ಸಲ್ಮಾನ್ ಖಾನ್- ರಾಜಮೌಳಿ ಭೇಟಿಗೆ ಸಿಕ್ತು ಕಾರಣ; ಇದು ಸಿನಿಪ್ರಿಯರು ಥ್ರಿಲ್ ಆಗೋ ವಿಷಯ!

ಖ್ಯಾತ ನಿರ್ದೇಶಕ ರಾಜಮೌಳಿ ಅವರು ಈಚೆಗೆ ಬಾಲಿವುಡ್ 'ಸೂಪರ್ ಸ್ಟಾರ್' ಸಲ್ಮಾನ್ ಖಾನ್‌ ಅವರನ್ನು ಮುಂಬೈ ಫಿಲ್ಮ್‌ ಸಿಟಿಯಲ್ಲಿ ಭೇಟಿಯಾಗಿದ್ದರು. ಅದಕ್ಕೆ ಕಾರಣವೇನು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಸಲ್ಮಾನ್ ಖಾನ್- ರಾಜಮೌಳಿ ಭೇಟಿಗೆ ಸಿಕ್ತು ಕಾರಣ; ಇದು ಸಿನಿಪ್ರಿಯರು ಥ್ರಿಲ್ ಆಗೋ ವಿಷಯ!
Linkup
ಕೆಲ ದಿನಗಳ ಹಿಂದಷ್ಟೇ ಒಂದು ಸುದ್ದಿ ಬಲವಾಗಿ ಹರಿದಾಡಿತ್ತು. ಅದೇನೆಂದರೆ, ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ಅವರ ಪುತ್ರ ಕಾರ್ತಿಕೇಯ ಸಲ್ಮಾನ್ ಖಾನ್‌ರನ್ನು ಭೇಟಿಯಾಗಿದ್ದರು. ಬಾಲಿವುಡ್‌ ಸೂಪರ್‌ ಸ್ಟಾರ್‌ ನಟನನ್ನು ರಾಜಮೌಳಿ ಭೇಟಿಯಾಗಿದ್ದೇಕೆ? ಇಬ್ಬರು ಹೊಸ ಸಿನಿಮಾಕ್ಕೆ ಜೊತೆಯಾಗುತ್ತಿದ್ದಾರಾ ಅನ್ನೋ ಡೌಟುಗಳೆಲ್ಲ ಅನೇಕರಲ್ಲಿ ಮೂಡಿದ್ದವು. ಸಲ್ಮಾನ್-ರಾಜಮೌಳಿ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರೋದು ಕನ್ಪರ್ಮ್‌ ಅನ್ನೋ ಲೆವೆಲ್‌ಗೆ ನ್ಯೂಸ್ ಕೂಡ ಕೇಳಿಬಂದಿತ್ತು. ಆದರೆ, ಇದೀಗ ಆ ಭೇಟಿಯ ಬಗ್ಗೆ ಒಂದು ಸ್ಪಷ್ಟ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಸಲ್ಮಾನ್‌ರನ್ನು ರಾಜಮೌಳಿ ಭೇಟಿ ಮಾಡಿದ್ದರ ಹಿಂದೆ ಸಿನಿಮಾ ಮಾಡುವ ಉದ್ದೇಶವೇ ಇಲ್ಲ! ಪ್ರಿ-ರಿಲೀಸ್‌ ಇವೆಂಟ್‌ಗೆ ಸಲ್ಮಾನ್‌ ಅತಿಥಿ!ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. 5ಕ್ಕೂ ಅಧಿಕ ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿ ತೆರೆಕಾಣಲಿದೆ. ವಿಶ್ವಾದ್ಯಂತ ಸಾವಿರಾರು ಸ್ಕ್ರೀನ್‌ಗಳ ಮೇಲೆ ಸಿನಿಮಾ ಪ್ರದರ್ಶನ ಕಾಣುವುದು ಖಚಿತ. ಆ ಹಿನ್ನೆಲೆಯಲ್ಲಿ ಸಿನಿಮಾಕ್ಕೆ ದೊಡ್ಡಮಟ್ಟದ ಪ್ರಚಾರ ಕೂಡ ಅವಶ್ಯಕ. ಹಾಗಾಗಿಯೇ, ದುಬೈನಲ್ಲಿ ಚಿತ್ರದ ಪ್ರಿ-ರಿಲೀಸ್ ಇವೆಂಟ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಲ್ಮಾನ್ ಆಗಮಿಸಿದರೆ ಚೆನ್ನ ಎಂಬುದು ಇಡೀ ತಂಡದ ಆಸೆ. ಅದಕ್ಕಾಗಿಯೇ ಈ ಭೇಟಿ ಎನ್ನಲಾಗಿದೆ. ಏನಂದ್ರು?ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುವಂತೆ ಖುದ್ದಾಗಿ ರಾಜಮೌಳಿ ಅವರೇ ಸಲ್ಮಾನ್‌ಗೆ ಆಹ್ವಾನ ನೀಡಿದ್ದಾರೆ. ಮುಂಬೈ ಫಿಲ್ಮ್‌ ಸಿಟಿಗೆ ತೆರಳಿ ಅವರನ್ನು ಭೇಟಿಯಾಗಿದ್ದಾರೆ. ರಾಜಮೌಳಿಯ ಆಹ್ವಾನಕ್ಕೆ ಪೂರಕವಾಗಿ ಸ್ಪಂದಿಸಿರುವ ನಟ ಸಲ್ಮಾನ್ ಖಾನ್, ದುಬೈಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಪ್ರಿ-ರಿಲೀಸ್‌ ಇವೆಂಟ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ನೀಡಲಿದೆ. ಒಟ್ಟಿನಲ್ಲಿ ಈ ಇವೆಂಟ್‌ ಅನ್ನು ತುಂಬ ಅದ್ದೂರಿಯಾಗಿ ಮಾಡಬೇಕು ಎಂದು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಜನವರಿ 7ಕ್ಕೆ ಸಿನಿಮಾ ರಿಲೀಸ್ಅಂದಹಾಗೆ, 'ಆರ್‌ಆರ್‌ಆರ್' ಸಿನಿಮಾವು ಜನವರಿ 7ರಂದು ತೆರೆಗೆ ಬರಲಿದೆ. ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದ್ದು, ರಾಮ್ ಚರಣ್ ಮತ್ತು ಜೂ. ಎನ್‌ಟಿಆರ್ ಒಟ್ಟಿಗೆ ಮೊದಲ ಬಾರಿಗೆ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ 'ನಾಟು ನಾಟು..' ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇಬ್ಬರ ಸ್ಟೆಪ್‌ಗಳನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಡಿವಿವಿ ದಾನಯ್ಯ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಆಲಿಯಾ ಭಟ್, ಅಜಯ್ ದೇವಗನ್, ಸಮುದ್ರಖಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಾಡುಗಳಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಇನ್ನು, ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ಕೆವಿಎನ್ ಪ್ರೊಡಕ್ಷನ್ಸ್‌ ಪಡೆದುಕೊಂಡಿದೆ.