ಸತ್ಯೇಂದರ್ ಜೈನ್‌ಗೆ ಕೊಡಬೇಕಿತ್ತು ಪದ್ಮ ವಿಭೂಷಣ: ಕೇಜ್ರಿಗೆ ಸಹೋದ್ಯೋಗಿಯೇ ಭೂಷಣ!

ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಪರ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತೆ ಬ್ಯಾಟ್ ಬೀಸಿದ್ದಾರೆ. ಸತ್ಯೇಂದರ್ ಜೈನ್ ಅವರು ಮಾಡಿರುವ ಮಹತ್ಕಾರ್ಯಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸತ್ಯೇಂದರ್ ಜೈನ್ ಓರ್ವ ಅಪ್ಪಟ ದೇಶಭಕ್ತ. ಅವರು ದೆಹಲಿ ಜನತೆಗೆ 'ಮೊಹಲ್ಲಾ ಕ್ಲಿನಿಕ್'ನಂತಹ ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಸತ್ಯೇಂದರ್ ಜೈನ್‌ಗೆ ಕೊಡಬೇಕಿತ್ತು ಪದ್ಮ ವಿಭೂಷಣ: ಕೇಜ್ರಿಗೆ ಸಹೋದ್ಯೋಗಿಯೇ ಭೂಷಣ!
Linkup
ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಪರ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತೆ ಬ್ಯಾಟ್ ಬೀಸಿದ್ದಾರೆ. ಸತ್ಯೇಂದರ್ ಜೈನ್ ಅವರು ಮಾಡಿರುವ ಮಹತ್ಕಾರ್ಯಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸತ್ಯೇಂದರ್ ಜೈನ್ ಓರ್ವ ಅಪ್ಪಟ ದೇಶಭಕ್ತ. ಅವರು ದೆಹಲಿ ಜನತೆಗೆ 'ಮೊಹಲ್ಲಾ ಕ್ಲಿನಿಕ್'ನಂತಹ ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.