ಕಾಲ ಮಗುವಿನಲ್ಲಿ ಯಾವುದೇ ಚಲನವಲನ ಇಲ್ಲದೇ ಇರುವುದನ್ನು ಗಮನಿಸಿದ ಪ್ರಯಾಣಿಕರು ಟಿಕೆಟ್‌ ತಪಾಸಕರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸೋಲಾಪುರ ಪೊಲೀಸರಿಗೂ ಮಾಹಿತಿ ತಲುಪಿತ್ತು. ರೈಲು ಸೋಲಾಪುರ ತಲುಪುತ್ತಿದ್ದಂತೆಯೇ ಪೊಲೀಸರು ಬಂದು ವಿಚಾರಿಸಿದಾಗ ಮಗು ಮೃತಪಟ್ಟಿರುವುದು ಗೊತ್ತಾಗಿದೆ. ದಂಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿಜ ಸಂಗತಿ ಬಯಲಿಗೆ ಬಂದಿದೆ. ಹೈದರಾ-ಬಾದ್‌ನಲ್ಲಿ ಮಗುವಿನ ಹತ್ಯೆ ನಡೆದ ಕಾರಣ ಪ್ರಕರಣವನ್ನು ಹೈದರಾಬಾದ್‌ಗೆ ವರ್ಗಾಯಿಸಲಾಗಿದೆ.