ವಿತ್ತೀಯ ಕೊರತೆ 4 ವರ್ಷಗಳಲ್ಲೇ ಕನಿಷ್ಠ, ಮೊದಲಾರ್ಧದಲ್ಲಿ ಬಜೆಟ್‌ ಅಂದಾಜಿನ ಶೇ. 35ಕ್ಕೆ ಇಳಿಕೆ

ಕೇಂದ್ರ ಸರಕಾರದ ವಿತ್ತೀಯ ಕೊರತೆ ಏಪ್ರಿಲ್‌ -ಸೆಪ್ಟೆಂಬರ್‌ ಅವಧಿಯಲ್ಲಿ ಕಳೆದ 4 ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾದ 5.26 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದ್ದು, 2021-22ರ ಬಜೆಟ್‌ ಅಂದಾಜಿನ ಶೇ.35ಕ್ಕೆ ತಗ್ಗಿದೆ.

ವಿತ್ತೀಯ ಕೊರತೆ 4 ವರ್ಷಗಳಲ್ಲೇ ಕನಿಷ್ಠ, ಮೊದಲಾರ್ಧದಲ್ಲಿ ಬಜೆಟ್‌ ಅಂದಾಜಿನ ಶೇ. 35ಕ್ಕೆ ಇಳಿಕೆ
Linkup
ಹೊಸದಿಲ್ಲಿ: ಕೇಂದ್ರ ಸರಕಾರದ ವಿತ್ತೀಯ ಕೊರತೆ ಏಪ್ರಿಲ್‌ -ಸೆಪ್ಟೆಂಬರ್‌ ಅವಧಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾದ 5.26 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. 2021-22ರ ಸಾಲಿನ ಮೊದಲಾರ್ಧದಲ್ಲಿ ಬಜೆಟ್‌ ಅಂದಾಜಿನ ಶೇ.35ಕ್ಕೆ ತಗ್ಗಿದೆ. ತೆರಿಗೆ ಆದಾಯದಲ್ಲಿ ಸುಧಾರಣೆ ಕಂಡು ಬಂದಿರುವುದು ಇದಕ್ಕೆ ಕಾರಣ. ಕಳೆದ ವರ್ಷ ಇದೇ ಅವಧಿಯಲ್ಲಿ ವಿತ್ತೀಯ ಕೊರತೆ 9.1 ಲಕ್ಷ ಕೋಟಿ ರೂ. ಅಥವಾ ಬಜೆಟ್‌ ಅಂದಾಜಿನ ಶೇ.114 ಆಗಿತ್ತು. ಸರಕಾರ ತೆರಿಗೆ ಸಂಗ್ರಹ ಗುರಿಯ ಬಜೆಟ್‌ ಅಂದಾಜಿನ ಶೇ.60 ಅನ್ನು ಪ್ರಸಕ್ತ ಸಾಲಿನ ಮೊದಲ 6 ತಿಂಗಳಿನಲ್ಲಿ ಸಂಗ್ರಹಿಸುವಲ್ಲಿ ಸಫಲವಾಗಿದೆ ಎಂದು ಸರಕಾರದ ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ. ಹೀಗಾಗಿ ಆರ್ಥಿಕ ಚೇತರಿಕೆಗೆ ಅಗತ್ಯವಿರುವ ಸಾರ್ವಜನಿಕ ವೆಚ್ಚಕ್ಕೆ ಬೆಂಬಲ ಲಭಿಸಿದಂತಾಗಿದೆ. ಪ್ರಸಕ್ತ ಸಾಲಿನ ಮೊದಲ 6 ತಿಂಗಳುಗಳಲ್ಲಿ ಕಳೆದ ಸಾಲಿನ ಅವಧಿಯನ್ನು ಹೋಲಿಸಿದರೆ ಕಂದಾಯ ಸಂಗ್ರಹ ಬಹುತೇಕ ಇಮ್ಮಡಿಯಾಗಿದೆ. 10.8 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5.5 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಹೀಗಾಗಿ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನ ಮೊದಲಾರ್ಧದ ವಿತ್ತೀಯ ಕೊರತೆಯು ಕೋವಿಡ್‌ ಪೂರ್ವದ 2020-20ರ ಮೊದಲಾರ್ಧದ ಮಟ್ಟಕ್ಕಿಂತಲೂ ಕಡಿಮೆಯಾಗಿದೆ.

ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಸರಕಾರದ ಒಟ್ಟಾರೆ ಕಂದಾಯ ಸಂಗ್ರಹದಲ್ಲಿ 2021ರ ಸೆಪ್ಟೆಂಬರ್‌ ವೇಳೆಗೆ ಶೇ.50 ಏರಿಕೆಯಾಗಿದೆ ಎಂದು ಐಸಿಆರ್‌ಎಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ತಿಳಿಸಿದ್ದಾರೆ. ಕಾರ್ಪೊರೇಟ್‌ ತೆರಿಗೆ, ಜಿಎಸ್‌ಟಿ, ಕಸ್ಟಮ್ಸ್‌ ಮತ್ತು ಅಬಕಾರಿ ಸುಂಕದ ಸಂಗ್ರಹ ಏರಿಕೆಯಾಗಿದೆ. ಕೋವಿಡ್‌ ಲಸಿಕೆ ವಿತರಣೆ ವ್ಯಾಪಕವಾಗಿ ಇರುವುದರಿಂದ ಜನತೆಯಲ್ಲಿ ವಿಶ್ವಾಸ ವೃದ್ಧಿಸುವ, ಖರ್ಚು ವೆಚ್ಚಗಳ ಬೇಡಿಕೆ ಚೇತರಿಸುವ ನಿರೀಕ್ಷೆ ಇದೆ. ಇದರಿಂದಲೂ ತೆರಿಗೆ ಸಂಗ್ರಹ ವೃದ್ಧಿಸಲಿದೆ. 2021-22ರಲ್ಲಿ ಇಡೀ ಸಾಲಿಗೆ 13.8 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ. 6.00-6.5 ವಿತ್ತೀಯ ಕೊರತೆಯನ್ನು ನಿರೀಕ್ಷಿಸಲಾಗಿದೆ. ಮೂಲ ಸೌಕರ್ಯ ಉದ್ದಿಮೆ ಕುಂಠಿತ ಹೊಸದಿಲ್ಲಿ: ಭಾರತದ ಮೂಲ ಸೌಕರ್ಯ ವಲಯದ ಉದ್ದಿಮೆಗಳ ಬೆಳವಣಿಗೆ ಕಳೆದ ಸೆಪ್ಟೆಂಬರ್‌ನಲ್ಲಿ 7 ತಿಂಗಳಿನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಶೇ.4.4ರ ಅಲ್ಪ ಬೆಳವಣಿಗೆ ಸಾಧಿಸಿತ್ತು. ಆಗಸ್ಟ್‌ನಲ್ಲಿ ಶೇ.11.5ರ ಪ್ರಗತಿ ದಾಖಲಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಸೆಮಿಕಂಡಕ್ಟರ್‌ ಚಿಪ್‌ಗಳ ಕೊರತೆಯು ಉದ್ಯಮಕ್ಕೆ ಸವಾಲಾಗಿ ಪರಿಣಮಿಸಿದೆ. ಎಂಟು ಪ್ರಮುಖ ಮೂಲ ಸೌಕರ್ಯ ವಲಯಗಳಲ್ಲಿ 5ರಲ್ಲಿ ಬೆಳವಣಿಗೆ ಮಂದಗತಿಯಲ್ಲಿತ್ತು. 8 ಪ್ರಮುಖ ವಲಯಗಳಲ್ಲಿ ಕಲ್ಲಿದ್ದಲು, ಉಕ್ಕು, ಸಿಮೆಂಟ್‌, ರಸಗೊಬ್ಬರ, ವಿದ್ಯುತ್‌ ಉತ್ಪಾದನೆ, ನೈಸರ್ಗಿಕ ಅನಿಲ, ಸಂಸ್ಕರಿತ ಉತ್ರಪನ್ನ, ಕಚ್ಚಾ ತೈಲ ಇದೆ. ಅತಿವೃಷ್ಟಿಯ ಪರಿಣಾಮ ಗಣಿಗಾರಿಕೆ ಮತ್ತು ನಿರ್ಮಾಣ ವಲಯದ ಚಟುವಟಿಕೆಗಳು ಕುಗ್ಗಿತ್ತು. ಕಲ್ಲಿದ್ದಲು (ಶೇ.8.1), ಸಂಸ್ಕರಿತ ಉತ್ಪನ್ನ (ಶೇ.6), ಉಕ್ಕು (ಶೇ.3), ಸಿಮೆಂಟ್‌ (ಶೇ.10.8), ವಿದ್ಯುತ್‌ (ಶೇ.0.3) ಕೆಳಮಟ್ಟದ ಪ್ರಗತಿ ದಾಖಲಿಸಿದೆ. ನೈಸರ್ಗಿಕ ಅನಿಲ (ಶೇ.27.5), ರಸಗೊಬ್ಬರ (ಶೇ.0.02) ವಲಯದಲ್ಲಿ ಧನಾತ್ಮಕ ಪ್ರಗತಿ ದಾಖಲಾಗಿತ್ತು.